This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
25 ಮಾರ್ಚ್ 2022
24 ಮಾರ್ಚ್ 2022
ಪರಮಾಣು
ಪರಮಾಣು.
ಅರಿಯುವುದು ಹೇಗೆ
ಹರಿ ನಿನ್ನ ಮಹಿಮೆಯೆ
ಅರಿವಿಲ್ಲದವ ನಾನು|
ಸದಾ ನಿನ್ನ ಕೃಪೆಯಿರಲಿ
ಪರಮ ಆತ್ಮ
ನಾನೊಂದು ಪರಮಾಣು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
23 ಮಾರ್ಚ್ 2022
ಗುರಿ
ಗುರಿ.
ಮನುಜನಾಗಿ ಹುಟ್ಟಿದ
ಮೇಲೆ ಏನಾದರೂ
ಸಾಧಿಸಬೇಕಾದರೆ
ಇರಲೇಬೇಕೊಂದು ಗುರಿ|
ಇಲ್ಲದಿದ್ದರೆ ನಾವು
ತಿಂದುಂಡು ಕಾಲ ಕಳೆಯುತ್ತಾ
ಅಲೆದಾಡುತ್ತೇವೆ ಹಿಂಬಾಲಿಸಿದಂತೆ
ಒಂದನ್ನು ಮತ್ತೊಂದು ಕುರಿ||
ಅಜ್ಞಾನದ ಗವಿ .
*ಇತಿಹಾಸ*
ಪ್ರಕೃತಿಯ ಕುಂಚದಿ ಚಿತ್ರಿಸಿ
ಜನರ ಅನಂದ ಅರಳಿಸುವ
ಮಹಾನ್ ಕಾಲಾಕಾರನಾಗಿದ್ದ
ಅಡಾಲ್ಫ್ ಹಿಟ್ಲರ್|
ಪರಿಸ್ಥಿತಿ, ಪ್ರಚೋದಿತ ಪರಿಸರ ,ಅಜ್ಞಾನ
ಮುಂತಾದವುಗಳಿಂದ
ಇತಿಹಾಸದಲ್ಲಿ ಸ್ಥಾನ
ಪಡೆದ ಜಗದ ಕ್ರೂರ ಕಿಲ್ಲರ್||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
21 ಮಾರ್ಚ್ 2022
ಕವಿತೆ .ಭಾಗ್ಯದೇವತೆ.
ಕವಿತೆ
ನೀನೆನ್ನ ಭಾಗ್ಯದೇವತೆ.
ಮನದಲಿರುವ
ನೋವು ನಲಿವುಗಳಿಗೆ
ಪದಗಳಾಗುವೆ.
ನೋಡಿದ ಒಳಿತು
ಕೆಡುಕುಗಳನು
ಚಿತ್ರಿಸಲು ನೆರವಾಗುವೆ.
ಸಮಾಜದ ಓರೆಕೋರೆಗಳ
ತಿಳಿದು ತಿಳಿಸಲು
ಮಾಧ್ಯಮವಾಗುವೆ .
ನೀನಿಲ್ಲದಿರೆ
ನನಗೇಕೋ ದುಗುಡ
ನೀ ನನ್ನಲೇ ಸದಾ
ನೆಲೆಸೆಂದು ಬಯಸುವೆ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.