10 May 2022

ಜಾಲಾರ ಹೂ ಪುಸ್ತಕ .ವಿಮರ್ಶೆ


 ವಿಮರ್ಶೆ ೩೩

ಜಾಲಾರ ಹೂ .


ಜಿ ವಿ ಆನಂದ ಮೂರ್ತಿ ರವರ ಜಾಲಾರ ಪ್ರಬಂಧಗಳನ್ನು ಓದಿದಾಗ ನಮ್ಮ ಹಳ್ಳಿಯ ಜೀವನ ನೆನಪುಗಳನ್ನು ಇವರ ಎಲ್ಲಾ ಪ್ರಬಂಧಗಳು ಕುತೂಹಲಕಾರಿ  ಹಾಗೂ ಓದಲು ಆಸಕ್ತಿಕರವಾಗಿವೆ.

ಜಾಲಾರ ಹೂವು,ಕೆರೆ ಕಟ್ಟೆ ಬಯಲಾಗಿ ಹೋಗುವಾಗ,

ಮಾಗಿಯ ದಿನಗಳು, ಪೂವಮ್ಮನ ಹೂತೋಟ,ನಾನ್ಯಾರಿಗಲ್ಲದವಳು,

ಅವ್ವ ಮತ್ತು ರಾಗಿರೊಟ್ಟಿ,ಕೇರಿಗೆ ಬಂದ ಯುಗಾದಿ,ಕವಿಯ ತೋಟದಲ್ಲಿ ಒಂದು ಯುಗಾದಿ,ಬೆಟ್ಟದ ದಾರಿಯಲ್ಲಿ,ತೊಗಲುಗೊಂಬೆಗಳೊಡನೆ ಒಂದು ದಿನ,ಮುಂತಾದ ಪ್ರಬಂಧಗಳು ನನಗೆ ಬಹಳ ಹಿಡಿಸಿದವು.

ಕನ್ನಡದಲ್ಲಿ ಅಪರೂಪವಾಗುತ್ತಿರುವ ಲಲಿತ ಪ್ರಬಂಧಗಳೆಂಬ ಪ್ರಕಾರಕ್ಕೆ ಉತ್ತಮ ಸೇರ್ಪಡೆಯಾಗಿ ರೂಪುಗೊಂಡಿವೆ. ಬೌದ್ಧಿಕತೆಯ ಭಾರವಿಲ್ಲದೆಯೂ ಚಿಂತನೆಯನ್ನು ಪ್ರಚೋದಿಸುವ ಗುಣವನ್ನು ಹೊಂದಿರುವ ಆನಂದಮೂರ್ತಿಯವರ ಬರವಣಿಗೆ ಓದುಗರ ನೆನಪನ್ನು ಉದ್ದೀಪಿಸಿ ಜೀವನೋತ್ಸಾಹವನ್ನು ಮೂಡಿಸುತ್ತದೆ. ಇಲ್ಲಿನ ಎಲ್ಲ ಪ್ರಬಂಧಗಳಲ್ಲಿ ಆತ್ಮಕಥೆಯ ಆಪ್ತತೆ ಇದೆ. ಕೇವಲ ವ್ಯಕ್ತಿಗಳ ಕಥನವಾಗದೆ ಬದಲಾಗಿರುವ ಜೀವನಕ್ರಮದ ಬಗ್ಗೆ, ಕಳೆದು ಹೋಗುತ್ತಿರುವ ಹಳ್ಳಿಯ ಬದುಕಿನ ಒಟ್ಟಂದದ ಬಗ್ಗೆ ವಿಷಾದದ ಅಲೆಯನ್ನು ಎಬ್ಬಿಸುವಷ್ಟು ಶಕ್ತವಾಗಿಯೂ ಇದೆ. ಅನಂದಮೂರ್ತಿಯವರ ಬರವಣಿಗೆಯಲ್ಲಿ ಬೌದ್ಧಿಕತೆಯ ಸೋಗು ಇಲ್ಲ, ಬದಲಾಗುತ್ತಿರುವ ಜಗತ್ತಿನ ಬಗ್ಗೆ, ಕಳೆದು ಹೋಗುತ್ತಿರುವ ಬದುಕಿನ ಚೆಲುವಿನ ಬಗ್ಗೆ ನೆನಪಗಳು ಉದ್ದೀಪಿಸುವ 'ಇದು ಸರಿಯಲ್ಲ' ಎಂಬ ಭಾವವನ್ನು ಓದುಗರಿಗೆ ಆಪ್ತವಾಗಿ ಧಾಟಿಸುವ ಗೆಳೆಯರ ಮಾತಿನ ಗುಣ ಇದೆ. ನಮ್ಮನ್ನೆಲ್ಲ ಆವರಿಸಿಕೊಂಡಿರುವ ಆಧುನಿಕತೆಯಿಂದ ನಾವು ಪಡೆದದ್ದೆಷ್ಟು, ಕಳಕೊಂಡದ್ದೆಷ್ಟು ಅನ್ನುವ ಪರಿಶೀಲನೆಗೆ ತೊಡಗಿಸುವಂತಿದೆ.


ಈ ಪುಸ್ತಕಕ್ಕೆ ಸುಂದರವಾದ ಮುನ್ನುಡಿ ಬರೆದ ಓ ಎಲ್ ನಾಗಭೂಷಣ ಸ್ವಾಮಿ ರವರು ಪ್ರಬಂಧ ಸಂಕಲನದ ಬಗ್ಗೆ ಸಕಾರಾತ್ಮಕವಾಗಿ ಬರೆದಿರುವರು.

ಇಲ್ಲಿನ ಒಂದೊಂದು ಪ್ರಬಂಧದಲ್ಲೂ ಲೇಖಕರು ಮಾತ್ರವಲ್ಲದೆ ಅವರು ತಮ್ಮ ಬಾಲ್ಯದಲ್ಲಿ ಕಂಡ, ಅವರ ಮನಸ್ಸಿನಲ್ಲಿ ಉಳಿದ ಒಬ್ಬಿಬ್ಬರು ವ್ಯಕ್ತಿಗಳ ಚಿತ್ರಣವೂ ಬೆರೆತಿದೆ. 'ಜಾಲಾರ ಹೂವು' ಪ್ರಬಂಧದಲ್ಲಿ ಬರುವ ದಾಸಿ, ಸುಕಾಲಿಗರು, 'ಜಾತ್ರೆ'ಯಲ್ಲಿ ಸೇರುವ ಜನಸಂದಣಿಯ ಚಿತ್ರಣ, ಕೆರೆ ಕಟ್ಟೆ ಬಯಲಾಗಿ' ಪ್ರಬಂಧದಲ್ಲಿ ಬರುವ ಗಂಗಣ್ಣಮ್ಮ, 'ಅವ್ವ ಮತ್ತು ರಾಗಿರೊಟ್ಟಿ'ಯ ಆವ್ವ ಹೀಗೆ, ಹಾಗಾಗಿ ಇಲ್ಲಿನ ಬರವಣಿಗೆ ಕೇವಲ ಖಾಸಗಿ ನೆನಪಷ್ಟೇ ಆಗಿ ಉಳಿಯದೆ ಇಡೀ ಊರಿನ ಕಥೆಯಾಗುವ ಗುಣ ಪಡೆದುಕೊಂಡಿವೆ,

ಆನಂದಮೂರ್ತಿಯವರು 'ನನ್ನ ಬಾಲ್ಯದ ದಿನಗಳಲ್ಲಿ ಅರಿವಿಗೆ ಹಾಕಿದ ಲೌಕಿಕದ ಎಲ್ಲ ಅನುಭವಗಳ ಕೈಸೆರೆಯಾಗಿದ್ದೇನೆ. ಅವುಗಳಿಂದ ಬಿಡುಗಡೆ ಹೊಂದುವುದೆಂದರೆ, ಮತ್ತೊಮ್ಮೆ ತಾಯಿಕರುಳಿನ ಸಂಬಂಧವನ್ನು ಹರಿದುಕೊಂಡು ಬಂದಂತೆ, ಇಂದಿನ ಯಾವ ಅನುಭವಗಳೂ ನನ್ನ ಎಳವೆಯ ದಿನಗಳ ಮುಗ್ಧ ಸೌಂದರ್ಯವನ್ನು, ಅದು ಕಲಿಸಿದ ಜೀವನದ ಪಾಠಗಳನ್ನು ಕಸಿದುಕೊಳ್ಳಲಾರವು. ಅಷ್ಟರಮಟ್ಟಿಗೆ ನಾನು ಇಂದಿನ ಅನುಭವಗಳ

ಮೇಲೆ ಜಯ ಸಾಧಿಸಿದ್ದೇನೆ' ಎನ್ನುತ್ತಾರೆ ಅವ್ರ ಮತ್ತು ರಾಗಿರೊಟ್ಟಿ, ಪ್ರಬಂಧದಲ್ಲಿ 'ತರ್ಕವಿಲ್ಲದ ಎಳವೆಯ ದಿನಗಳಲ್ಲಿ ನನ್ನ ತಿಳಿವಿಗೆ ಬಂದ ಸರಳ ವಿಚಾರಗಳಿವು! ನಮ್ಮ ಕುಟುಂಬವು ದಶಕಗಳಷ್ಟು ಕಾಲ ಸವೆಸಿದ ಹಾದಿಯನ್ನು ಹಿಂದಿರುಗಿ ನೋಡುತ್ತಾ, ಕಳೆದ ದಿನಗಳ ಅನುಭವಗಳನ್ನೆಲ್ಲ ಹೀಗೆ ಕವಳಿಗೆಯಂತೆ ಜೋಡಿಸಿಕೊಂಡು ನಿಮ್ಮ ಮುಂದಿಟ್ಟಿದ್ದೇನೆ. ಎನ್ನುತ್ತಾರೆ 'ನಾನ್ಯಾರಿಗಲ್ಲದವಳು' ಪ್ರಬಂಧದಲ್ಲಿ, ಈ ಎರಡು ಮಾತುಗಳು ಅವರ ಬರವಣಿಗೆಯ ಸ್ವರೂಪವನ್ನು ಸಮರ್ಪಕವಾಗಿ ವಿವರಿಸುತ್ತವೆ.

'ಹೂ ಪೇಟೆ' ಎಂಬಂಥ ಪದಗಳ ಪ್ರಯೋಗದಿಂದ ಹಿಡಿದು ಕೆರೆಯ ಅಲೆಗಳ ವರ್ಣನೆ 'ಮಾಗಿಯ ದಿನಗಳಲ್ಲಿ ನಮ್ಮ ಮುಖ, ತುಟಿ, ಅಂಗಾಲು ಇವುಗಳೆಲ್ಲ ಬಿರಿದು, ಉಂಡಿಗೆ ಹಾಕಿದ ಕಲ್ಲಂಗಡಿ ಹಣ್ಣಿನಂತೆ ಕಾಣುತ್ತಿದ್ದವು. ವತ್ತಿನಂಟೆ ಎದ್ದು ಮುಖಕ್ಕೆ ತಣ್ಣೀರು ಸೋಕಿಸಿದ. ಪ್ರಾಣವೇ ಹೋದಂತಾಗುತ್ತಿತ್ತು' ಅನ್ನುವ ಚಿತ್ರಣ, 'ಮಳೆ ಮತ್ತು ಬಿಸಿಲು ಪರಸ್ಪರ ಕೈ ಹಿಡಿದು ಬರುತ್ತಾ, ಹೋಗುತ್ತಾ ಆಟವಾಡುತ್ತಿದ್ದವು' 'ಎತ್ತ ನೋಡಿದರೂ ಸುತ್ತುವರೆದಿರುವ ಹೆಸರು ಕೋಟೆಯಂತಹ ಕಾಡು' ಅನ್ನುವಂಥ ನಿರೂಪಣೆಗಳು, ಸಂತೆಯ ವಿವರಗಳನ್ನು ಅವರು ಕಟ್ಟಿಕೊಡುವ ರೀತಿ ಇವೆಲ್ಲ ಆನಂದಮೂರ್ತಿಯವರಲ್ಲಿರುವ ಕವಿ ವ್ಯಕ್ತಿತ್ವದ ನಿದರ್ಶನಗಳಂತಿವೆ. ಶೇರು ಹರಿದ ನಂತರ ಜಾತ್ರೆಯು "ಕುಯಿಲು ಮಾಡಿದ ಹೊಲದಂತೆ ಬಣಗುಡುತ್ತಿರುತ್ತದೆ' ಎಂದು ಪುಟ್ಟ ವಾಕ್ಯದಲ್ಲಿ ಭಾವಪೂರ್ಣವಾಗಿ ವಿವರಿಸುವ ಆನಂದಮೂರ್ತಿಯವರು ಸಂತೆಯನ್ನು ವಿವರವಾಗಿ ವರ್ಣಿಸಲೂ ಬಲ್ಲರು, ಅವರ ಸಮತೆಯ ವರ್ಣನೆ, ಮನಸ್ಸನ್ನು ಸೆಳೆಯುತ್ತದೆ:

'ಸಂತೆಯೊಳಗೆ ನೀವೊಂದು ಸುತ್ತು ಕಣ್ಣಾಡಿಸುತ್ತಾ ಹೊರಟರೆ ಕಾಣುವ ಒಂದೊಂದೂ ಚಿತ್ರಗಳೂ ಒಂದೊಂದು ಪುಟ್ಟ ದ್ವೀಪಗಳಂತೆ ಆಕರ್ಷಿಸುತ್ತವೆ. ಒಂದೊಂದೂ ಒಂದು ಬಣ್ಣ ವಿನ್ಯಾಸ ಅಪರಿಮಿತ ಪರಿಮಳದ, ಬಿಡಿ ಬಿಡಿಯಾದ ಜೀವ ಇರುವ ತುಣುಕುಗಳೇ! ಇವುಗಳ ನಡುವೆ ಕಂಡೂ ಕಾಣದಂತಹ ಒಂದು ಒಳಹೆಣ್ಣಿಗೆ ಇತ್ತು. ಇವೆಲ್ಲವೂ ಕಲಾತ್ಮಕವಾಗಿ ಹೆಣೆದ ಕೌದಿಯಂತೆ ಕಣ್ಣಿಗೆ ಕಟ್ಟುತ್ತದೆ.

'ಸಂತ ಮೈದಾನದ ಒಂದು ಮೋಟುಮರದ ಕೆಳಗೆ ಚೌರ ಮಾಡುತ್ತಾ ಕುಳಿತಿರುವ ರಂಗಪ್ಪ, ಅದೇ ಸಾಲಿನಲ್ಲಿ ಕೋಳಿ ಮಾರುವ ಪೈಕಿಯವರು, ಅಲ್ಲಿನ ರಣಬಿಸಿಲಿಗೆ ಹೇಗೋ ತಲೆಮರೆಸಿಕೊಂಡು ಉಳಿದಿದ್ದ ತುಸು ನೆರಳಿನಲ್ಲಿ ಕುರಿ-ಮೇಕೆಗಳನ್ನು ಬಿಟ್ಟುಕೊಂಡು, ಕೈಯಲ್ಲಿ ಆಗಸ ಸೊಪ್ಪನ್ನು ಹಿಡಿದುಕೊಂಡು ನಿಂತಿರುತ್ತಿದ್ದ ಗೊಲ್ಲರು, ಅವರ ಕುರಿ ಪಟ್ಟಿಗಳನ್ನು ಎಳೆದಾಡುತ್ತಾ ಚೌಕಾಸಿ ಮಾಡುತ್ತಿದ್ದ ಕಟುಕರು, ಇತ್ತ ಇನ್ನೊಂದು ಸಾಲಿನಲ್ಲಿ ಸೀಗಡಿ-ಕರಿಮೀನು ಮಾರುವ ಜಮಾಲ್ ಸಾಬರು, ಅವರಿಂದ ತುಸು ದೂರಕ್ಕೆ ಮಡಕೆ ಕುಡಿಕೆ, ಬೋಗಣಿ, ಹರಿವೆ, ಮಗೆ, ಬಾಧ(ಗವಾಕ್ಷಿ), ಬಾನಿ, ಎಲೆ ಅಂಬುಗಳಿಗೆ ನೀರು ಹುಯ್ಯಲು ಬಳಸುವ ಗುಂಬಗಳು ಮತ್ತು ಮುಸುರಕೂನಿಗಳನ್ನು ತಮ್ಮ ಒಂಟೆತ್ತಿನ ಗಾಡಿಗಳ ಮುಂದೆ ಹರಡಿಕೊಂಡು ಕುಳಿತಿರುತ್ತಿದ್ದ ಕುಂಬಾರರು, ಸೀಗಡಿ-ಕರಿಮೀನು ಮಾರುವವರ ಹಿಂಭಾಗದಲ್ಲಿ ಎತ್ತುಗಳಿಗೆ ಲಯಬದ್ಧವಾಗಿ ಲಾಳ ಕಟ್ಟುತ್ತಿದ್ದ ಸಾಬರು, ಅವರ ಒತ್ತಿನಲ್ಲೇ

ದನಗಳಿಗೆ ಕೊಂದರೆಯುತ್ತಿದ್ದ. ದಕ್ಕೇರು. ಇವರುಗಳ ಆಜುಬಾಜಿನಲ್ಲಿ ಹಳೆ ಕೆರಗಳಿಗೆ ಉಂಗುಷ್ಟ ಹಾಕುತ್ತಲೋ ಅಥವಾ ಅಟ್ಟೆಗೆ ಮಳೆಹೊಡೆಯುವಲ್ಲಿ ಧ್ಯಾನಾಸಕ್ತರಾಗಿರುತ್ತಿದ್ದ ಮೆಟ್ಟು ಹೊಲೆಯುವವರು. ಇಡೀ ಸಮಾಜವನ್ನೇ ಮೊರೆಯುವ ನೂರೆಂಟು ಜಾತಿಯಿಂದ ಬಂದ

ಹೋಗುತ್ತದೆ.' ಈ ವರ್ಣನೆಯನ್ನು ಓದುತ್ತಾ ಮಾಸ್ತಿಯವರ ಕಥೆಯೊಂದರಲ್ಲಿ ಸಂತೆ ಮುಗಿದ ಮೇಲೆ ಮನಸ್ಸಿನಲ್ಲಿ ಮೂಡಿಕೊಳ್ಳುವ ವರ್ಣನೆ ಬಂದಿರುವುದು

ಕೇವಲ ಚಲುವಾದ: ನೆನಪಿನ ಚಿತ್ರಗಳಷ್ಟೇ ಆಗಿದ್ದಿದ್ದರೆ, ಈ ಪ್ರಬಂಧಗಳು ಯಶಸ್ಸು ಸೀಮಿತವಾಗುತ್ತಿತ್ತು. ಚಾಲಾರದಂಥ ಹೂವು ಜಾನಪದದಲ್ಲಿ ಉಳಿದಿರುವ ಹೇಳುತ್ತಾರೆ. ಹಳ್ಳಿಯ ಮಗು ಪಾಡಿಗೆ ಸಂತೆಯಲ್ಲಿ ಸೊಪ್ಪು ಮಾರಲು ಹೋಗಲೇಬೇಕಾದ ಶಾಲೆಯ ಗೆಳೆಯರನ್ನು, ಮೇಷ್ಟರನ್ನು ಕಂಡು ಅವಮಾನ, ನಾಚಿಕೆಗಳಿಂದ ಕುಗ್ಗಿ ಹೋಗುವುದನ್ನು ಹೇಳುತ್ತ, ಆಧುನಿಕತೆಯನ್ನು ತರುವ ಶಿಕ್ಷಣ ಬೇರು ಬಿಟ್ಟಿರುವ ಮಗುವಿನಲ್ಲಿ ಸೃಷ್ಟಿಸುವ ಭಾವಗಳನ್ನು ಬಯಲಾಗಿರುವುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತ ಆಧುನೀಕರಣಗಳು ನಮ್ಮ ಮೇಲೆ ಪ್ರಭಾವಗಳ ಬಗ್ಗೆ ವಿಷಾದ ಮೂಡುವಂತೆ ಮಾಡುತ್ತಾರೆ. ಮಾಗಿಯ ಕಾಲದಲ್ಲಿ ರೊಪ್ಪದ ಸಣ್ಣತಿಮ್ಮಕ್ಕ ಆಗಸಗಿತ್ತಿಯು ಕುಲವನ್ನು ಉಳಿಸಿದ ಕಥೆಯಂಥ ಪ್ರಸಂಗಗಳಲ್ಲಿ ವರ್ಗವೈಷಮ್ಯ, ಜಾತಿಗಳ ಕಟ್ಟುಪಾಡುಗಳ ಬಾಳುವಿಕೆಯ ಗಟ್ಟಿ ನಮ್ಮ ಗ್ರಾಮಗಳ ಇಂದಿಗೂ ಉಸಿರಾಡುತ್ತಿದೆ' ಎನ್ನುತ್ತಾರೆ. ಇವೆಲ್ಲವೂ ನೆನಪಿನಿಂದ ಮೂಡುವ ಆಪ್ತವಾಗುತ್ತವೆ.

“ಕೇರಿಗೆ ಬಂದ 'ಯುಗಾದಿ' ಪ್ರಬಂಧದ ಕೊನೆಯಲ್ಲಿ ಎಲ್ಲಿ ಹೋದವೋ ಆ ಕಾಲ ಎಂಬ ಬರುತ್ತದೆ. ಇದು ನೆನಪಿನ ಹಳಹಳಿಕೆಯಾಗಿ ಕಾಣುವುದಷ್ಟೇ ಅಲ್ಲದೆ ನಾವೆಲ್ಲ ಒಪ್ಪಿಕೊಂಡಿರುವ ಮರುಕವಿಲ್ಲದ ಅಭಿವೃದ್ಧಿಯ ಕಲ್ಪನೆ ಬದುಕಿನ ಕ್ರಮಗಳನ್ನೆಲ್ಲ ನಿರ್ದಯವಾಗಿ ಅಳಿಸಿಬಿಡುತ್ತಿರುವುದರ ವ್ಯಾಖ್ಯಾನದಂತೆಯೂ ಕೇಳುತ್ತದೆ. ಅಭಿವೃದ್ಧಿಯನ್ನು ಮಾತ್ರ ಮುಖ್ಯವೆಂದು ಭ್ರಮಿಸುವುದಕ್ಕಿಂತ ವೈವಿಧ್ಯಮಯವಾದ ಬದುಕಿನಲ್ಲಿ ಸಂತೋಷವನ್ನೂ ಹೇಗೆ ಅನ್ನುವ, ಅದು ಎಂಬ ಆತಂಕವನ್ನೂ ಓದುಗರಲ್ಲಿ ಮೂಡಿಸುತ್ತದೆ.

ಕಥೆಗಳಾಗಿ ಹಿಗ್ಗಬಹುದಾದ, ಕಾದಂಬರಿಯಾಗಿ ವಿಸ್ತರಿಸಿಕೊಳ್ಳಬಹುದಾದ ಬೀಜಗಳು ಪ್ರಬಂಧಗಳಲ್ಲಿವೆ. ಆನಂದಮೂರ್ತಿಯವರು ಮತ್ತಷ್ಟು ಬರೆಯಲಿ ಎಂಬ ಆಸೆಯನ್ನು ಹುಟ್ಟಿಸುವಂತಿವೆ.

ಬನ್ನಿ ಜಾಲಾರ ಪುಸ್ತಕ ಓದುತ್ತಾ ಜಾಲಾರಾ ಸುಮದ ಘಮವನ್ನು ಆಘ್ರಾಣಿಸುತ್ತಾ ನಮ್ಮ ಬಾಲ್ಯ ಮತ್ತು ಹಳ್ಳಿಯ ಜೀವನದ ನೆನಪುಗಳೊಂದಿಗೆ ಮತ್ತೊಮ್ಮೆ ವಿಹರಿಸೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



No comments: