24 September 2022

ಜಿ ಎಸ್ ಬಸವರಾಜು

 



ನಾನು ಕಂಡ ಸಂಸದ ಜಿ ಎಸ್ ಬಸವರಾಜ್.


ಸರಳ ಸಜ್ಜನ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಕಾಣಸಿಗುವುದೇ ಅಪರೂಪ. ನಮ್ಮ ಮಧ್ಯ ಇರುವ ಜಿ ಎಸ್ ಬಸವರಾಜು ರವರು ಇದಕ್ಕೆ ಅಪವಾದ .  ಪಂಚಗೆಲುವುಗಳನ್ನು ಪಡೆದು ಲೋಕಸಭೆಗೆ ಆಯ್ಕೆಯಾದ ಬಸವರಾಜು ರವರು ಪ್ರಸ್ತುತ ಲೋಕಸಭಾ ಸದಸ್ಯರೂ ಕೂಡಾ ಹೌದು. ಅವರ ನೇರ ಮತ್ತು ದಿಟ್ಟ ಮಾತುಗಳು ನನಗೆ ಬಹಳ ಇಷ್ಟ . ಸಮಾರಂಭಗಳಲ್ಲಿ ಆಡಂಬರದ ಪದಗಳ ಬಳಕೆ ಮಾಡದೆ ಸಾಮಾನ್ಯ ಜನರಿಗೆ ಅರ್ಥವಾಗುವ ಅವರ ಮಾತುಗಳು  ಹಳ್ಳಿಯ ಜನರಿಗೆ ಅಚ್ಚುಮೆಚ್ಚು ಎಂದೇ ಹೇಳಬೇಕು. ಅವರ ಮನೆಯ ಮುಂದೆ ಪ್ರತಿದಿನ ಮುಂಜಾನೆ ಕಂಡು ಬರುವ ಜನರ ಗುಂಪು,ಹಾಗೂ ಆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯು ಜನರ ಮನ ಗೆದ್ದಿದೆ. 


"ನನ್ನ ಮಗಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರವೇಶ ಬೇಕಾಗಿತ್ತು. ಬಸವರಾಜಣ್ಣ ಅವರ ಬಳಿ ಹೋಗಿ ಎಂ .ಪಿ ಕೋಟಾ ಅಡಿಯಲ್ಲಿ ಸೀಟು ಕೊಡಿಸಲು ಕೇಳಿದಾಗ ತಕ್ಷಣವೇ ಪತ್ರ ಕೊಟ್ಟರು.ನನ್ನ ಮಗಳೀಗ  ಕೆ ವಿ ನಲ್ಲಿ ಮೂರನ ತರಗತಿಯಲ್ಲಿ ಓದುತ್ತಿದ್ದಾಳೆ. ನಾನು ಯಾವಾಗಲೂ ಬಸವರಾಜಣ್ಣ ನವರಿಗೆ ಚಿರ ಋಣಿಯಾಗಿರುವೆ "  ಎಂದು ತಮಗೆ ಒಳಿತು ಮಾಡಿದ ಜಿ ಎಸ್ ಬಿ ರವರ ಬಗ್ಗೆ  ತುಮಕೂರು ನಗರದ ಗೋಕುಲ ಬಡಾವಣೆಯ ನಿವಾಸಿಗಳಾದ ಮುನಿ ಬಸವರಾಜು ರವರ ಮಾತುಗಳನ್ನು ಕೇಳಿದಾಗ  ಜಿ ಎಸ್ ಬಿ ರವರ ಬಗ್ಗೆ ಗೌರವ ಬರದೇ ಇರದು. 

ಗಂಗಸಂದ್ರ ಸಿದ್ದಪ್ಪ ಬಸವರಾಜ್ ರವರು ಜಿ ಎಸ್ ಬಿ ಆಗಿ ಬೆಳೆದದ್ದೇ ಒಂದು ರೋಚಕ ಕಥೆ.ಸ್ವಾತಂತ್ರ್ಯಕ್ಕೆ ಪೂರ್ವದಲ್ಲಿ ಅಂದರೆ  1941ರಲ್ಲಿ ಜನಿಸಿದ ಅವರು 1960 ರಲ್ಲಿ  ಪಿ ಎಲ್ ಡಿ ಬ್ಯಾಂಕ್ ಸದಸ್ಯರಾಗಿ   ರಾಜಕೀಯ ಪಾದಾರ್ಪಣೆ ಮಾಡಿದರು .ಎ.ಪಿ ಎಂ ಸಿ ಅಧ್ಯಕ್ಷರಾದಾಗ ರಾಜಕೀಯ ಪಕ್ಷಗಳು ಅವರ ಸೇವೆಯನ್ನು ಗಮನಿಸಿದವು. ಜನರ ಮನಗೆಲ್ಲುತ್ತಾ ಲೋಕ ಸಭಾ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದೇ ಹೇಳಬಹುದು. 

  2019 ರಲ್ಲಿ ತುಮಕೂರು ಲೋಕಸಭಾ  ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ನೊಂದಿಗೆ ಪ್ರಾರಂಭಿಸಿದರು ಮತ್ತು ಈಗ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ . ಅವರು 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸುಮಾರು 15,000 ಮತಗಳ ಅಂತರದಿಂದ ಮಾಜಿ ಪ್ರಧಾನಿ ಶ್ರೀ ಎಚ್ ಡಿ  ದೇವೇಗೌಡರನ್ನು ಸೋಲಿಸಿದರು . ಅವರು ತುಮಕೂರಿನಿಂದ ಐದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ, 1984, 1989 ಮತ್ತು 1999 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ, ಮತ್ತು 2009 ಮತ್ತು 2019 ರಲ್ಲಿ ಬಿಜೆಪಿ ಸದಸ್ಯರಾಗಿ. ಆಯ್ಕೆಯಾಗಿ ಈಗಲೂ ಜನಸೇವೆಯಲ್ಲಿ ತೊಡಗಿದ್ದಾರೆ.   


ಸಿದ್ದರಬೆಟ್ಟದ ಶ್ರೀರಂಭಾಪುರಿ ಶಾಖಾಮಠದ ಶ್ರೀವೀರಭದ್ರ ಶಿವಾಚಾರ್ಯಸ್ವಾಮೀಜಿಗಳು ಜಿ ಎಸ್ ಬಿ  ರವರ ಸಾಧನೆಗಳ ಬಗ್ಗೆ ಮುಕ್ತ ಕಂಟದಿಂದ ಹೀಗೆ ಶ್ಲಾಘಿಸುತ್ತಾರೆ. "ತುಮಕೂರು ಜಿಲ್ಲೆಯಲ್ಲಿ ಯಾವುದೇ ನದಿಗಳು ಇಲ್ಲದಿದ್ದರೂ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದರೆ ಅದಕ್ಕೆ ಜಿ.ಎಸ್.ಬಸವರಾಜು ಕಾರಣ.ಇಂದಿನ ಎತ್ತಿನಹೊಳೆ ಯೋಜನೆಯ ಹಿಂದೆ ಜಿ.ಎಸ್.ಬಸವರಾಜು ಅವರ ಪಾತ್ರ ಮಹತ್ವದ್ದಾಗಿದೆ.ಧಾರ್ಮಿಕವಾಗಿ,ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಲವಾರು ಮಹತ್ವದ ಕಾರ್ಯಗಳನ್ನು ಜಿ.ಎಸ್.ಬಸವರಾಜು ಮಾಡಿದ್ದು, ಇವರ ಈ ಸೇವೆಯನ್ನು ಪರಿಗಣಿಸಿಯೇ ಶ್ರೀರಂಭಾಪುರಿ ಕ್ಷೇತ್ರ ಮಾನ್ಯರಿಗೆ ಶ್ರೀರೇಣುಕಾ ಚಾರ್ಯ ಪ್ರಶಸ್ತಿ ನೀಡಿ ಗೌರವಿಸಿದೆ".


ಜನಪರ ಕಾಳಜಿಯ ಜಿ ಎಸ್ ಬಿ  ರವರು ಇನ್ನೂ ಹೆಚ್ಚಿನ ಜನಸೇವೆ ಮಾಡಲು ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ ಎಂದು ಮನದುಂಬಿ ಹಾರೈಸುವೆ.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.

No comments: