22 May 2021

ಬಹುಗುಣರಿಗೆ ೩ ಹನಿಗಳ ನಮನ


 



*ಬಹುಗುಣರಿಗೆ ಸಿಹಿಜೀವಿಯ ಹನಿ ನಮನ*



*ಬಹುಗುಣ*


ಸಿಗುತ್ತಿಲ್ಲ ಇಂದು ನಮಗೆ

ಆಮ್ಲಜನಕ ಎಷ್ಟು

ಕೊಟ್ಟರೂ ಹಣ|

ಏಕೆಂದರೆ ಮರಗಳ

ಉಳಿಸಲಿಲ್ಲ ಹೇಳಿದಂತೆ

ಸುಂದರ ಲಾಲ್ ಬಹುಗುಣ||


*ಮನವಿ*


ಮರ ಕಡಿವುದು, ಪರಿಸರ

ಹಾಳು ಮಾಡುವುದು

ಒಂದೇ ಎರಡೇ

ನಮ್ಮಲ್ಲಿವೆ ನೂರಾರು

ದುರ್ಗುಣ|

ನಿಮ್ಮಲ್ಲಿರುವ ಒಂದಾದರೂ

ಒಳ್ಳೆಯ ಗುಣ ಕೊಡಿ

ಸುಂದರಲಾಲ್ ಬಹುಗುಣ||


*ಬಳುವಳಿ*


ಪರಿಸರ ಸಂರಕ್ಷಣೆ

ಮಾಡಲು ಸುಂದರ

ಲಾಲರು ಹಮ್ಮಿಕೊಂಡಿದ್ದರು

ಅಪ್ಪಿಕೋ ಚಳುವಳಿ|

ಅವರ ಆತ್ಮಕ್ಕೆ ಶಾಂತಿ

ಕೋರುವುದಾರೆ 

ಈಗಿರುವ ಮರಗಳ 

ಉಳಿಸಿ ಮುಂದಿನ 

ಪೀಳಿಗೆಗೆ ‌ನೀಡೋಣ

ಬಳುವಳಿ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

No comments: