11 July 2018

ಇಂದು ವಿಶ್ವ ಜನಸಂಖ್ಯಾ ದಿನ ಅದರ ಪ್ರಯುಕ್ತ ಈ ಹನಿಗಳು*



                   *ಇಂದು ವಿಶ್ವ ಜನಸಂಖ್ಯಾ ದಿನ ಅದರ ಪ್ರಯುಕ್ತ ಈ ಹನಿಗಳು*

*೧*

*ಯಾರು*

ಶಿಕ್ಷಕರು ಕೇಳಿದರು
ನಮ್ಮ ದೇಶದ
ಜನಸಂಖ್ಯೆ ಹೆಚ್ಚಳಕ್ಕೆ
ಕಾರಾಣರಾರು?
ಗುಂಡ ಉತ್ತರಿಸಿದ
ಆರಲ್ಲ ಸಾರ್
ನೂರಾರು ,ಸಾವಿರಾರು.

*೨*

*ಕಲ್ಯಾಣ*

ಜನಸಂಖ್ಯೆ ನಿಯಂತ್ರಣಕ್ಕೆ
ಒಂದೇ ಪರಿಹಾರ
ಕುಟುಂಬ ಕಲ್ಯಾಣ
ಆಗಲೇಬೇಕು
ಕನ್ಯೆ ಹುಡುಕುತ್ತಿದ್ದ
ಹುಡುಗನೆಂದ
ಹೌದು ಅಗಲೇಬೇಕು
ಕುಟುಂಬಕ್ಕೆ ಮೊದಲು
ಕಲ್ಯಾಣವಾಗಲೇಬೇಕು

*೩*


*ಮೊದಲ ಸ್ಥಾನ*

ಆರು ಮಕ್ಕಳ ಪಡೆದವ
ಹೇಳಿದ ಜನಸಂಖ್ಯೆ
ಹೆಚ್ಚಳಕ್ಕೆ ಕಾರಣ ನಾನೇನಾ?
ಯಜಮಾನರು ಹೇಳಿದರು
ನೀನು ಹೀಗೆ ಮಾಡಿದರೆ
ಜನಸಂಖ್ಯೆಯುಲ್ಲಿ   ಭಾರತ
ಹಿಂದೆ ಹಾಕುತ್ತೆ ಚೀನಾನಾ.


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*


No comments: