19 May 2024

ತಾಯಂದಿರ ದಿನ ಒಂದು ದಿನಕ್ಕೆ ಸೀಮಿತವಾಗದಿರಲಿ

 


ತಾಯಂದಿರ ದಿನ ಒಂದು ದಿನಕ್ಕೆ ಸೀಮಿತವಾಗದಿರಲಿ 


ತಾಯಂದಿರ ದಿನ ಕೇವಲ ಒಂದು ‌ದಿನಕ್ಕೆ ಸೀಮಿತವಾಗದೇ 

ದಿನವೂ ತಾಯಂದಿರ ದಿನವಾಗಿ

ಆಚರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ   ಕೆ ಎಸ್ 

ಸಿದ್ದಲಿಂಗಪ್ಪ ರವರು ಕರೆ ನೀಡಿದರು.


ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕ ಹಾಗೂ ನಿರ್ಭಯ ಮಾಹಿಳಾ ಜಾಗೃತಿ ಸಂಸ್ಥೆಯ ಸಹಯೋಗದೊಂದಿಗೆ ತುಮಕೂರಿನ ವಿಪ್ರ ಭವನದಲ್ಲಿ  ಹಮ್ಮಿಕೊಂಡಿದ್ದ ತಾಯಂದಿರ ದಿನದ ಉದ್ಘಾಟನಾ ಭಾಷಣ ಮಾಡುತ್ತಾ ಹೀಗೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪಿ ಎಲ್ ಸುನಂದಮ್ಮ ರವರು

ತಾಯಿ ಋಣ ತೀರಿಸಲು ಸಾದ್ಯವಿಲ್ಲ ಎಂದರು. ಜೊತೆಗೆ ತಾಯಿಯ ಮಹತ್ವವನ್ನು  ಕವಿವಾಣಿಗಳನ್ನು ಹೇಳಿ ಮನನ ಮಾಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷರಾದ ಗೀತಾನಾಗೇಶ್ ರವರು  ತಾಯಿ ದೇವರನ್ನು ಸರ್ವರೂ ದಿನವೂ ಗೌರವಿಸಿ ಪೂಜಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಘಟಕದ ಕಾರ್ಯದರ್ಶಿ ಸಿಹಿಜೀವಿ ವೆಂಕಟೇಶ್ವರ , ಕೋಶಾಧ್ಯಕ್ಷರಾದ ಜಯರಾಮಯ್ಯ, ಅಭಿಷೇಕ್, ಪುಷ್ಪಲತ ಮುಂತಾದವರು ತಮ್ಮ ತಮ್ಮ  ತಾಯಿಯ ಬಗ್ಗೆ ಮಾತನಾಡಿದರು.

ತುಮಕೂರು ಕನ್ನಡ ಭವನದ ಪರಿಚಾರಕಿಯಾದ  ಗಂಗಮ್ಮ ರವರನ್ನು ಅವರ ಸೇವೆಯನ್ನು ಗುರ್ತಿಸಿ ಸನ್ಮಾನಿಸಲಾಯಿತು.

ಶೈಲಜಾ ವೆಂಕಟೇಶ್ ರವರು ಪ್ರಾರ್ಥಿಸಿದರು.ಅಭಿಶೇಕ್ ರವರು ಸ್ವಾಗತಿಸಿದರು.ಜ್ಯೋತಿ ಆಚಾರ್ಯ ರವರು ವಂದಿಸಿ ಎನ್ ನಂದಿನಿ ರವರು ನಿರೂಪಿಸಿದರು.



No comments: