*ಪ್ರದಕ್ಷಿಣೆ*
ಮದುವೆಗೂ ಮುನ್ನ
ಮಗ ಅಮ್ಮನ ಸುತ್ತ
ಹಾಕುತ್ತಿದ್ದ ಪ್ರದಕ್ಷಿಣೆ|
ಮದುವೆಯಾದ ಮೇಲೆ
ಬೇರೆ ಮನೆ ಮಾಡಿದ
ಹೆಂಡತಿಯ ಪ್ರೀತಿಗೆ
ಹಾಕಲು ದಕ್ಷಿಣೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಪ್ರದಕ್ಷಿಣೆ*
ಮದುವೆಗೂ ಮುನ್ನ
ಮಗ ಅಮ್ಮನ ಸುತ್ತ
ಹಾಕುತ್ತಿದ್ದ ಪ್ರದಕ್ಷಿಣೆ|
ಮದುವೆಯಾದ ಮೇಲೆ
ಬೇರೆ ಮನೆ ಮಾಡಿದ
ಹೆಂಡತಿಯ ಪ್ರೀತಿಗೆ
ಹಾಕಲು ದಕ್ಷಿಣೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಹಾಯ್ಕುಗಳು
೧
ಗಾಳಿಗೂ ಕೋಪ
ತಿರ್ರನೆ ತಿರುಗಿದೆ
ಸುಂಟರಗಾಳಿ
೨
ಸೂತ್ರದಾರನ
ಗಾಳಿಪಟ ಹಾರಾಟ
ಗಗನಚುಂಬಿ
೩
ಜೀವಾನಿಲವು
ರೊಚ್ಚಿಗೆದ್ದಿದೆ ನೋಡು
ಸುಂಟರಗಾಳಿ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ಹನಿ*
ಅಧಿಕಾರ ,ಅಂತಸ್ತು
ಸಂಪತ್ತು, ಅದೃಷ್ಟದಿಂದ
ಲಭಿಸಿದರೆ ಏರುವುದು
ಮಧ|
ನಮ್ಮ ಬುದ್ಧಿವಂತಿಕೆಯಿಂದ
ಕಷ್ಟಪಟ್ಟು ಗಳಿಸಿದ
ಅಲ್ಪದರಲ್ಲೂ ಸಿಗುವುದು
ಆನಂದ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ರಾಷ್ಟ್ರೀಯ ಮತದಾರರ ದಿನದ ಕುರಿತಾದ ಸಿಹಿಜೀವಿ ಯ ಹನಿಗಳು*
೧
ಮಾರಿಕೊಳ್ಳದಿರು
ನೋಟಿಗಾಗಿ ನಿನ್ನ
ಓಟನ್ನು |
ಅರ್ಹ ಅಭ್ಯರ್ಥಿಗೆ
ತಪ್ಪದೇ ಒತ್ತು
ಇ. ವಿ .ಎಮ್
ಬಟನ್ನು ||
೨
ಮಾಡೋಣ ನಾವೆಲ್ಲರೂ
ಕಡ್ಡಾಯವಾಗಿ
ಮತದಾನ|
ಎತ್ತಿ ಹಿಡಿಯೋಣ
ನಮ್ಮ ಸಂವಿಧಾನ||
೩
ನಿಮ್ಮ ಮತವನ್ನು
ಯಾರಿಗೂ
ಮಾರಬೇಡಿ|
ಆಮಿಷಗಳಿಗೆ ಮರುಳಾಗಿ
ಯಾಮಾರಬೇಡಿ||
೪
ಮತದಾನ ಮಾಡಿ,
ಮಾಡಿದರೆ ನಮ್ಮ
ಕರ್ತವ್ಯ|
ಸುಂದರವಾಗುವುದು
ನಮ್ಮ ಭವಿತವ್ಯ||
೫
ತಪ್ಪದೇ ನಾವು
ಚಲಾವಣೆ ಮಾಡಿದರೆ
ನಮ್ಮ ಮತ|
ಮುಂದೆ ನಮ್ಮ
ನಾಡಿಗಾಗುವುದು ಹಿತ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ