26 March 2018

ಗಜ಼ಲ್ ೩೪ (ಏನಾಗಿತ್ತು)


*ಗಜ಼ಲ್ ೩೪*

ಜೀವನ ಸವಿಯುವ ಮೊದಲು ಲೋಕ ತ್ಯಜಿಸಲು ಏನಾಗಿತ್ತು
ಜೀವನೀಡಿದವರ ತೊರೆದು ಹಾರಿ ಹೋಗಲು ಏನಾಗಿತ್ತು

ಮೀಸೆ ಮೂಡುವ ಮೊದಲು ಪ್ರೀತಿ ಪ್ರೇಮದ ಅಮಲು
ಹೆತ್ತವರ ಆಸೆಗಳ ಮಣ್ಣು ಪಾಲು ಮಾಡಿ ತೆರಳಲು ಏನಾಗಿತ್ತು

ಉಜ್ವಲವಾದ ಭವಿಷ್ಯದ ಕನಸ ಕಂಡ ಜನ್ಮದಾತರು
ಕನಸುಗಳಿಗೆ ಕೊಳ್ಳಿ ಇಟ್ಟು ಹೇಡಿಗಳಂತೆ ಸಾಯಲು ಏನಾಗಿತ್ತು

ತಾಳಿದವನು ಬಾಳಿಯಾನು ಎಂದರು ಅನುಭಾವಿ ಗಳು
ಆಕರ್ಷಣೆಯ ತೊರೆದು  ಕ್ಷಣ ಕಾಲ ಯೋಚಿಸಲು ಏನಾಗಿತ್ತು

ಯುವಮನಸುಗಳ ಜಾಗೃತಗೊಳಿಸಲು‌ ಸೀಜೀವಿಯ ಆಸೆ
ಹಿರಿಯರ ತಿಳುವಳಿಕೆ ಮಾತುಗಳ ಕೇಳಲು‌ ಏನಾಗಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: