10 ಏಪ್ರಿಲ್ 2021

ಲಸಿಕೆ.


 



*ಲಸಿಕೆ*


ಆಧಾರವಿಲ್ಲದ ವದಂತಿಗಳನ್ನು

ನಂಬಿ ಮುಂಜಾಗ್ರತಾ ಕ್ರಮಕ್ಕೆ

ಏಕೆ ಹಿಂಜರಿಕೆ|

ನಮ್ಮ ಜೀವ ಮತ್ತು

ಜೀವನವನ್ನು ಉಳಿಸಿಕೊಳ್ಳಲು

ಇಂದೇ ಹಾಕಿಸಿಕೊಳ್ಳೋಣ

ಕೊರೋನ ಲಸಿಕೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮಾದರಿ ಮಾನವ .ಹನಿ


 


*ಮಾದರಿ ಮಾನವ*


ನಾವೂ ಮಾದರಿ

ಮಾನವನಾಗಬೇಕಾದರೆ

ಯಜಮಾನನಾಗಿದ್ದರೂ 

ಇರಬೇಕು

ಕ್ಷಮಾಗುಣ|

ಬಡವನಾಗಿದ್ದರೂ

ಇರಬೇಕು

ದಾನಗುಣ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



09 ಏಪ್ರಿಲ್ 2021

ಬರ ಹನಿ.


 



*ಬರ?*


ರೈತರ ಉತ್ಪನ್ನಗಳಿಗೆ

ಬೆಲೆ ಕಡಿಮೆ

ಈಗ ಗಾಯದ ಮೇಲೆ ಬರೆ

ಗಗನ ಮುಖಿಯಾಗಿದೆ

ರಸಗೊಬ್ಬರ|

ಹೀಗೆ ಮುಂದುವರೆದರೆ

ಕೃಷಿಕ ಕೃಷವಾಗಿ 

ಎದುರಿಸಬೇಕಾಗಬಹುದು

ಆಹಾರದ ಬರ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ಸಾಧಿಸಲು .ಹನಿ




ಎನೂ ಕಳೆದುಕೊಂಡಿಲ್ಲ

ನೀ ರೋಧಿಸಲು |

ಕಲಿಯಬೇಕಿದೆ

ಕಷ್ಟಗಳಿದ್ದರೂ 

ನಗುತಾ ಜೀವಿಸಲು||

ಜನಮಿಡಿತ ೭.೪.೨೧