08 July 2021

ಗುಂಡಿಗೆ ಹನಿಗವನ .


 


*ಗುಂಡಿಗೆ*


ಗಡಿಯಲ್ಲಿ ಶತೃಗಳ

ಒಳಸಂಚನ್ನು ಅರಿತು

ಒಬ್ಬನೇ ನುಗ್ಗಿ 

ದೇಶ ರಕ್ಷಣೆಗಾಗಿ

ಹೋರಾಡಿದ ಸೈನಿಕ

ಹತ್ತಾರು ಉಗ್ರರು

ಹತರಾದರು ಅವನ

ಗುಂಡಿಗೆ|

ಮರೆಮಾಚಿ ಬಂದ

ಶತೃ ಕೊಂದೇ ಬಿಟ್ಟ

ವೀರಸೈನಿಕನ ,

ಅವನ ಜೇಬಲಿ

ಸಿಕ್ಕ ಪತ್ರ ಓದಿದ

ಶತೃ ಸೈನಿಕನ‌ 

ಕಣ್ಣಾಲಿಗಳು ತುಂಬಿದವು,

ಪತ್ರದಲ್ಲಿ ಬರೆದಿತ್ತು

"ಬೇಗ ಬಂದು ಬಿಡು

ನಿಂತಿದೆ ನಿನ್ನ ಮಗನ

ಗುಂಡಿಗೆ"||


"ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


No comments: