This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
11 ಮೇ 2019
05 ಮೇ 2019
ಪ್ರಕೃತಿಯೇ ದೈವವು (ಕವನ)
*ಪ್ರಕೃತಿಯೆ ದೈವವು*
ಧರಣಿಯಲಿ ಭರಣಿಯಾಗಮನದಿ
ಹಸಿರೊದ್ದ ಭೂಮಾತೆಯ
ನೋಡಲು ನಯನಾನಂದ
ತರುಲತೆಗಳ ತೋರಣ
ಭೂಮಾತೆಗೆ ಅಲಂಕಾರ
ತರಣಿಯ ಸೊಬಗೇ ಅಂದ
ಪುಷ್ಪಗಳ ಮತ್ತುವ
ಪತಂಗಗಳ ಹಿಂಡು
ಪುಷ್ಪಪಾತ್ರೆಯಾದ ಭುವಿಯೇ ಚೆಂದ
ಸುಜಲದ ಹಿನ್ನಲೆಯಲ್ಲಿ
ಸುಫಲವ ಹೊಂದಿರುವ
ಕಣ್ಣಿಗೌತಣವ ನೀಡುವ ಧರೆಯೇ ಅಂದ
ಭುವಿಗೂ ಬಾನಿಗೂ
ಹಬ್ಬಿದ ಇಂದ್ರಚಾಪದ ವರ್ಣಗಳು
ಭೂಮಿಗೆ ಅಲಂಕಾರ
ಪ್ರಕೃತಿಗೆ ಸಮವಿಲ್ಲ
ಪ್ರಕೃತಿಯೆ ದೈವವು
ಪ್ರಕೃತಿಯು ನಮ್ಮ ಜೀವವು
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಧರಣಿಯಲಿ ಭರಣಿಯಾಗಮನದಿ
ಹಸಿರೊದ್ದ ಭೂಮಾತೆಯ
ನೋಡಲು ನಯನಾನಂದ
ತರುಲತೆಗಳ ತೋರಣ
ಭೂಮಾತೆಗೆ ಅಲಂಕಾರ
ತರಣಿಯ ಸೊಬಗೇ ಅಂದ
ಪುಷ್ಪಗಳ ಮತ್ತುವ
ಪತಂಗಗಳ ಹಿಂಡು
ಪುಷ್ಪಪಾತ್ರೆಯಾದ ಭುವಿಯೇ ಚೆಂದ
ಸುಜಲದ ಹಿನ್ನಲೆಯಲ್ಲಿ
ಸುಫಲವ ಹೊಂದಿರುವ
ಕಣ್ಣಿಗೌತಣವ ನೀಡುವ ಧರೆಯೇ ಅಂದ
ಭುವಿಗೂ ಬಾನಿಗೂ
ಹಬ್ಬಿದ ಇಂದ್ರಚಾಪದ ವರ್ಣಗಳು
ಭೂಮಿಗೆ ಅಲಂಕಾರ
ಪ್ರಕೃತಿಗೆ ಸಮವಿಲ್ಲ
ಪ್ರಕೃತಿಯೆ ದೈವವು
ಪ್ರಕೃತಿಯು ನಮ್ಮ ಜೀವವು
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
04 ಮೇ 2019
03 ಮೇ 2019
ಶ್ರೀದೇವಿ ತನಯನ ವಚನಗಳು
*ಶ್ರೀದೇವಿ ತನಯನ ವಚನಗಳು*
*ವಚನ೧*
ನೂರೂರು ಸುತ್ತಿ
ನೂರ್ಕಾಸು ಕಳೆದು
ನದಿಗಳಲಿ ಮಿಂದು
ದೇವ ದೇವತೆಗಳ
ನೋಡುವ ಬದಲು
ನಿನ್ನ ಅಂತರಂಗದ
ರಂಗನ ನೆನೆಯೆಂದ
ಶ್ರೀದೇವಿತನಯ
*ವಚನ೨*
ನಾನು ನನ್ನದು
ನಮ್ಮವರು ಎಂಬ
ಬಂಧನದಿ ಬಿದ್ದು
ನರಳದಿರು ನೀ
ಬನ್ನಪಡುವಾಗ
ಬಂಧುಗಳ ಸದ್ದಿಲ್ಲ
ಕರೆಯದೇ ಬಂದು
ಕಾಪಾಡುವ ನಮ್ಮ
ಹರಿಯಲಿ ಮನಸಿಡು
ಎಂದ ಶ್ರೀದೇವಿತನಯ
*ವಚನ೩*
ವಂಚಕರಿಹರು ಜಗದಲಿ
ಸಂಚುಮಾಡಿ ಮೆರೆವರು
ಕೊಂಚವೂ ವಿಚಲಿತನಾಗಬೇಡ
ಮಿಂಚಿನಂತೆ ಕಾರ್ಯಮಾಡುತ
ಅಂಜದಲೆ ಮುನ್ನಡೆ
ನಂಜನುಂಡ ಹರ ಕಾಯವನು
ಶ್ರೀದೇವಿತನಯನ ದಯವಿವುದು
*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*
*ವಚನ೧*
ನೂರೂರು ಸುತ್ತಿ
ನೂರ್ಕಾಸು ಕಳೆದು
ನದಿಗಳಲಿ ಮಿಂದು
ದೇವ ದೇವತೆಗಳ
ನೋಡುವ ಬದಲು
ನಿನ್ನ ಅಂತರಂಗದ
ರಂಗನ ನೆನೆಯೆಂದ
ಶ್ರೀದೇವಿತನಯ
*ವಚನ೨*
ನಾನು ನನ್ನದು
ನಮ್ಮವರು ಎಂಬ
ಬಂಧನದಿ ಬಿದ್ದು
ನರಳದಿರು ನೀ
ಬನ್ನಪಡುವಾಗ
ಬಂಧುಗಳ ಸದ್ದಿಲ್ಲ
ಕರೆಯದೇ ಬಂದು
ಕಾಪಾಡುವ ನಮ್ಮ
ಹರಿಯಲಿ ಮನಸಿಡು
ಎಂದ ಶ್ರೀದೇವಿತನಯ
*ವಚನ೩*
ವಂಚಕರಿಹರು ಜಗದಲಿ
ಸಂಚುಮಾಡಿ ಮೆರೆವರು
ಕೊಂಚವೂ ವಿಚಲಿತನಾಗಬೇಡ
ಮಿಂಚಿನಂತೆ ಕಾರ್ಯಮಾಡುತ
ಅಂಜದಲೆ ಮುನ್ನಡೆ
ನಂಜನುಂಡ ಹರ ಕಾಯವನು
ಶ್ರೀದೇವಿತನಯನ ದಯವಿವುದು
*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)