07 ಸೆಪ್ಟೆಂಬರ್ 2018

ಹುಷಾರು (ಹನಿಗವನ)

                  *ಹುಷಾರು*


ಇಂದು
ಹೆಚ್ಚು ಕೆಲಸ ಮಾಡಬೇಡಿ
ಭಾರ ಎತ್ತ ಬೇಡಿ
ಮನಸಿಗೆ ಬೇಜಾರ ಮಾಡಿಕೋಬೇಡಿ
ಬೇಕಾದ್ದನ್ನು ತಿನ್ನಿ
ನಿಮ್ಮ ಬಯಕೆಗಳ
ಈಡೇರಿಸಿಕೊಳ್ಳಿ
ಸಾದ್ಯವಾದರೆ ವೈದ್ಯ ರಿಂದ
ಪರೀಕ್ಷಿಸಿಕೊಳ್ಳಿ
ಹುಷಾರು
ಏಕೆಂದರೆ ಇಂದು
ಒಂಭತ್ತನೆಯ ತಿಂಗಳ
ಒಂಭತ್ತನೆಯ ದಿನ



*ತೊಂಬತ್ತು*

ಇಂದು ದಿನಾಂಕ ಒಂಭತ್ತು
ತಿಂಗಳೂ ಒಂಭತ್ತು
ಭಾನುವಾರದ ರಜಾನೂ ಇತ್ತು
ಸಂಬಳಾನು ಇವತ್ತೇ ಆಗಿತ್ತು
ನೀನಿರಬೇಕಿತ್ತು
ಹಾಕಬಹುದಿತ್ತು
ಮೂವತ್ತು
ಅರವತ್ತು
ತೊಂಬತ್ತು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ನನಗೇಕೆ ಈ ಶಿಕ್ಷೆ (ಕವನ)

          *ನನಗೇಕೆ ಈ ಶಿಕ್ಷೆ?*

ಒಂಟಿಯಾಗಿರುವವದು ಬೋರೆಂದು
ತುಂಟ ಚಟಪಡಿಸುತ್ತಿದ್ದನು
ಜಂಟಿಯಾಗಲು ಹಾತೊರೆಯುತ್ತಿದ್ದನು

ತುಂಟನೊಮ್ಮೆ ತುಂಟಿಯ ಕಂಡನು
ತುಂಟ ನಗೆಯ ಬೀರಿ ನೋಡಿದ
ತುಂಟಿ ಹಿಂದ ಓಡಾಡಿದ
ತಂಟೆ ತರಲೆ ಬಿಟ್ಟು ಸಭ್ಯನಾದ
ತುಂಟಿಯ ಮನ ಕರಗಿ
ಒಲ್ಲದ ಮನಸ್ಸಿನಿಂದ ಒಲವು
ತೋರಿದಳು
ಮದುವೆಯಾಗಲು ನಿರ್ಧಾರ ಮಾಡಿದರು.

ಅಂದು ಸುಪ್ರೀಂಕೋರ್ಟ್ ತೀರ್ಪನ್ನು
ತುಂಟಿ ಓದಿ ಜಿಗಿದಾಡಿ ಸಂತಸಗೊಂಡು
ತುಂಟನಿಗೆ ಕರೆಮಾಡಿ ಈಗಂದಳು
ನನಗೆ(gay) ಅವಳು ಬೇಕು
ಅವಳಿಗೆ(gay) ನಾನು ಬೇಕು
ನಮ್ಮಿಬ್ಬರಿಗೇ ಮದುವೆ ಸೂಕ್ತ
ಎಂದು ಪೋನ್ ಕುಕ್ಕಿದಳು
ತುಂಟ ಅರ್ಥವಾಗದೇ ನಾನು ಮಾಡಿದ
ತಪ್ಪೇನು? ನನಗೇ(gay)ಕೆ ಈ ಶಿಕ್ಷೆ? ಎಂದು
ಪರಿತಪಿಸುತ್ತಿದ್ದಾನೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

06 ಸೆಪ್ಟೆಂಬರ್ 2018

ನಾವು ಮಂಗಗಳು (ಕವನ)



            *ನಾವು ಮಂಗಗಳು*

ಮಹಿಳೆಯರ  ಗೌರವಿಸಬೇಕು
ಇಳೆಯ ಜೀವಿಗಳ ಕಾಪಾಡಬೇಕು
ಮಂಗನಂತೆ ಆಡಬಾರದು ಎಂದು
ಗೊತ್ತಿದ್ದರೂ ರಾಕ್ಷಸರಂತೆ ಅಡುವ ನಾವು
ಮಂಗಗಳು ಸಾರ್ ನಾವು ಮಂಗಗಳು

ಸನ್ಮಾರ್ಗದಿ ನಡೆಯಬೇಕು
ಅಡ್ಡದಾರಿ ಹಿಡಿಯಬಾರದು
ಎಂದು ತಿಳಿದಿದ್ದರೂ ವಾಮ ಮಾರ್ಗದಿ
ಅನ್ಯಾಯ ಅಕ್ರಮದಿ ನಿರತರಾಗಿರುವೆವು
ಮಂಗಗಳು ಸಾರ್ ನಾವು ಮಂಗಗಳು

ಪರಿಸರವಿರುವುದು ನಮಗಾಗಿ
ಸಂಪನ್ಮೂಲಗಳನ್ನು ಮಿತವಾಗಿ
ಬಳಸಬೇಕೆಂದು ತಿಳಿದಿದ್ದರೂ
ಪರಿಸರ ಮಾಲಿನ್ಯ ಮಾಡಿ
ಕುಣಿದಾಡುತಿರುವ ನಾವು
ಮಂಗಗಳು ಸಾರ್ ನಾವು ಮಂಗಗಳು

ನಾನು ನನ್ನಿಂದ ಎಂದವರು
ನಾಮಾವಶೇಷವಾದರೂ
ನಾನೆಂಬ ಅಹಂ ಅಳಿಯಲಿಲ್ಲ
ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ
ಎಂಬುದು ಅರ್ಥವಾಗಲಿಲ್ಲ
ಮಂಗಗಳು ಸಾರ್ ನಾವು ಮಂಗಗಳು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಸೆಪ್ಟೆಂಬರ್ 2018

ಅಂದು‌..ಇಂದು..ಮುಂದೆ (ಕವನ ಶಿಕ್ಷಕರ ದಿನಾಚರಣೆಯ ಶುಭಾಶಯಗಳು)



             *ಅಂದು‌ ಇಂದು‌ ಮುಂದೆ*

*ಅಂದು*

ಗುರು ಬ್ರಹ್ಹ ವಿಷ್ಣು ಮಹೇಶ್ವರ
ಗುರುಕುಲದಿ ಕಲಿಸುವ ದೈವಾಂಶ ಸಂಭೂತ
ಬರೀ ಕಲಿಕೆಯೊಂದನ್ನು ಮಾಡಲು
ಪಣತೊಟ್ಟ ಗುರುವರ್ಯ
ನೈತಿಕ, ಮೌಲಿಕ ಜೀವನ ಮಾನವೀಯತೆಯ ವಿಕಸನಕ್ಕೆ ಶಿಕ್ಷಣ
ಗುರು ಕೇಂದ್ರಿತ ಗುರಿಇದ್ದ ಶಿಕ್ಷಣ
ಮೌಲ್ಯ ಯುತ ಗುರು, ಕಲಿಕಾರ್ಥಿಗಳು
ಸಮಾಜ ಸದೃಢ


*ಇಂದು*

ಗುರುವೇನ್ ಮಹಾ ಎಂಬ
ಕಲಿಕಾರ್ಥಿಗಳು
ಊಟಬಡಿಸುವ ಕಾಯಕದಿಂದಿಡಿದು
ಜನ ದನ ಎಣಿಸುವ ಸಕಲ ಕಾರ್ಯ
ಮಾಡಿ ಸಮಯವಿದ್ದರೆ ಕಲಿಸಿ
ನಲಿಸುವ ಟೀಚರ್
ಅಂಕಗಳ ಹಿಂದೆ ಬಿದ್ದು‌ ಅಂಕೆ
ತಪ್ಪಿದ ಮೌಲ್ಯಗಳು
ತಪ್ಪಿದರೆ ತಿದ್ದಲು ಶಿಕ್ಷೆ ಕೊಡಲು
ಕಾನೂನು ಹೇಳುತಿದೆ ಶಿಕ್ಷಕರು ದುರುಗುಟ್ಡಿ‌
ನೋಡಿದರೂ ತಪ್ಪು
ತಿದ್ದುವರಾರು ದಾರಿ ತಪ್ಪಿದ
ಭಾವಿ ಭಾರತದ ಪ್ರಜೆಗಳ


*ಮುಂದೆ*

ಗುರುವೇನ್ ಬ್ರಹ್ಮ ಅಲ್ಲ
ನೆಟ್ ಗೂಗಲ್, ಯೂಟ್ಯೂಬ್
ಆರ್ಟಿಪಿಷಿಯಲ್  ಇಂಟಲಿಜೆನ್ಸ್ ಇದೆಯಲ್ಲ
ಯಂತ್ರಗಳಿಂದ ಕಲಿತು
ಯಾಂತ್ರಿಕ ಜೀವನ ನಡೆಸಿ
ಯಂತ್ರಗಳ ಗುಲಾಮರಾಗಿ
ನಾವು ಸುಸಂಸ್ಕೃತ, ಆಧುನಿಕ ಅಭಿವೃದ್ಧಿ ಹೊಂದಿದ ದೇಶದ ಸತ್ ಪ್ರಜೆಗಳೆಂದು
ಕೊಚ್ಚಿಕೊಳ್ಳುವೆವು

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

04 ಸೆಪ್ಟೆಂಬರ್ 2018

ಗಜ಼ಲ್44(ಮರೆಯಲಿ ಹೇಗೆ)


              *ಗಜ಼ಲ್*

ದಿಕ್ಕುಗಳನ್ನೇ ಅಂಬರ ಮಾಡಿಕೊಂಡ ದಿಟ್ಟ ಮುನಿಯ  ಹೇಗೆ ಮರೆಯಲಿ
ಮುನಿಯದೇ ಮಾದರಿಯಾದ ಯತಿವರ್ಯರ ವಾಗ್ಜರಿಯ  ಹೇಗೆ ಮರೆಯಲಿ

ಕಹಿ ಗುಳಿಗೆಯಲಿ ಸಿಹಿಯಾದ ಲೋಕ ಜ್ಞಾನ ಬೋಧನೆ
ಸಾವಿಗಂಜುವ ಜನರ ನಡುವೆ ಸಾವ ಸ್ವೀಕರಿಸಿದ ಸಲ್ಲೇಖನ ವ್ರತಧಾರಿಯ ಹೇಗೆ ಮರೆಯಲಿ

ಬಟ್ಟೆಗಳನ್ನು ಹಾಕಿಕೊಂಡು ಬೆತ್ತಲಾದವರು ನಾವುಗಳು
ಬಟ್ಟೆಯ ಧರಿಸದೇ ನಮಗೆಲ್ಲ ಬಟ್ಟೆಯ ತೋರಿದ ಬೆಳಕ ಕಿಡಿಯ  ಹೇಗೆ ಮರೆಯಲಿ

ದೇಹಕ್ಕೆ ವಯಸ್ಸುಗುವುದು ಸಹಜ‌ ಮನಸ್ಸು ಆತ್ಮಕ್ಕಲ್ಲ
ತರುಣರಾಗೇ ಮರಣವನು‌ ಮೆಟ್ಟಿದ  ಮುನಿಯ  ಹೇಗೆ ಮರೆಯಲಿ

ಸಾಗರದಷ್ಟು ಆಸೆ ಆಕಾಂಕ್ಷೆಗಳ ಭಾರಕೆ ಹಗುರಾಗುತ್ತಿಲ್ಲ ಮನ
ಸೀಜೀವಿಯಂತವರ ಮೇಲೆ ಪ್ರಭಾವ ಬೀರಿದ ಯತಿಯ  ಹೇಗೆ ಮರೆಯಲಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*