01 March 2022

ಅರ್ಧ ಸತ್ಯ .ಪುಸ್ತಕ ವಿಮರ್ಶೆ.


 



ಅರ್ಧ ಸತ್ಯ . ವಿಮರ್ಶೆ


ಮಾಕೋನಹಳ್ಳಿ ವಿನಯ್ ಮಾಧವ್ ರವರ ಅರ್ಧ ಸತ್ಯ ಒಂದು ಉತ್ತಮ ಕಥಾ ಸಂಕಲನ .ಇವರ ಕಥಾ ಸಂಕಲನ ಓದುತ್ತಾ ಅಪರಾದ ಜಗತ್ತಿನ ಪೂರ್ಣ ಸತ್ಯ ನಮಗೆ ಗೋಚರವಾಗುತ್ತದೆ .ಕೆಲ ಗಣ್ಯ ವ್ಯಕ್ತಿಗಳ ಮತ್ತು ಸ್ವಘೋಷಿತ ಮಾಹಾನ್ ನಾಯಕರ ಗೋಸುಂಬೆ ತನ ಬೆಳಕಿಗೆ ಬರುತ್ತದೆ.


ವಿನಯ್ ಮಾಧವ್ ರವರು

ಹುಟ್ಟಿದ್ದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ.ಮೈಸೂರು, ಕಾರ್ಕಳ, ಉಡುಪಿ ಮತ್ತು ಶಿವಮೊಗ್ಗಗಳಲ್ಲಿ ಶಾಲಾ, ಕಾಲೇಜುಗಳಿಗೆ ಹೋಗಿ,ಓದಿದರೂ 

ಪದವಿ ವಂಚಿತರಾದರು.1989ರಲ್ಲೇ ಬೆಂಗಳೂರಿಗೆ ಬಂದರು.

 1994ರವರೆಗೆ ಪತ್ರಿಕೋದ್ಯಮದ ಬಗ್ಗೆ ಯಾವುದೇ ಜ್ಞಾನವಿಲ್ಲದವರು. 1996ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಇಂಗ್ಲಿಷ್ ಪತ್ರಕರ್ತನಾಗಿ ಕೆಲಸ ಆರಂಭಿಸಿದರು . ಅವರ ಪತ್ರಕರ್ತರ ಜೀವನದ  ಅನುಭವದ ಮೂಸೆಯಲ್ಲಿ ಅರ್ಧ ಸತ್ಯ ಪುಸ್ತಕದ ಬಹುತೇಕ ಕಥೆಗಳು ಮೂಡಿ ಬಂದಿವೆ .

ಸೆಲೆಬ್ರಿಟಿ ಕ್ರೈಂ ರಿಪೋರ್ಟರ್. ಆದವರು  ಯಾವ ಸುದ್ದಿಯ ಹಿಂದೆ ಬೇಕಾದರೂ ಹೋಗಬಹುದು .ಯಾವ ಅಪರಾಧ ಸುದ್ದಿಯೂ ಅವರ  ಕಣ್ಣಪ್ಪಿಸಿ ಹೋಗೋಕೆ ಸಾಧ್ಯನೇ ಇಲ್ಲ. ವೇಶ್ಯಾವಾಟಿಕೆ, ಡ್ರಗ್ಸ್, ಕೊಲೆ, ಅಂಡರ್ವರ್ಲ್ಡ್ ಯಾವುದಾದರೂ ಸರಿ. ಯಾವ ಪೋಲಿಸ್ ಅಧಿಕಾರಿಯ ಹತ್ತಿರ ಬೇಕಾದರೂ ಘಂಟೆಗಟ್ಟಲೆ ಕುಳಿತು ಮಾತನಾಡಿ, ತಮಗೆ ಬೇಕಾದ ಸುದ್ದಿ ಹೊರ ತರಬಲ್ಲರು .ಆ ಹಿನ್ನೆಲೆಯಲ್ಲಿ ಈ ಕಥಾಸಂಕಲನ  ಗಮನ ಸೆಳೆಯುತ್ತದೆ.


 ಅರ್ಧ ಸತ್ಯ ಕಥೆಯ ಇಡೀ ಕಥಾ ಸಂಕಲನದ ದೊಡ್ಡ ಕಥೆ ಮತ್ತು ಕುತೂಹಲಕರ ತಿರುವುಗಳನ್ನು ಹೊಂದಿದ ಆಸಕ್ತಿ ಕೆರಳಿಸುವ ಕಥೆಯಾಗಿದೆ. ಈ ಕಥೆಯನ್ನು ಓದುವಾಗ ಒರ್ವ ವಿವಾದಿತ ಸ್ವಾಮೀಜಿಯವರು ನಮ್ಮ ಕಣ್ಣ ಮುಂದೆ ಬಂದರೆ ಅದು ಮಾಧ್ಯಮಗಳು ಆ ಕಾಲದಲ್ಲಿ ನೀಡಿದ ಬಹುವಾದ ಪ್ರಚಾರವೂ ಒಂದು ಕಾರಣ. ಇನ್ನುಳಿದ ಕಥೆಗಳಾದ ಪ್ರಮೋಶನ್,ಪರೀಕ್ಷೆ, ಕನಿಷ್ಠ ಬಿಲ್ಲೆ,ಅತ್ಯಾಚಾರದ ಸುಳಿ,ನಕ್ಷತ್ರಗಳು, ಮುಂತಾದವು ಉತ್ತಮ ನಿರೂಪಣೆ ಮತ್ತು ತಂತ್ರಗಳ ಮೂಲಕ ಗಮನ ಸೆಳೆಯುತ್ತವೆ.



ಪುಸ್ತಕದ ಹೆಸರು: ಅರ್ಧ ಸತ್ಯ 

  ಲೇಖಕರು:ಮಾಕೋನಹಳ್ಳಿ ವಿನಯ್ ಮಾಧವ್

 ಬೆಲೆ:150.00

ಪ್ರಕಾಶಕರು : ಸಾವನ್ನ ಪ್ರಕಾಶನ 


No comments: