16 February 2022

ದೇವರು ಕೊಟ್ಟ ಗಿಪ್ಟ್. ಕತೆ


 



ದೇವರು ಕೊಟ್ಟ ಗಿಪ್ಟ್.


ಈ ವರ್ಷದ ಹುಟ್ಟು ಹಬ್ಬದ ಮರುದಿನವೇ ಮುಂದಿನ ಹುಟ್ಟು ಹಬ್ಬಕ್ಕೆ ಕೌಂಟ್ ಡೌನ್ ಮಾಡುತ್ತಾ , ಪದೇ ಪದೇ ಅಪ್ಪ ಅಮ್ಮ ಮತ್ತು ತಂಗಿಗೆ ನನ್ನ ಹುಟ್ಟು ಹಬ್ಬ ಇಷ್ಟು ದಿನ ಉಳಿದಿದೆ ಎಂದು ಮುಂಬರುವ ಹಬ್ಬಕ್ಕೆ ದಿನವೂ ತಯಾರುಗುತ್ತಿದ್ದ ತರಲೇ ಸುಬ್ಬ! 

ಹೆಸರು ಸುಬ್ರಮಣ್ಯ ಆದರೂ ಅವನ ತರಲೆಗಳಿಂದ ಮನೆಯಲ್ಲಿ ತರಲೇ ಸುಬ್ಬನೆಂಬ ಹೆಸರು ಖಾಯಂ ಆಗಿತ್ತು. 

ಓದು ಬರೆಹದಲ್ಲಿ ಆರಕ್ಕೇರದ ಮೂರಕ್ಕಿಳಿಯದ ಸುಬ್ಬ .ಮನೆಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ .ಅಷ್ಟರ ಮಟ್ಟಿಗೆ ಅನ್ಯರಿಗೆ ನಿರುಪದ್ರವಿ ಆದರೆ ಮನೆಯಲ್ಲಿ ಮಿತಿಮೀರಿದ ತರಲೆ.


ಅಂತೂ ಅವನು ಕಾತುರದಿಂದ ಕಾಯುವ ದಿನ ಸಮೀಪಿಸಿತ್ತು . ಆ ನಗರದ ಬಹುದೊಡ್ಡ ಬಟ್ಟೆ ಮಳಿಗೆಗೆ ಕರೆದುಕೊಂಡು ಹೋಗಿ ತಂದೆ ಉತ್ತಮ ಬ್ರ್ಯಾಂಡ್ ನ ಬಟ್ಟೆಗಳನ್ನು ಕೊಡಿಸಿದರು. ಕೇಕ್ ಪ್ಯಾಲೇಸ್ ನಲ್ಲಿ ವೆನಿಲಾ ಐಸ್ ಕೇಕ್ ಆರ್ಡರ್ ಮಾಡಿ ಬಂದರು. ಅಮ್ಮ ನಾಳಿ‌ನ ಹುಟ್ಟು ಹಬ್ಬದ ಸಂಭ್ರಮಕ್ಕೆ ಸುಬ್ಬನ ಮೆಚ್ಚಿನ ಸಬ್ಬಕ್ಕಿ ಪಾಯಸ ಮಾಡಲು ತಯಾರಿ ಮಾಡಿಕೊಂಡರು.

ಬೆಳಿಗ್ಗೆ ಬೇಗನೆ ಎದ್ದು ಮಗನಿಗೆ ವಿಶ್ ಮಾಡಿದ ಅಮ್ಮ .ಯಾಕೋ ತಲೆನೋವು ಎಂದು ಅಮೃತಾಂಜನ್ ಸವರಿಕೊಂಡರು. ಆದರೂ ತಲೆನೋವು ಕಡಿಮೆಯಾಗದೇ ಕೋಣೆಗೆ ಹೋಗಿ ಸ್ವಲ್ಪ ಕಾಲ ಮಲಗಿದರು .ನೋವು ಹೆಚ್ಚಾಗತೊಡಗಿತು. ಆಸ್ಪತ್ರೆಗೆ ಹೋಗೋಣ ಎಂದರು ಡ್ಯೂಟಿಗೆ  ಹೊರಟಿದ್ದ ಗಂಡ ರಜೆ ಹಾಕಿ  ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾದರು ನಾನೂ ಆಸ್ಪತ್ರೆಗೆ ಬರುವೆ ಎಂದು ಮಗ ಹೇಳಿದಾಗ ಬೇಡ ಶಾಲೆಗೆ ಹೋಗು ಎಂದು ಹೇಳಿ ಆಸ್ಪತ್ರೆ ಕಡೆ ಹೊರಟರು. ಆಸ್ಪತ್ರೆಯಲ್ಲಿ ಅದೂ ಇದೂ ಟೆಸ್ಟ್ ಗಳು ಆದ ಬಳಿಕ ಅಮ್ಮನಿಗೆ ಅನೀಮಿಯಾ ಎಂದು ತಿಳಿದು ಅಡ್ಮಿಟ್ ಮಾಡಿದರು. ಸಂಜೆ ಮಗ ಆಸ್ಪತ್ರೆಗೆ ಬಂದ. ನಾನು ಇವತ್ತು ನಿನಗೆ  ಸಬ್ಬಕ್ಕಿ ಪಾಯಸ ಮಾಡ್ಬೇಕು, ನೀನು ಕೇಕ್ ಕಟ್ ಮಾಡೋದ ನೋಡ್ಬೇಕು ಅಂದ್ಕೊಂಡೆ ,ಈಗ ಈ ಆಸ್ಪತ್ರೆಯ ಬೆಡ್ ಮೇಲಿದೇನೆ, ಈ ವರ್ಷ ನಿನಗೆ ಏನೂ ಗಿಪ್ಟ್ ಕೊಡೋಕೆ ಆಗ್ತಾ ಇಲ್ಲ. ಎನೋ ಮಾಡೋದು? ಎಂದು ಬೇಸರದಿ ಅಮ್ಮ ಅಂದಾಗ " ಅಮ್ಮಾ ಅದನ್ನೆಲ್ಲಾ ತಲೆ ಕೆಡಿಸ್ಕೊ ಬೇಡ  ಇದುವರೆಗೆ ಪ್ರತಿವರ್ಷ ನಾನು ಹುಟ್ಟಿದ ದಿನಾನಾ ಗ್ರಾಂಡ್ ಆಗಿ ಆಚರಣೆ  ಮಾಡಿದಿರ, ನನಗೆ ಈಗ ಏನೂ ಬೇಡ ನೀನೆ ನನಗೆ ದೇವರು ಕೊಟ್ಟ ದೊಡ್ಡ ಗಿಪ್ಟ್ .ಸುಮ್ನೆ ರೆಸ್ಟ್ ತಗೋಳಮ್ಮ.ಆಯಾಸ ಆಗತ್ತೆ ಜಾಸ್ತಿ ಮಾತಾಡ್ಬೇಡ.ಎಂದ ಮಗನ ನೋಡಿ ಅವಳ ಕಣ್ಣಿಂದ ನಾಲ್ಕು ಹನಿಗಳು ಉದುರಿದವು....


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.

ತುಮಕೂರು


No comments: