24 August 2021

ನೋವುಗಳು ನೂರಿವೆ....



ನನ್ನ ಕಣ್ಣಂಚಲಿ

 ಇಳಿಯುತಿವೆ ನಾಲ್ಕು ಹನಿ

 ಕಾಣಲಾರಿರಿ ನೀವು

 ನನ್ನ ಮನದ ದನಿ. 


ನೋವುಗಳು ನೂರಿವೆ

 ಹೇಳಲಾರೆನು ಎಲ್ಲರಿಗೆ

ನುಂಗಿರುವೆ ಸಾವಿರ

 ಅವಮಾನಗಳು ಗೊತ್ತು ಅವನಿಗೆ

 

ಜೀವನವೇ ಆಟವೆಂಬುದು

 ನನಗೆ ಮೊದಲು ತಿಳಿದಿರಲಿಲ್ಲ

 ನಾಟಕದ ಮಂದಿಯ ಆಟವನ್ನು

 ದಿನವೂ ವೀಕ್ಷಿತಿರುವೆನಲ್ಲ  


ಬಾಳೆಂಬ ನನ್ನ ಬಾಳೆಲೆ

 ಮುಳ್ಳಿನ ಮೇಲಿದೆ

 ಹರಿಯದೆ ಬಿಡಿಸಿಕೊಳ್ಳುವೆ

 ಮನದಲಿ ಆತ್ಮವಿಶ್ವಾಸವಿದೆ. 


ಸಿಹಿಜೀವಿ

 ಸಿ ಜಿ ವೆಂಕಟೇಶ್ವರ. 

 

No comments: