21 July 2024

ಕನ್ನಡಿಗರ ಹೆಮ್ಮೆಯ ಬೇಲೂರು ಹಾಗೂ ಹಳೇಬೀಡಿನ ದೇಗುಲಗಳು

 


ಕನ್ನಡಿಗರ ಹೆಮ್ಮೆಯ ಹಳೇಬೀಡಿನ ದೇಗುಲ 


ಯುನೆಸ್ಕೋ ಸಂಸ್ಥೆಯು ಪ್ರಪಂಚದಾದ್ಯಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ವಿಶ್ವ ಪಾರಂಪರಿಕ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಪಡಿಸಿ  ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇದರ ಅಂಗವಾಗಿ ಪ್ರತಿವರ್ಷ ಒಂದೊಂದು ದೇಶದಲ್ಲಿ ಸಮ್ಮೇಳನ ನಡೆಸಿಕೊಂಡು ಬಂದಿದೆ. 

ನಮ್ಮ  ದೇಶದಲ್ಲಿ ಮೊದಲ ಬಾರಿಗೆ ಯುನೆಸ್ಕೋದ ವಿಶ್ವಪಾರಂಪರಿಕ ಸಮ್ಮೇಳನವು

  ಜುಲೈ 21ರಿಂದ 31ರವರೆಗೆ ದೆಹಲಿಯಲ್ಲಿ 46ನೇ ವಿಶ್ವ ಪಾರಂಪರಿಕ ಸಮ್ಮೇಳನ  ನಡೆಯಲಿದ್ದು  ದೇಶದ 3 ವಿಶ್ವಪಾರಂಪರಿಕತಾಣಗಳಪ್ರದರ್ಶನ ಸಮ್ಮೇಳನದಲ್ಲಿನಡೆಯಲಿದೆ. ಅದರಲ್ಲಿ ಕರ್ನಾಟಕದ ಹಳೇಬೀಡಿನ ಹೊಯ್ಸಳ ದೇಗುಲ ಕೂಡ ವರ್ಚುವಲ್ರಿ ಯಾಲಿಟಿಯಲ್ಲಿ ಪ್ರದರ್ಶನಗೊಳ್ಳಲಿದೆ.


ಸಮ್ಮೇಳನದಲ್ಲಿ ವಿಶ್ವ ಪಾರಂಪರಿಕ ಪಟ್ಟಿ

ಯಲ್ಲಿನ ಒಟ್ಟು 27 ತಾಣಗಳನ್ನು ಎಆರ್ 

ಮತ್ತು ವಿಆ‌ರ್ ತಂತ್ರಜ್ಞಾನದ ಮೂಲಕ ತೋರಿಸಲಾಗುತ್ತದೆ. ಭಾರತದಿಂದ 3

ಪಾರಂಪರಿಕ ತಾಣಗಳು ಸಾಂಸ್ಕೃತಿಕ ತಾಣಗಳ ವಿಭಾಗದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ

ಕರ್ನಾಟದ ಇತಿಹಾಸ ಪ್ರಸಿದ್ಧ ಹಳೆಬೀಡಿನ ಹೊಯ್ಸಳ ದೇಗುಲ ಕೂಡ ಸೇರಿದೆ. ಈ

ಕಾರ್ಯಕ್ರಮಕ್ಕೆ ಲಾಂಛನವಾಗಿ ಹಂಪಿಯ ಕಲ್ಲಿನ ರಥವನ್ನು ಬಳಸಿಕೊಂಡಿರುವುದು ಕನ್ನಡಿಗರಿಗೆ ಇನ್ನೂ ಹೆಚ್ಚಿನ ಸಂತಸ ನೀಡಿದೆ.

 


No comments: