04 ಮಾರ್ಚ್ 2021

ಒಣಸಂತೆ. ಹನಿ

 *ಒಣಸಂತೆ*


ಸ್ಪಂದನೆಗಳೇ  ಇಲ್ಲದ

ಜಾಗದಲ್ಲಿ 

ಭಾವನೆಗಳ ವ್ಯಕ್ತಪಡಿಸಿದರೆ 

ಅದು ಒಣ ಸಂತೆ |

ಬಂಡೆಗಳ ಮೇಲೆ ನೀರು

ಸುರಿದಂತೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

03 ಮಾರ್ಚ್ 2021

ಬೆಳವಣಿಗೆ .

 ದಿಡೀರ್ ಬೆಳೆದು ನಿಲ್ಲಲಾಗುವುದಿಲ್ಲ

ಬೆಳೆಸುವವರು  ಬಹಳಿಲ್ಲ 

ಬೆಳೆವ ಚಿಗುರನ್ನೇ ಚಿವುಟುವರಲ್ಲ

ಬೆಳೆದು ನಿಂತಾಗ ನಿನ್ನ ಸಹಾಯ

ಬೇಡುತ ಬರುವರು ಎಲ್ಲಾ.

02 ಮಾರ್ಚ್ 2021

ಗಾಳಿಪಟ .ಹನಿ

 


*ಗಾಳಿಪಟ*


ನಾವೆಂದೂ ಆಗಲಾರದು

ಬೇರೆಯವರು ನಿಯಂತ್ರಿಸುವ

ಗಾಳಿಪಟ|

ಆಟ ಸಾಕೆನಿಸಿದಾಗ

ಬರ್ರೆಂದು ಕೆಳಕ್ಕೆಳೆದು

ತೋರಿಸಿಬಿಡುವರು

ಪ್ರಪಾತ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 ಮಾರ್ಚ್ 2021

ಜೀವನ .ಹನಿ

 





*ಜೀವನ*


ಯಾರಿಗೂ ಸಾದ್ಯವಿಲ್ಲ

ಜೀವನ ನಡೆಸಲು 

ಬರೆದಿಟ್ಟಂತೆ|

ಸನ್ಮಾರ್ಗದಿ ನಡೆದು 

ಸಾಧಿಸಿದರೆ ಜೀವಿಸಬಹುದು

ಬರೆದಿಡುವಂತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

          

28 ಫೆಬ್ರವರಿ 2021

ವಿಜ್ಞಾನದ ಸದುಪಯೋಗ .ಹನಿ


 *ವಿಜ್ಞಾನದ ಸದುಪಯೋಗ*


ವಿಜ್ಞಾನವೇ ಬದಲಾವಣೆಗೆ ಕಾರಣ

ಜ್ಞಾನ ಅದರ ಬೇರು 

ಎಂಬುದನ್ನು ನೆನಪಿನಲ್ಲಿಡೋಣ

ವಿಜ್ಞಾನವನ್ನು ಸದುಪಯೋಗ 

ಪಡಿಸಿಕೊಳ್ಳೋಣ

ಅಜ್ಞಾನವನ್ನು ತೊಲಗಿಸೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ