01 March 2018

*ಬರುವುದು ಒಳ್ಳೆದಿನ*(ಕವನ) ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಕವನ‌




*ಬರುವುದು ಒಳ್ಳೆದಿನ*(ಕವನ)

ಓದಿ ಬರೆವ ಕಾಲದಿ
ಮನ ಏಕೆ ನಿನಗೆ ಚಂಚಲವು
ಸವಿ ಕನಸ ಕಾಣೋ ವೇಳೆಯಲಿ
ಏಕೆ ಪ್ರೀತಿ ಗೊಡವೆಯು |ಪ|

ಈ ಕಾಲ ಸಿಗದು ನಾಳೆ
ಮೈಮರೆಯೆ ಬಾಳೆ ಗೋಳು
ಇದ ತಿಳಿದು ನೀನು ಅರಿತು ಬಾಳು
ಮುಂದೆ ಇಹುದು ನಾಕವು |೧|

ಹೆತ್ತವರ ಕನಸನ್ನು
ನನಸು ಮಾಡು ನೀನು
ಸುತ್ತಲಿನ ಜಗವನ್ನು
ಮೊದಲು ತಿಳಿ ನೀನು |೨|

ಹಿಡಿದಿಡು ನಿನ್ನ ಮನವ
ತರಿದಿಡು ಕೆಟ್ಟ ಚಟವ
ಹಿಡಿತವಿರಲಿ ಮನ
ಬರುವುದು ಒಳ್ಳೆ ದಿನ |೩|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*..

No comments: