04 January 2022

ಸ್ವರ್ಗ ನರಕ .

 

ಸ್ವರ್ಗ



ಹುಚ್ಚಾಟವಾಡುತಾ ಕಚ್ಚಾಟವೇಕೆ 

ನಮ್ಮ  ನಮ್ಮಲ್ಲಿ ಪೊಳ್ಳು ಘೋಷಣೆ ಮಾಡುತ್ತಾ ನಮ್ಮದೇ ಶ್ರೇಷ್ಠ ಜಾತಿ, ಧರ್ಮ, ವರ್ಗ |

ಮೊದಲು ಕೂಡಿ ಬಾಳುವುದ ಕಲಿಯಿರಿ

ಆಗ ಧರೆಗಿಳಿದು ಬರುವುದು ಸ್ವರ್ಗ||



ನರಕ 


ವಸುಂದರೆಯ ಮೇಲೆ ದೌರ್ಜನ್ಯ

ಎಸಗಿ ಅತ್ಯಾಸೆಯಿಂದ ಸಂಪಾದನೆ

ಮಾಡುತ್ತಿದ್ದಾರೆ ಧನ ಕನಕ|

ಇದರ ಪರಿಣಾಮವಾಗಿ ಮಾರಣಾಂತಿಕ ವೈರಸ್‌ಗಳು,ಭೂಕಂಪ,

ಸುನಾಮಿ ಇತ್ಯಾದಿಗಳ ಮೂಲಕ

ಭುವಿಯಲೇ ಕಾಣುತಿಹೆವು ನರಕ|



ಸಿಹಿಜೀವಿ

ಸಿ ಜಿ ವೆಂಕಟೇಶ್ವರ 

ತುಮಕೂರು


No comments: