01 October 2017

ದೀನದಯಾಳು (ಕವನ)

                *೧*
*ದೀನದಯಾಳು*

ಸ್ವಾಮಿಯೇ ದೇವನೆ ಓ ತಿರಮಲನೆ
ಭಕ್ತರ ಕಾಯುವ ಕರುಣಾಕಾರನೆ

ಏಳು ಬೆಟ್ಟಗಳೊಡೆಯ ನಮ್ಮನರಸು
ಭವದ ಬಂಧನದಿಂದ ಬಿಡಿಸು
ಸವಿ ಮಾತನಾಡಲು ಕಲಿಸು
ಎಲ್ಲರೊಳಗೊಂದಾಗಿ ಬೆರಸು /

ಬಾಲಜಿ ಗೋವಿಂದ ನಾಮ ಪಡೆದವನೆ
ಭಕ್ತರಕ್ಷಕ ದೀನದಯಾಳು ಎನಿಸಿದವನೆ
ಪ್ರಾರ್ಥನೆಗೆ ಮೆಚ್ಚಿ ಓಗೊಡುವವನೆ
 ಕಾಪಾಡು ನಮ್ಮನೆಲ್ಲರ  ಸುಮ್ಮನೆ /

ವೆಂಕಟರಮಣನು  ಸಂಕಟಹರಣನು
ಸಂಕಷ್ಟ ಹರಿಸಿ ಕಾಪಾಡುವನು
ಅಲಂಕಾರ ಪ್ರಿಯ ಇವನು
ಪದ್ಮಾವತಿಯ ಪ್ರಿಯರಮಣನು /

ವರಕೊಡು ನಾಡು ಸುಭಿಕ್ಷವಾಗಲಿ
 ಸಕಲ   ಚರಾಚರಗಳಿಗೆ ಒಳಿತಾಗಲಿ
ಕಲಿಯುಗದ ಕಾಮಧೇನು ನೀನು
ವರಕೊಟ್ಟು ಹರಸು ನಮ್ಮೆಲ್ಲರನು /

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: