30 March 2018

ಗಜ಼ಲ್೩೬ (ಮಾಡಬಹುದಿತ್ತು)

*ಗಜ಼ಲ್ ೩೬*

ಓ ದೇವಾ ಧರೆಯನು ನಂದನವನವನಾಗಿ  ಮಾಡಬಹುದಿತ್ತು
ಧರಣಿಯನು ಸುಂದರ ಸ್ವರ್ಗವನಾಗಿ ಮಾಡಬಹುದಿತ್ತು

ಅತಿ ವೃಷ್ಟಿ ಅನಾವೃಷ್ಟಿ ಬರಗಾಲ ಭೂಕಂಪಗಳೇಕೆ ಮಾಡಿಸುವೆ
ಕಾಲ ಕಾಲಕೆ ಮಳೆ ಬೆಳೆನೀಡಿ ಸುಭಿಕ್ಷ  ನಾಡಾಗಿ ಮಾಡಬಹುದಿತ್ತು

ಮೋಸ ಕೊಲೆ ಸುಲಿಗೆ ಸುಳ್ಳು ಪೊಳ್ಳು ಮನಸುಗಳನೇಕಿತ್ತೆ
ನಿಷ್ಕಲ್ಮಶ ಮನಸುಗಳ ಸೃಷ್ಟಿಸಿ ರಾಮರಾಜ್ಯವಾಗಿ ಮಾಡಬಹುದಿತ್ತು

ಮೇಲು ಕೀಳು ಬಡವ ಬಲ್ಲಿದ ಜಾತಿ ಮತಗಳು ಏಕೆ ಬೇಕು
ಎಲ್ಲರಿಗೆ ಸಮಬಾಳು ನೀಡಿ ಏಕತೆಯ ಗೂಡಾಗಿ ಮಾಡಬಹುದಿತ್ತು

ಪರಿಸರ ಅಸಮತೋಲನ ಪರಿಸರ ಮಾಲಿನ್ಯ ಬೇಕೆ
ಸೀಜೀವಿಯ ಕನಸಿನ  ಆದರ್ಶ ಇಳೆಯಾಗಿ ಮಾಡಬಹುದಿತ್ತು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: