22 May 2021

ಗಜಲ್ .


 *ಗಜಲ್*


ಹಸಿದ ಜೀವಗಳಿಗೆ  ಅನ್ನ ನೀಡಿ

ನೊಂದವರಿಗೆ ಸಾಂತ್ವನವನ್ನ ನೀಡಿ


ಉಳ್ಳವರಿಗೆ ಬಹುಮಹಡಿಯಲಿ ವಾಸ

ಮನೆಯಿಲ್ಲದವರಿಗೆ ಸೂರನ್ನ ನೀಡಿ.


ಬಟ್ಟೆಯಿದ್ದರೂ ದಿಗಂಬರರು ನೋಡಿಲ್ಲಿ

ಮರ್ಯಾದಸ್ತರಿಗೆ  ವಸನವನ್ನ ನೀಡಿ.


ಕಲಿತರೂ ಕತ್ತಲಲಿ ತೊಳಲುತಿಹರಲ್ಲ 

ಅಂಧಕಾರಲ್ಲಿರುವವರಿಗೆ ಬೆಳಕನ್ನ ನೀಡಿ.


"ಸಿಹಿಜೀವಿ" ಗಳಿಗೆ ಸಂಕಟವಿಹುದಿಲ್ಲಿ

ಅಶಕ್ತರಿಗೆ  ಸಹಾಯಹಸ್ತವನ್ನ ನೀಡಿ 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: