19 January 2024

ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


 


ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ನಾನು ಇತ್ತೀಚೆಗೆ   ಜಯ್  ಶೆಟ್ಟಿಯವರ "ಥಿಂಕ್ ಲೈಕ್ ಎ  ಮಾಂಕ್" ಪುಸ್ತಕ ಓದಿದೆ. ಅದನ್ನು ಓದಿದ  ಮೇಲೆ ಎಲ್ಲಾ ವಯೋಮಾನದವರು ಪದೇ ಪದೇ ಓದಬೇಕಾದ ಮತ್ತು ಆ ಪುಸ್ತಕದ ಕೆಲ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲೇಬೇಕಾದ ಅಗತ್ಯವಿದೆ ಎನಿಸಿತು. ಮೂಲ ಇಂಗ್ಲಿಷ್ ಆದರೂ ನಾನು ಕನ್ನಡದ ಆವೃತ್ತಿಯನ್ನು ಓದಿದೆ.

ಇಡೀ ಪುಸ್ತಕ ಓದಿದ ಬಳಿಕ ಆ ಪುಸ್ತಕದ ಸಾರಾಂಶವನ್ನು ನಿಮ್ಮ ಬಳಿ ಹಂಚಿಕೊಳ್ಳಲು ಮನಸಾಗಿದೆ. ಆ ಪುಸ್ತಕದ ಸಾರಾಂಶವನ್ನು  ನಿಮಗೆ ಸಲಹೆ ರೂಪದಲ್ಲಿ ಈ ಕೆಳಗಿನ ಅಂಶಗಳ ರೂಪದಲ್ಲಿ ಸಲಹಾತ್ಮಕವಾಗಿ ಹೇಳಬಯಸುವೆ.


  ಗತದ ಗೊಡವೆಯ ಬಿಡಿ.  ಮತ್ತು ಭವಿಷ್ಯವನ್ನು ಅತಿಯಾಗಿ ಕಲ್ಪಿಸಿಕೊಂಡು ಹಗಲುಗನಸು ಕಾಣಬೇಡಿ. ಪ್ರಸ್ತುತ ಕ್ಷಣದಲ್ಲಿ ವಾಸಿಸಿ ಮತ್ತು ನೀವು ಏನು ಸಾಧಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿ.ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ.  ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಗುರಿಗಳನ್ನು ಹೊಂದಿ ಅದನ್ನು ತಲುಪಲು ಪ್ರಯಾಣದಲ್ಲಿದ್ದಾರೆ.  ನಿಮ್ಮ ಸ್ವಂತ ಗುರಿ ಮತ್ತು ಪ್ರಗತಿಯತ್ತ ಗಮನಹರಿಸಿ.ನಿಮ್ಮಲ್ಲಿರುವದಕ್ಕೆ ಕೃತಜ್ಞರಾಗಿರಿ.  ನಿಮ್ಮ ಜೀವನದಲ್ಲಿ ದೊಡ್ಡ ಅಥವಾ ಚಿಕ್ಕದಾದ ಯಶಸ್ಸನ್ನು ಸಂಭ್ರಮಿಸಿ  ಮತ್ತು  ಒಳ್ಳೆಯ ವಿಷಯಗಳನ್ನು ಪ್ರಶಂಸಿಸಲು ಸಮಯ ತೆಗೆದುಕೊಳ್ಳಿ.


 ಮೊದಲು ನಿಮ್ಮ ಬಗ್ಗೆ ನಿಮಗೆ ಹೆಮ್ಮೆಯಿರಲಿ. ಮತ್ತು ಇತರರಿಗೆ ದಯೆಯಿಂದಿರಿ.  ನಿಮ್ಮನ್ನು ಮತ್ತು ಇತರರನ್ನು ಸಹಾನುಭೂತಿ ಮತ್ತು ಕಾಳಜಿಯಿಂದ ನೋಡಿಕೊಳ್ಳಿ.

ನಿಯಮಿತವಾಗಿ ಧ್ಯಾನ ಮಾಡಿ.  ಧ್ಯಾನವು ಮನಸ್ಸನ್ನು ಶಾಂತಗೊಳಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಬಲವಾದ ಸಾಧನವಾಗಿದೆ.


  ಸಾವಧಾನತೆಯನ್ನು ಅಭ್ಯಾಸ ಮಾಡಿ.  ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು   ಪ್ರಸ್ತುತ ಕ್ಷಣಕ್ಕೆ ಗಮನ ಕೊಡುವ ಅಭ್ಯಾಸ ರೂಢಿಸಿಕೊಳ್ಳಿ.

ಅತಿಯಾದ ಅಟ್ಯಾಚ್ ಮೆಂಟ್ ಬೇಕಿಲ್ಲ.ಕೆಲ ಜನರ, ಸ್ಥಳಗಳ,ಮತ್ತು ವಸ್ತುಗಳ ಮೇಲೆ ಅತಿಯಾದ ಅಟ್ಯಾಚ್ ಮೆಂಟ್  ದುಃಖಕ್ಕೆ ಕಾರಣವಾಗಬಹುದು.  ಅಟ್ಯಾಚ್ ಮೆಂಟ್  ಬಿಡಲು ಮತ್ತು ಹೆಚ್ಚು ನಿರಾತಂಕದ ಜೀವನವನ್ನು ನಡೆಸಲು ಕಲಿಯಿರಿ.

 ಗಾಂಧೀಜಿಯಿಂದ ಹಿಡಿದು ಹಲವು  ಮಹಾನ್ ವ್ಯಕ್ತಿಗಳು  ಸರಳವಾಗಿ ಬದುಕುವ ಮಾದರಿಯ ತೋರಿಸಿದ್ದಾರೆ.  ಸರಳತೆ ರೂಢಿಸಿಕೊಳ್ಳಿ  ವಸ್ತು ಆಸ್ತಿ ಮತ್ತು ಬಾಹ್ಯ ಸಂಪತ್ತನ್ನು ಬೆನ್ನಟ್ಟಬೇಡಿ.  ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಮತ್ತು ಅವಶ್ಯಕತೆ ಇರುವುದನ್ನು  ಪಡೆಯಲು ಮಾತ್ರ ಗಮನ  ಕೇಂದ್ರೀಕರಿಸಿ ಮತ್ತು ಸರಳ ಜೀವನವನ್ನು ನಡೆಸಿ.


ಕೆಲವೊಮ್ಮೆ ನೀವು ಮಾಡಿದ ತಪ್ಪಿಗೆ  ನಿಮ್ಮನ್ನೇ ಕ್ಷಮಿಸಿಕೊಳ್ಳಿ ಅದೇ ರೀತಿಯಲ್ಲಿ  ಇತರರನ್ನು ಕ್ಷಮಿಸಿ ತನ್ಮೂಲಕ ನೀವು ದೊಡ್ಡವರಾಗಿ.

ಹೀಗೆ ಥಿಂಕ್ ಲೈಕ್ ಎ ಮಾಂಕ್ ಪುಸ್ತಕದ ಪ್ರಮುಖಾಂಶಗಳ ಆಧಾರದ ಸಲಹೆಗಳ   ಪಟ್ಟಿಯು ಬೆಳೆಯುತ್ತಾ ಸಾಗುತ್ತದೆ. 

ಜಯ್  ಶೆಟ್ಟಿಯವರ ಈ  ಪುಸ್ತಕವು ಹೆಚ್ಚು ಶಾಂತಿಯುತ ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಪ್ರಾಯೋಗಿಕ ಮಾರ್ಗದರ್ಶಿಯಾಗಿದೆ.  ಅವರ ಪುಸ್ತಕದಲ್ಲಿನ ಪಾಠಗಳನ್ನು ಅನುಸರಿಸುವ ಮೂಲಕ ನಿಮ್ಮ ಮನಸ್ಸನ್ನು ಹೆಚ್ಚು ಶಾಂತವಾಗಿಸಿಕೊಳ್ಳಲು ಮತ್ತು  ಸಹಾನುಭೂತಿಯಿಂದ ವರ್ತಿಸುವ ತರಬೇತಿ ನೀಡಬಹುದು. ಇಂತಹ ಅನುಭವ ನಿಮ್ಮದಾಗಬೇಕಾದರೆ ನೀವು ಥಿಂಕ್ ಲೈಕ್ ಎ ಮಾಂಕ್ ಓದಿ ಬಿಡಿ. ಸನ್ಯಾಸಿಯಂತೆ ಯೊಚಿಸಿ, ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ.....


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ತುಮಕೂರು

9900925529


 

No comments: