12 September 2017

ವಿವೇಕಾನಂದರ ವಿವೇಕವಾಣಿ( ಕವನ )

ವಿವೇಕವಾಣಿ

ಓ ದೀರ ನರೇಂದ್ರ
ನೀನೆ ನಿಜ ದೇವೇಂದ್ರ

ದೀನರನು ಉದ್ದರಿಸಿ
ದಾನವನು ಬೆಳಗಿಸಿದೆ
ಆತ್ಮದರ್ಶನವ ಬೋಧಿಸಿದೆ
ಕರ್ಮ ಸಿದ್ಧಾಂತವ ದರ್ಶಿಸಿದೆ

ಶಕ್ತಿಯೇ ಜೀವನವೆಂದೆ
ನೆನಪಿಡುವೆವು ನಿಮ್ಮನೆಂದೆಂದೂ
ಎಲ್ಲಾ ಧರ್ಮದ ಸಾರ ನೀವು
ನಿಮ್ಮ ದಾರಿಯಲ್ಲೇ ನಡೆವೆವು ನಾವು


ಏಳಿ ಎದ್ದೇಳಿ‌‌ಎಂದು ಕರೆ ನೀಡಿದಿರಿ
ಎಲ್ಲರಾತ್ಮವ ಜಾಗೃತಗೊಳಿಸಿದಿರಿ
ನೆನೆದಾಗ  ವಿಶ್ವ ಧರ್ಮದ ಸಮ್ಮೇಳನ
ನಿಮ್ಮ ಅಗಾಧ ಜ್ಞಾನ ನಮಗೆ  ದರ್ಶನ

ಭಾರತಂಬೆಯ ಕೀರ್ತಿ ಪತಾಕೆ ಹಾರಿಸಿದಿರಿ
ಭಾರತ ತತ್ವ ದರ್ಶನ ಜಗಕೆ ತಿಳಿಸಿದಿರಿ
ನೀವು ಮಾರ್ಗದರ್ಶನದ  ವಿವೇಕವು
ನಮಗೆಲ್ಲರಿಗೆ  ಸದಾ  ಆನಂದವು

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

No comments: