14 August 2021

ಸ್ವಾತಂತ್ರದ ಕ್ರಾಂತಿ ದೀಪಗಳು


 


 ಸ್ವಾತಂತ್ರ್ಯ  ಕ್ರಾಂತಿ ದೀಪಗಳು


ಸ್ವಾತಂತ್ರ ಸೇನಾನಿಗಳೇ  ನಿಮಗಿದೋ ನಮ್ಮ ನಮನಗಳು |

ಮರೆಯಲಿ ಹೇಗೆ ನೀವು ಸ್ವಾತಂತ್ರ್ಯದ ಕ್ರಾಂತಿ ದೀಪಗಳು.||


ಸ್ವಾತಂತ್ರ್ಯ ನಮ್ಮ ಜನ್ಮಸಿದ್ದ ಹಕ್ಕೆಂದು

ಪ್ರತಿಪಾದಿಸಿದ ಲಾಲ್ ಬಾಲ್ ಪಾಲ್

ನಿಮ್ಮ ಬಲಿದಾನ ಹೇಗೆ ಮರೆಯಲಿ 

ಸ್ವಾತಂತ್ರ್ಯ ಹಬ್ಬದಂದು ನಿಮಗೆ ನೂರೊಂದು ನಮನ.||


ಪರಂಗಿಯವರ ವಿರುದ್ದ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯ ವಿರುದ್ದ ಸಿಡಿದೆದ್ದ ವೀರ ರಾಣಿ ಝಾನ್ಸಿ ಲಕ್ಷ್ಮಿ ಬಾಯಿರವರಿಗೆ 

ಭಾರತೀಯರ ಹೃದಯ ತುಂಬಿದ ನಮನ.||


ಬ್ರಿಟೀಷರಿಗೆ ಸಿಂಹ ಸ್ವಪ್ನ ವಾಗಿದ್ದ  ವಿದೇಶಿ ನೆಲದಲ್ಲಿ ಭಾರತ ರಾಷ್ಟ್ರೀಯ ಸೇನೆ ಕಟ್ಟಿ ಸ್ವಾತಂತ್ರ್ಯ ತಂದುಕೊಟ್ಟ ನಿಜವಾದ "ನೇತಾಜಿ "ನಿಮಗೆ ಕೋಟಿ ನಮನ.||


ಸ್ವಾತಂತ್ರ್ಯವೇ ನನ್ನ ಉಸಿರು ಎಂದು ಗುಡುಗಿದ ತಾಯ್ನಾಡಿಗೆ ಬಲಿದಾನಗೈಯ್ದ 

ಚಂದ್ರಶೇಖರ್ ಆಜಾದ್ ನಿಮಗೆ ನಮ್ಮ ಮನಪೂರ್ವಕ ನಮನ.||


ಭತ್ತದ ಬದಲು ಬಂದೂಕು ನೆಡಿರೆಂದು ಕೆಂಪು ಮೂತಿಯವರ ವಿರುದ್ದ ಗುಡುಗಿ

ಸ್ವಾತಂತ್ರ್ಯ ಸಂಗ್ರಾಮವೆಂಬ ಯಜ್ಞದಲ್ಲಿ ಹವಿಸ್ಸಾದ ಭಗತ್ ಸಿಂಗ್ ರವರಿಗೆ ಮನದಾಳದ ನಮನ.||


ಕರಿನೀರಿನ ಶಿಕ್ಷೆ ಅನುಭವಿಸಿದರೂ ಭಾರತದ ಭವ್ಯ ಭವಿಷ್ಯದ ಕನಸು ಕಂಡು, ಕಾರಗೃಹದ ಕತ್ತಲೆ ಅನುಭವಿಸಿ ನಮಗೆ ಬೆಳಕು ನೀಡಿದ ನಂದಾದೀಪ ವಿ .ಡಿ ಸಾವರ್ಕರ್ ‌ನಿಮಗೆ ಭಕ್ತಿಯ ನಮನ .||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು




No comments: