03 September 2017

ಕೆಂಪೇಗೌಡರು


              
                  ಕೆಂಪೇಗೌಡರು

ಇವರೇ ನಮ್ಮ ಗೌಡರು 
ನಾಡಪ್ರಭು ಕೆಂಪೇಗೌಡರು

ಕಟ್ಟಿದರು ನಮಗೆ ಬೆಂಗಳೂರು
ನಮ್ಮ ನಮನ ನಿಮಗೆ ನೂರಾರು

ನಿಮ್ಮ ದೂರದೃಷ್ಟಿ ಅನನ್ಯ 
ಅದೇ ನಮಗೆ ಚೈತನ್ಯ

ನೀವು ಕಟ್ಟಿಸಿದಿರಿ ಬಹು ಕೆರೆ
ನಾವು ಇಂದು ಅವುಗಳಲ್ಲಿ ಬರುವಂತೆ ಮಾಡಿದ್ದೇವೆ ನೊರೆ

ನಿರ್ಮಾಣ ಮಾಡಿದ್ದಿರಿ ವೃತ್ತಿ ಆದಾರಿತ ಪೇಟೆಗಳು
ಈಗತಲೆ ಎತ್ತಿವೆ ಎಲ್ಲೆಂದರಲ್ಲಿ ಪ್ಲಾಟ್ಗಳು

ನೀವುಕಟ್ಟಿಸಿದ್ದಿರಿನೂರಾರು ಕಲ್ಯಾಣಿಗಳ
ಅವು ಮುಚ್ಚಿಸಿ ನಾವೆಲ್ಲರೂ ಜಲಕ್ಕಾಗಿ ನೋಡುತ್ತಿದ್ದೇವೆ ಪಾತಾಳ

ನೀವುಕಟ್ಟಿದ್ದಿರಿ ಅಂದು  ಬೆಂಗಳೂರು
ನಾವು ಕಟ್ಟಿದ್ದೇವೆ ಬೆಂಗಾಡಾದಊರು 

ಕ್ಷಮಿಸಿ ಬಿಡು ಕೆಂಪೇಗೌಡ ಎಂದು 
ಹೇಳಲುನಾವು ಬಯಸುವುದಿಲ್ಲ
ಏಕೆಂದರೆ ನಾವು ಮಾನವರಾಗಿ ಉಳಿದಿಲ್ಲ.

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು.

No comments: