ಒಲವು
ಬೇಕು
ಬದುಕಲು,
ದಿಟವದು
ಒಲವಿಲ್ಲದ
ಬಾಳು
ಬರಡು ,
ಒಲವೇ
ಜೀವನ .
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸದಾ ಜಗೃತವಾಗಿರಿ*
ಸದಾ ಜಾಗೃತವಾಗಿರಿ
ಮೈಯಲ್ಲಾ ಕಣ್ಣಾಗಿರಿ
ಕಷ್ಟಗಳು ಸಾಮಾನ್ಯ
ಹತ್ತುವಾಗ ಗಿರಿ|
ತುತ್ತ ತುದಿ ಏರಿದಾಗ
ಸಂತಸದಿಂದಿರಿ
ಆದರೆ ...
ತುತ್ತು ಕೊಟ್ಟವಳ
ಮರೆಯದಿರಿ....||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
*ತಗೊಂಡಿದ್ದೀರಾ?*
ಎದುರುಗಡೆ ಸಿಕ್ಕಿದವರಿಗೆಲ್ಲ
ಸುಮ್ಮನೆ ಕೇಳಿದೆ
ತಗೊಂಡಿದ್ದೀರಾ?|
90% ಜನ ಅಂದರು
ವೈನ್ ಶಾಪ್ ಬಂದ್ ಆಗಿದೆ
ನೀವೇ ನೋಡಿದ್ದೀರಾ ||
5% ಜನರೆಂದರು ನಾವು
ಎಣ್ಣೆ ಹಾಕಲ್ಲ ಏನ್
ಇಂಗ್ ಕೇಳ್ತಿದ್ದೀರಾ?|
5% ಜನ ಮಾತ್ರ ಕೇಳಿದರು
ಲಸಿಕೆ ಸ್ಟಾಕ್ ಇದ್ದಾಗ
ಪ್ಲೀಸ್ ತಿಳಿಸ್ತೀರಾ?||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು