03 March 2018

*ಬದುಕಲು ಬಿಡಿ* (ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)

*ಬದುಕಲು ಬಿಡಿ*
(ವಿಶ್ವ ವನ್ಯಜೀವಿ ದಿನದ ಪ್ರಯುಕ್ತ ನನ್ನ ಕವನ)


ನಮಗೂ ಹಕ್ಕಿದೆ ಬಾಳಲು
ಭುವಿ ನಮಗೂ ಸೇರಿದ್ದು
ನಮ್ಮನೆಲ್ಲ  ಕೊಲ್ಲಲು
ಯಾರು ನಿಮಗೆ ಹೇಳಿದ್ದು

ನಾವಿರುವೆವು ಕಾಡಲಿ
ಅದಕೆ ಕೊಡಲಿ ಬೀಸುವಿರಿ
ನಾವು ನಾಡಿಗೆ ಬಂದರೆ
ಬೊಬ್ಬೆ ಹೊಡೆಯುವಿರಿ

ಚರ್ಮ ಹಲ್ಲು ದಂತಕೆ
ನಮ್ಮೆಲ್ಲರ ಕೊಲ್ಲುವಿರಿ
ನಮ್ಮ ಸಂತತಿ ಉಳಿಸಲು
ಯೋಜನೆ  ಮಾಡುವಿರಿ

ಅತಿಯಾಸೆ ಏಕೆ ನಿಮಗೆ
ನಮ್ಮ ಪಾಡಿಗೆ ನಮ್ಮ ಬಿಡಿ
ನಿಮ್ಮ ಆಸೆಗೆ ಮಿತಿ ಇರಲಿ
ನಮಗೂ ಬದುಕಲು ಬಿಡಿ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




No comments: