15 March 2018

ಎಲ್ಲಿದೆ ದಾರಿ ( ಕವನ)

*ಎಲ್ಲಿದೆ ದಾರಿ?*


ನಿನ್ನ ಕರ್ಮವನು ಮಾಡು
ಮುಕ್ತಿ ದೊರೆವುದು ಎಂದರು
ಭಕುತಿಯಲಿ  ಮಿಂದೇಳು
ಮುಕ್ತಿ ಸಿಗುವುದೆಂದರು ಕೆಲವರು.

ಜ್ಞಾನ ಸಂಪಾದಿಸು ನೀನು
ಆತ್ಮ ಸಾಕ್ಷಾತ್ಕಾರವಾಗುವುದೆಂದರು
ಧ್ಯೇಯವಿರಲಿ ಬಾಳಿಗೆ ದುಡಿಯುತಿರು
ವಿಜಯಿಯಾಗುವೆ ಎಂದರು ತಿಳಿದವರು.

ಭಕ್ತಿಯಿಂದಲೇ ದಿನವೂ ಪೂಜಿಸಿದೆ
ಜ್ಞಾನ ಸಂಪಾದನೆ ಮಾಡುತಲೇ ಇರುವೆ
ಕಾಯಕವೇ ಕೈಲಾಸವೆಂದು ದುಡಿದೆ
ಆದರೂ ಮುಕ್ತಿಯ ಸುಳಿವಿಲ್ಲ.

ಇಂದು ಎಲ್ಲ ಕಾರ್ಯ ಶೀಘ್ರವಾಗಬೇಕು
ಅಡ್ಡದಾರಿಯಾದರೂ ಅದೇ ಬೇಕು
ತಿಳಿದವರಿದ್ದರೆ ಈಗಲೇ ಹೇಳಿ
ಮುಕ್ತಿ ಪಡೆಯಲು ಎಲ್ಲಿದೆ ಅಡ್ಡ ದಾರಿ ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



No comments: