02 May 2021

ಮಾತುಕತೆ .ನ್ಯಾನೋ ಕಥೆ


 


ನ್ಯಾನೋ ಕಥೆ 


*ಮಾತುಕತೆ*


ಇಬ್ಬರ ನಡುವಿನ ಕೋಪ ಕಡಿಮೆಯಾಗಿರಲಿಲ್ಲ ,

ನಾಲ್ಕು ದಿನವಾದರೂ ಒಬ್ಬರಿಗೊಬ್ಬರು ಕನಿಷ್ಠ ಮುಖವನ್ನು ಸಹ ನೋಡಿರಲಿಲ್ಲ ಮೊದಲಾಗಿದ್ದರೆ ಎಷ್ಟೇ ಜಗಳವಾಡಿದ್ದರೂ ಅರ್ಧಗಂಟೆಯೊಳಗೆ "ಯಾಕೋ ತಲೆ ನೋವು ಟೀ ಮಾಡು ಚಿನ್ನ" ಎಂದು ರವಿ ಕೇಳಿದಾಗ "ಬೇಕಾದ್ರೆ ಬಂದು ಮಾಡಿಕೊಂಡು ಕುಡಿ" ಎಂದು ಕರಗದ ಸಿಟ್ಟಿನಿಂದ ಹೇಳಿದರೂ ಹತ್ತು ನಿಮಿಷಗಳ ಬಳಿಕ ಬಂದು ನೊರೆ ಹಾಲಿನ ಕಾಫಿ ಕೊಟ್ಟ ಉಷಾ " ಹೇಗಿದೆ ಕಾಫಿ ಎಂದು ಮುಖ ಊದಿಸಿಕೊಂಡು " ಕೇಳುತ್ತಿದ್ದಳು " ಆಹಾ... ಅಮೃತ ಚಿನ್ನ" ....

ಈಗೆ ಮಾತುಕತೆ ಮುಂದುವರಿದು ಮೋಡ ಕವಿದ ವಾತಾವರಣವು ತಿಳಿಯಾಗಿ ಇಬ್ಬರ ಮನವೆಂಬ ಆಗಸ ಶುಭ್ರವಾಗುತ್ತಿತ್ತು .


ಆದರೆ ಈ ಬಾರಿ ಮುನಿಸು ನಾಲ್ಕು ದಿನಗಳಿಗಿಂತ ವಿಸ್ತರಿಸಿ ಮುಂದುವರೆದಿತ್ತು ,

ಅಂದು ಸಂಜೆ ಉಷಾಳ ತಂದೆ ಊರಿಂದ ಬಂದರು, ದಂಪತಿಗಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು . ಅವರಿಬ್ಬರೂ ಮುನಿಸು ಮರೆತು ಪರಸ್ಪರ ಮಾತನಾಡಲಾರಂಭಿಸಿದರು , ರಾತ್ರಿಯ ಊಟದ ಬಳಿಕ " ನನಗೆ ಪ್ರಯಾಣದ ಆಯಾಸ ಬೇಗ ಮಲಗುವೆ "ಎಂದು ರಾಯರು ಮಲಗಿದರು ನಾವೂ ಮಲಗುವೆವು ಎಂದು ಕೋಣೆಗೆ ಹೋದ ದಂಪತಿಗಳು ನಾಲ್ಕು ದಿನದಿಂದ ಆಡದೇ ಉಳಿದ ಮಾತುಗಳನ್ನು ಒಂದೇ ದಿನ ಮಾತನಾಡಿದರು ಅವರ ಜೊತೆ ಮಂಚವೂ ತುಸು ಜೋರಾಗಿಯೇ ಮಾತನಾಡುವ ಸದ್ದು ಹೊರಗೇನೂ ಕೇಳಿಸಲಿಲ್ಲ.......



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: