10 March 2018

ಹನಿ ಹನಿ ಇಬ್ಬನಿ ವಾಟ್ಸಪ್ ಕವಿ ಬಳಗದ ಯಶೋಗಾಥೆ (ಲೇಖನ)

*ಹನಿ ಹನಿ‌ ಇಬ್ಬನಿಯ  ವಾಟ್ಸಪ್ ಗುಂಪಿನ ಯಶೋಗಾಥೆ*

ವಾಟ್ಸಪ್ ಅನ್ನು ಕೇವಲ ಮನರಂಜನೆಯ ಮತ್ತು ಟೈಂಪಾಸ್ ಮಾಡಲು ಬಳಸುವ ಈ ಕಾಲದಲ್ಲಿ ಅದರ ಬಳಕೆಯಿಂದ ಸಾಹಿತ್ಯ ಸೇವೆ ಮಾಡಬಹುದು ಎಂಬುದನ್ನು ಸದ್ದಿಲ್ಲದೇ ಹಲವು ವಾಟ್ಸಪ್ ಕವಿ ಬಳಗಗಳು ಮಾಡಿತೋರಿಸುತ್ತಿವೆ ಅವುಗಳಲ್ಲಿ ಮುಂಚೂಣಿಯಲ್ಲಿರುವ ಗುಂಪು "ಹನಿ ಹನಿ ಇಬ್ಬನಿ ಕವಿ ಬಳಗ "

ಒಂದು ಕಾಲದಲ್ಲಿ ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತ ,ಕವನ ದೊಡ್ಡ ಕವಿಗಳ ಸ್ವತ್ತು ಎಂದು ನಂಬಲಾಗಿತ್ತು ಅದನ್ನು ಸುಳ್ಳು ಮಾಡಲು ಸಾಮಾನ್ಯರಲ್ಲಿರುವ ಕವಿ ಭಾವನೆಗಳನ್ನು ಬಡಿದೆಬ್ಬಿಸಲು *ಹನಿ ಹನಿ ಇಬ್ಬನಿ* ಬಳಗ ಟೊಂಕ ಕಟ್ಟಿ ನಿಂತಿದೆ


ಖುಷಿ ಕೃಷ್ಣ ರವರ ನೇತೃತ್ವದಲ್ಲಿ ಮುನ್ನೆಡಯುತ್ತಿರುವ ಈ ಬಳಗಕ್ಕೆ ಚಂದ್ರು ರವರು ಬೆನ್ನೆಲುಬಾಗಿ ನಿಂತು‌ ನಾಡಿನಾದ್ಯಂತ ಸಾಹಿತ್ಯದ ಕಂಪನ್ನು ಪಸರಿಸುತ್ತಿದ್ದಾರೆ.ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕನ್ನಡ ಕಟ್ಟುವ ಕೆಲಸವನ್ನು. ಒಂದೊಂದು ಪ್ರಸಾರಾಂಗ ಮಾಡಬಹುದಾದ ಪ್ರಕಟಣಾ ಕೆಲಸವನ್ನು ಸದ್ದಿಲ್ಲದೆ ಮಾಡಿ ನೂರಾರು ಉದಯೋನ್ಮುಖ ಸಾಹಿತಿಗಳನ್ನು ಬೆಳೆಸುವ ಕಾರ್ಯದಲ್ಲಿ ಬಳಗ ಯಶಸ್ವಿಯಾಗಿ ಮಾಡುತ್ತಿದೆ.
ಈಗಾಗಲೇ ಬಳಗವು
೧ *ಹನಿ ಹನಿ ಇಬ್ಬನಿ*
೨ *ಹನಿಹನಿ ಕಾವ್ಯಕಹಾನಿ*
೩*ಹನಿಹನಿ ತುಂತುರು*
೪ *ಹನಿಹನಿಭಾವಸಿಂಚನ*
೫ * ನನ್ನ ಪ್ರೀತಿಯ ಕೋತಿ ಮರಿ ಭಾಗ ೧*
೬ * ಹನಿ ಹನಿ ಕಾವ್ಯಧಾರೆ*
ಎಂಬ ಆರು ರತ್ನ ಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದೆ

ಮುಂದುವರೆದು ಬಳಗವು ರಾಜ್ಯಾದ್ಯಂತ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹ ಮಾಡಲು ಮೂರು ರಾಜ್ಯ ಮಟ್ಟದ ಕವಿಗೋಷ್ಟಿಗಳ ಹಮ್ಮಿಕೊಂಡು ಯಶಸ್ವಿಯಾಗಿ ಮುನ್ನೆಡೆದಿದೆ.
ಬಳಗದ ಮುಂದಿನ ಯೋಜನೆಯನ್ನು ಕರಾರುವಕ್ಕಾಗಿ ಮಾಡಿದ ಅಡ್ಮಿನ್ ದ್ವಯರು  ಮುಂದಿನ ದಿನಗಳಲ್ಲಿ ಭಾವಗೀತೆಗಳ ಸಿ.ಡಿ  ಮಾಡುವ  ಕೆಲಸವನ್ನು ಸದ್ದಿಲ್ಲದೆ ಪ್ರಾರಂಭಿಸಿದರು. ಮುಂದಿನ ದಿನಗಳಲ್ಲಿ ಬಳಗದ. ಕವಿಗಳ ವೈಯಕ್ತಿಕ ಕವಿಗಳ ಪುಸ್ತಕ ಪ್ರಕಾಶನ ಮಾಡುವ ಮಹೋನ್ನತ ಕನಸ ಕಂಡಿದ್ದು ಆ ನಿಟ್ಟಿನಲ್ಲಿ ಯಶಸ್ವಿಯಾಗಲು‌ ನಾನು  ಹಾರೈಸುವೆನು.

ಹನಿ ಹನಿ ಇಬ್ಬನಿ ಬಳಗ  ಹತ್ತರಲ್ಲಿ ಹನ್ನೊಂದಾಗದೇ ವಿಶೇಷವಾಗಿ ಬೆಳೆಯಲು‌ ಕಾರಣವಾಗಿರುವ *ದಶಾಂಶಗಳು*

೧ ಬಳಗಕ್ಕೆ ತನ್ನದೇ ಆದ ಗುರಿ ಇದ್ದು ಅದರಂತೆ ಮುನ್ನಡೆಯುತ್ತಿದೆ.

೨ ನೀನು ಬೆಳೆ ಮತ್ತು ಇತರರನ್ನು ಮಾರ್ಗದರ್ಶನ ಮಾಡಿ ಬೆಳೆಸು ಎಂಬ ಸದುದ್ದೇಶವನ್ನು ಹೊಂದಿದೆ

೩ ಬಳಗದ ಒಳಗೆ ಒಂದು ಆಂತರಿಕ ಶಿಸ್ತು ಎಲ್ಲರನ್ನು ಹಿಡಿದಿಟ್ಟಿದೆ

೪ ಬಳಗ ಕೇವಲ ಬಳಗವಲ್ಲ , ಒಂದು ಕುಟುಂಬದ ವಾತಾವರಣವು ನಿರ್ಮಾಣವಾಗಿದೆ ನೋವು ನಲಿವುಗಳಲ್ಲಿ ಬಂಧುಗಳಿಗಿಂತ ಹೆಚ್ಚಾಗಿ ಸ್ಪಂದಿಸುವ ಗುಣ

೫ ಗೊಂದಲಕ್ಕೆ ಅವಕಾಶ ನೀಡದೆ ..ಕವನ ಬರೆಯಲು  *ಹನಿಹನಿ ಇಬ್ಬನಿ*, ಅನಿಸಿಕೆ ವಿಮರ್ಶೆಗೆ *ಚಿಂತಕರ ಚಾವಡಿ*, ತೀರ್ಪು ನೀಡಲು *ತೀರ್ಪುಗಾರರ ಬಳಗ*, ಕೊನೆಗೆ ಮುಕ್ತ ಮಾತುಕತೆಗೆ *ತಾರೆಗಳ ತೋಟ* . ಎಂಬ ಸಮಾನಾಂತರ ಗುಂಪುಗಳು ಸಕ್ರೀಯವಾಗಿವೆ .

 ೬ ದಿನದ ಅಡ್ಮಿನ್, ವಾರದ ಅಡ್ಮಿನ್ ಎಂಬ ವಿಧವಿಧ ಪದನಾಮಗಳ ಸೃಷ್ಟಿಸುವ ಮೂಲಕ ಜವಾಬ್ದಾರಿ ಯ ವಿಕೇಂದ್ರೀಕರಣ ಮಾಡಲಾಗಿದೆ.

  ೭ ದಿನಕ್ಕೊಂದು *ಶೀರ್ಷಿಕೆ* ನೀಡುವುದರ ಮೂಲಕ  ಬರೆಯಲು  ಪ್ರೋತ್ಸಾಹ ಮತ್ತು ಪ್ರೇರಣೆ ನೀಡುತ್ತಿರುವುದು

೮ ವಾರದ ಸ್ಪರ್ಧೆ ಮಾಡಿ ಬಹುಮಾನ ನೀಡಿ ಬರೆಯಲು ಕವಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು.

೯ ಕೇವಲ ಕವನ ಬರೆಯಲು ಪ್ರೋತ್ಸಾಹ ನೀಡದೆ ಸಾಹಿತ್ಯದ ವಿವಿಧ ಪ್ರಕಾರಗಳಾದ ಭಾವಗೀತೆ, ಕಿರುಗಥೆ, ಗಜ಼ಲ್, ಶಾಹಿರಿ,ಹಾಯ್ಕು ಲೇಖನ ಬರೆಯಲು ಪ್ರೋತ್ಸಾಹ ನೀಡುತ್ತಿರುವುದು

೧೦  ಬಿ.ಆರ್ ಲಕ್ಷಣರಾವ್ . ಎಸ್ ಜಿ‌ ಸಿದ್ದ ರಾಮಯ್ಯ ಮುಂತಾದ ಕವಿಗಳೊಂದಿಗೆ ಸಂವಾದ ನಡೆಸಿ ಕವಿಗಳಿಗೆ ಪ್ರೇರಣೆ ನೀಡಿರುವುದು.

ಇಂತಹ ಕ್ರಿಯಾಶೀಲ ಬಳಗದಲ್ಲಿರುವುದು ನನಗೆ ಹೆಮ್ಮೆಯೆನಿಸುತ್ತದೆ  ಈ ಬಳಗಕ್ಕೆ ಸೇರಿದ ಮೇಲೆ ನಾನು ವಿವಿಧ ಪ್ರಕಾರಗಳಲ್ಲಿ ಬರೆಯಲು ನನಗೆ ಹಲವಾರು ಹಿರಿಯ ಕವಿಗಳು ಮಾರ್ಗದರ್ಶನ ನೀಡಿರುವುದು ನನ್ನ ಸುದೈವ ಎಲ್ಲರೂ ಕಲಿಯೋಣ ಎಲ್ಳರೂ ಬೆಳೆಯೋಣ ಎಂಬ ತತ್ವ ದಲ್ಲಿ ಬಳಗ ಮುನ್ನಡೆಯುತ್ತಿದೆ ನನ್ನಂತಹ  ಹನಿ ಹನಿ ಗಳನ್ನು ಸೇರಿಸಿ ಬಳಗವನ್ನು ಕಟ್ಟಿ ಮುನ್ನೆಡೆಸುತ್ತಿರುವ ಅಡ್ಮಿನ್ ದ್ವಯರಾದ ಖುಷಿ ಸರ್ ಹಾಗು ಚಂದ್ರು ಸರ್ ಮತ್ತು ಎಲ್ಲಾ ಕವಿಮನಗಳಿಗೆ ಹೃದಯ ಪೂರ್ವಕ ಧನ್ಯವಾದಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




No comments: