02 May 2021

ಕಾಲಾಯ ತಸ್ಮೈ ನಮಃ .ನ್ಯಾನೋ ಕಥೆ


 


ನ್ಯಾನೋ ಕಥೆ


*ಕಾಲಾಯ ತಸ್ಮೈ ನಮಃ*


ಅಂದೊಂದು ದಿನ "ನೀವು ಕೆಳ ಜಾತಿಯವರು ಅಗೋ ಅಲ್ಲಿದೆ ನೋಡು ಬ್ಯಾರೆ ತಟ್ಟೆ ,ಲೋಟ ತಗಾ ಊಟ ಹಾಕ್ತಾರೆ ಉಂಡು ,ತೊಳ್ದು ಅಲ್ಲೇ ಇಕ್ಕು ಅಂದಿದ್ದರು ಸಾಹುಕಾರ್.

ಇಂದು ಕರೋನ ಪಾಸಿಟಿವ್ ಬಂದ ಧಣಿಗಳಿಗೆ ತೋಟದ ಮನೆಯಲ್ಲಿ ಒಬ್ಬರನ್ನೇ ಇಟ್ಟು ದೂರದಿಂದಲೇ  ಊಟ ನೀಡಿ " ನಿಮ್ಮ ತಟ್ಟೆ ನೀವೇ ತೊಳೆದು , ಅಲ್ಲೇ ಇಟ್ಕೊಳ್ಳಿ ,ನಾಳೆ ತಂದು ಅದ್ರಲ್ಲೇ ಊಟ ಹಾಕ್ತೀನಿ" ಎಂದು ದೂರದಿಂದಲೇ ತಟ್ಟೆಗೆ ಚಪಾತಿ ಚಟ್ನಿ ಹಾಕಿ ಹೋದರು ಸಾಹುಕಾರ್ ಸೊಸೆ.


ದೂರದಿಂದ ಇದನ್ನು ನೋಡಿದ ಕೆಳ ವರ್ಗದ ಮಾರಪ್ಪ ,ಎಲ್ಲರಿಗೂ ಒಂದು ಕಾಲ ಬರುತ್ತೆ ಅಂತ ಯಾರೋ ಅಂದಿದ್ರು ಅದು ಇದೆನಾ? ಎಂದು ತನ್ನಲ್ಲೇ ಪ್ರಶ್ನೆ ಹಾಕಿಕೊಂಡನು....


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು



No comments: