14 March 2024

ಬಾಳೆ ಗರಿ ಸಾಹಿತ್ಯ!


 


ಶಾಲೆಯ ಅಂಗಳ ೧


ಬಾಳೆಗರಿ ಸಾಹಿತ್ಯ...

ಹತ್ತನೇ ತರಗತಿಯ ಪರೀಕ್ಷೆಗೆ ಹದಿನೈದು ದಿನ ಬಾಕಿ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾ ಮೇಡಂ ರವರು ಕಲಿತ ಕಲಿಕಾಂಶಗಳ  ಪುನರಾವರ್ತನೆ ಮಾಡುತ್ತಾ ಮಕ್ಕಳಿಗೆ  ಮಾರ್ಗದರ್ಶನ ಮಾಡುತ್ತಿದ್ದರು. 

ಒಳಗೆ ಬೇಸಿಗೆಯ ಬಿಸಿಲ ಝಳ ವೆಂದು ಕೈತೋಟದ ತಂಪನೆಯ ವಾತಾವರಣದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಓದಲು ಅವಕಾಶ ನೀಡಲಾಗಿತ್ತು.ಓರ್ವ ಬಾಲಕಿ ಬಾಳೆ ಗಿಡದ ಎಲೆಯನ್ನು ತೆಗೆದುಕೊಂಡು ಅದರಲ್ಲಿ ಕೆಲ ಸಾಲುಗಳನ್ನು ಬರೆಯುತ್ತಿದ್ದಳು.ಇದನ್ನು ಗಮನಿಸಿದ ಶಿಕ್ಷಕಿ ಓಲೆ ಗರಿಯಂತೆ ಬಾಳೆ ಗರಿಯಲ್ಲಿ ಬರೆಯುವೆ ಏಕೆ ಎಂದು ನೋಡಿದಾಗ ಆ ಬಾಳೆಗರಿಯಲ್ಲಿ ಬರೆದ ಪದಗಳು ಶಾಲಾ ಪಠ್ಯಕ್ಕೆ ಸಂಬಂಧಿಸಿರಲಿಲ್ಲ.ಯಾವುದೋ ಕವನದಂತೆ ಭಾಸವಾಯಿತು.ಈಗ ಕವನ ಬರೆಯುವ ಸಮಯವಲ್ಲ ಓದಿನ ಕಡೆ ಗಮನ ಇರಲಿ ಎಂದು ಬುದ್ದಿ ಹೇಳಿ ಬಾಳೆ ಗರಿಯನ್ನ ಸಹೋದ್ಯೋಗಿಗಳಿಗೆ ತೋರಿಸದರು.ಓರ್ವ ಸಹೋದ್ಯೋಗಿ ಈ ಪದಗಳನ್ನು ಎಲ್ಲೋ ನೋಡಿದ ಕೇಳಿದ ಹಾಗಿದೆಯಲ್ಲ ಎಂದು ಚೆಕ್ ಮಾಡಿದಾಗ ಅದು ಇತ್ತೀಚಿಗೆ ಬಿಡುಗಡೆಯಾದ  ಶಿವರಾಜ್ ಕುಮಾರ್ ರವರ ವೇದ ಚಿತ್ರದ ಗೀತೆ! ಮತ್ತೆ ಆ ಬಾಲಕಿ ಕರೆದು ವಿಚಾರಿಸಲಾಗಿ ಸುಮಾರು ಇನ್ನೂರು ಪುಟಗಳ ಪುಸ್ತಕದಲ್ಲಿ ಬರೀ ಸಿನಿಮಾ ಗೀತೆಗಳನ್ನು ಬರೆದಿದದ್ದು ಗಮನಕ್ಕೆ ಬಂತು.ಕುತೂಹಲಕ್ಕೆ ಎಲ್ಲಾ ವಿಷಯಗಳ ನೋಟ್ಸ ಕೇಳಿದರೆ ಎರಡು ವಿಷಯಗಳ ನೋಟ್ಸ್ ಕಂಪ್ಲೀಟ್ ಆಗಿರಲಿಲ್ಲ.ಯಾಕೆ ಹೀಗೆ ಮಾಡಿದೆ ಓದುವ ಬರೆಯುವ ಕಾಲದಲ್ಲಿ ಪರೀಕ್ಷೆ ಹತ್ತಿರವಿರುವ ಈ ಸಮಯದಲ್ಲಿ ಸಿನಿಮಾ ಗೀತೆ ಬರೆಯುತ್ತಿರುವೆ ಎಂದು ಕೇಳಿದರೆ ಅದಕ್ಕೆ ಸ್ಪೂರ್ತಿ ತಮ್ಮ ಪಕ್ಕದ ಮ‌ನೆಯ ಅಕ್ಕ!  ಅವಳು ಪಿ ಯು ಓದುತ್ತಿದ್ದು ಈಗಾಗಲೇ ಎರಡು ಇನ್ನೂರು ಪೇಜ್ ಪುಸ್ತಕದಲ್ಲಿ ಸಿನಿಮಾ ಹಾಡು ಬರೆದಿದ್ದಾರೆ ನಾನು ಮೂರು ಬರೆಯಲು ತೀರ್ಮಾನಕ್ಕೆ ಬಂದು ಹೀಗೆ ಮಾಡಿದೆ ಅಂದಳು ಮೇಡಂ ರವರು ಸಮಾಧಾನದಿಂದ ಆ ಬಾಲಕಿಗೆ ಕೌನ್ಸಿಲಿಂಗ್ ಮಾಡಿ ಹಾಡು ಮನರಂಜನೆ ತಪ್ಪಲ್ಲ ಆದರೆ ಪರೀಕ್ಷ ಸಮಯದಲ್ಲಿ ಅವು ಗೌಣವಾಗಿ ಓದಿನ ಕಡೆ ಗಮನ ಹರಿಸು ಎಂದು ಹೇಳಿ ಕಳಿಸಿದರು. 

ವಿದ್ಯಾರ್ಥಿಗಳೆ ನಿಮ್ಮ ಸಹ ಪಠ್ಯ ಚಟುವಟಿಕೆಗಳು ಖಂಡಿತವಾಗಿಯೂ ಬೇಕು. ಹಾಡು ಸಂಗೀತ ಕೆಲವೊಮ್ಮೆ ಓದಿನ ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅವು ನಿಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕ ಆದರೆ  ಪರೀಕ್ಷಾ  ಕಾಲದಲ್ಲ  ಮಿತಿಯಲ್ಲಿದ್ದರೆ ಒಳಿತಲ್ಲವೇ? 

No comments: