31 ಮೇ 2020

ಸಿಹಿಜೀವಿಯ ಹಾಯ್ಕುಗಳು (ಇಂದು ವಿಶ್ವ ತಂಬಾಕು ರಹಿತ ದಿನ)


*ಸಿಹಿಜೀವಿಯ
ಹಾಯ್ಕುಗಳು*

(ಇಂದು ವಿಶ್ವ ತಂಬಾಕು ವಿರೋಧಿ ದಿನ)

೨೬

ಮೇ ಮೂವತ್ತೊಂದು
ತೀರ್ಮಾನ ಕೈಗೊಳ್ಳೋಣ
ತಂಬಾಕು ಬೇಡ.

೨೭

ಹೊಗೆಯ ಸಂಗ
ಹೊಗೆ ಹಾಕಿಸಿ ಕೊಳ್ಳಿ
ಶಾಶ್ವತವಾಗಿ .

೨೮


ಮೋಜು ಮಾಡಲು
ಹೊಗೆ ಸೊಪ್ಪಿನ ಸಂಗ
ಪ್ರಾಣಕ್ಕೆ ಭಂಗ.

೨೯

ಜಗಿಯದಿರಿ
ಗುಟ್ಕಾ ಪಾನ್ ಮಸಾಲ
ನಿಮ್ಮೊಳಿತಿಗೆ.

೩೦

ಬೀಡಿಯೇತಕೆ
ಬಿಟ್ಟು ಬಿಡಿರಿ ಇಂದೇ
ಬೀದಿ ಸುಂದರ.

೩೧

ಅತಿಯಾದರೆ
ಸಿಗರೇಟ್ ಸೇವನೆ
ಸಿಗದು ಜೀವ.

೩೨

ತಂಬಾಕು ಏಕೆ
ತುಂಬು ಜೀವನ ಸಾಗಿಸು
ಜೀವ ಅಮೂಲ್ಯ

*ಸಿ ಜಿ ವೆಂಕಟೇಶ್ವರ*

30 ಮೇ 2020

*ಪ್ರಗತಿ ಟಿ ವಿ ಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಮಾರ್ಗದರ್ಶನ ಮಾಡಿದ ಕ್ಷಣಗಳು*




*ಪ್ರಗತಿ ಟಿ ವಿ ಯಲ್ಲಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ  ಮಾರ್ಗದರ್ಶನ ಮಾಡಿದ ಕ್ಷಣಗಳು* 

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗವನ

ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ನನ್ನ ಹನಿಗವನ

ರವಿಚಂದ್ರನ್ ಹುಟ್ಟು ಹಬ್ಬಕ್ಕೆ ಹಾಯ್ಕುಗಳು

*ಕ್ರೇಜಿ ಸ್ಟಾರ್ ಗೆ ಹಾಯ್ಕುಗಳ ಶುಭಾಶಯಗಳು*



ಪ್ರೇಮಲೋಕದ
ಹಠವಾದಿ ನಾಯಕ
ಕನಸುಗಾರ




ರವಿ ಚಂದಿರ
ಒಂದೆಡೆಯೆ ಇದ್ದರೆ
ರವಿಚಂದ್ರನ್



ಚಿತ್ರಗಳಲ್ಲಿ
ಹಂಸ ರವಿ ಮಿಲನ
ಸಂಗೀತೋತ್ಸವ


*ಸಿ‌ ಜಿ ವೆಂಕಟೇಶ್ವರ*
*ತುಮಕೂರು*

29 ಮೇ 2020

ಅಂಬಿ ಹುಟ್ಟು ಹಬ್ಬಕ್ಕೆ ಹಾಯ್ಕುಗಳು


#ಕಲಿಯುಗ_ಕರ್ಣನ
ಹುಟ್ಟು ಹಬ್ಬಕ್ಕೆ
#ಸಿಹಿಜೀವಿಯ_ಹಾಯ್ಕುಗಳು
ಚಿತ್ರ ಕೃಪೆ: ಎಸ್ ತಿಪ್ಪೇಸ್ವಾಮಿ ಅಣ್ಣ
೧೪
ದಾನಕೆ ಮುಂದು
ಕಲಿಯುಗದ ಕರ್ಣ
ನೆನೆಪು ಇಂದು.
೧೫.
ಯಾರೇನೆಂದರು
ನೆನೆಯುವುದು ಮನ
ಅಂಬರೀಶನ .
೧೬
ಅಮರವಾದೆ
ಕಲಿಯುಗದ ಕರ್ಣ
ರೆಬಲ್ ಸ್ಟಾರ್.
೧೭
ಮಾತು ಒರಟು
ನೇರ ನುಡಿಯ ಧೀರ
ಅಂಬರೀಷಣ್ಣ.
೧೮
ಅಮರನಾಥ.
ಸುಮಗಳಲಿ ಇಂದು
ಅಭಿಷೇಕವೆ?
ಸಿ‌ ಜಿ ವೆಂಕಟೇಶ್ವರ
ತುಮಕೂರು