23 January 2022

ಏಕಲವ್ಯ .ಶಿಶುಗೀತೆ .


 



ಏಕಲವ್ಯ .



ಬಿಲ್ಲು ವಿದ್ಯೆ ಕಲಿವ ಆಸೆಯಿಂದ

ಏಕಲವ್ಯ ಬಂದನು 

ದ್ರೋಣರನ್ನು ಕಂಡು ತನ್ನ

ಮನದ ಬಯಕೆ ಹೇಳಿದನು.


ನಿರಾಕರಿಸಿ ದ್ರೋಣರೆಂದರು ನನ್ನ ವಿದ್ಯೆ  ಕ್ಷತ್ರಿಯರಿಗೆ ಮಾತ್ರ ಮೀಸಲು 

ಬೇಸರದಿ ಹಿಂದೆ ತಿರುಗಿ ಹೊರಟ

ಅವನು ಸ್ವಯಂ ವಿದ್ಯೆ ಕಲಿಯಲು .


ದ್ರೋಣರ ವಿಗ್ರಹವನು ಪ್ರತಿಷ್ಠಾಪಿಸಿ

ಬಿಲ್ವಿದ್ಯೆ ಕಲಿಯಲಾರಂಭಿಸಿದ

ಶಬ್ಧವೇದಿ ವಿದ್ಯೆ ಕಲಿತು ಬಿಲ್ಲಿನಿಂದ 

ಪ್ರಾಣಿಯನ್ನು ವಧಿಸಿದ .


ಅರ್ಜುನನಿಗೆ ವಿಷಯ ತಿಳಿದು

ಹೊಟ್ಟೆಯುರಿಯಲಿ ಬೆಂದನು

ದ್ರೋಣರಿಗೆ ಚಾಡಿ ಹೇಳಿ 

ಏಕಲವ್ಯನ ಹೆಬ್ಬೆಟ್ಟನು ಪಡೆದನು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

No comments: