07 June 2021

ನನ್ನ ಕುಟುಂಬಕ್ಕೊಂದು ಪತ್ರ


 


 


 ನನ್ನ ಕುಟುಂಬಕ್ಕೊಂದು ಪತ್ರ 


ಆತ್ಮೀಯ ಕುಟುಂಬಕ್ಕೆ

ನಮಸ್ಕಾರಗಳು....

ನೀನೀಗ ಸೌಖ್ಯವಾಗಿಲ್ಲ ಎಂದು ನನಗೆ ಗೊತ್ತು ಆದರೂ ನಿನ್ನ ಸಮಾಧಾನ ಮಾಡಲು ಈ ಪತ್ರ ಬರೆಯುತ್ತಿರುವೆ .

ಈ ಪತ್ರ ತಲುಪಿದ ಕೂಡಲೆ ಪತ್ರ ಬರೆಯುವುದನ್ನು ಮರೆಯದಿರು.


ನಮ್ಮದು ಜೇನು ಗೂಡು, ಅವಿಭಕ್ತ ಕುಟುಂಬದ ಸವಿಯನ್ನು ಸವಿದವರು ನಾವು , ಅಜ್ಜಿ, ಅಮ್ಮ,ಅಪ್ಪ, ದೊಡ್ಡಪ್ಪ,, ಚಿಕ್ಕಪ್ಪ, ಅಣ್ಣ, ತಂಗಿ, ಎಲ್ಲರೂ ಸೇರಿ ನಗು ನಗುತಾ ಬಾಳುತ್ತಿದ್ದೆವು, ಆರು ವರ್ಷಗಳ ಹಿಂದೆ ನಮ್ಮ ಅಜ್ಜಿ ದೈವಾದೀನರಾದರು, ಅಂದು ನಮ್ಮ ದೊಡ್ಡ ಕೊಂಡಿ ಕಳಚಿತು, ಅವರೊಂದಿಗಿನ ಒಡನಾಟದ ಸವಿನೆನಪುಗಳೊಂದಿಗೆ ಜೀವಿಸಿದೆವು, ಹಬ್ಬಹರಿದಿನಗಳಲ್ಲಿ ಸಂಭ್ರಮಿಸಿದೆವು, ಸಣ್ಣ ಪುಟ್ಟ ಮನಸ್ತಾಪಗಳನ್ನು ಕುಳಿತು ಮಾತನಾಡಿ ಸರಿಪಡಿಸಿಕೊಂಡೆವು, ನೆರೆಹೊರೆಯವರ, ಸಂಬಂಧಿಗಳ ಕಷ್ಟ ಸುಖಗಳಿಗೆ ಭಾಗಿಯಾದೆವು, ಮೂರು ವರ್ಷಗಳ ಹಿಂದೆ ನಮ್ಮ ಸಹೋದರಿ ನಮ್ಮ ಕುಟುಂಬವನ್ನು ಅಗಲಿದರು , ಅವರ ಅಗಲಿಕೆಯ ನೋವು ಮರೆತು ನಮ್ಮ ಕುಟುಂಬದಲ್ಲಿ ವಸಂತನಾಗಮನವಾಯಿತು ಎಂದು ಭಾವಿಸಿದ್ದ ನಮಗೆ ಹದಿನೈದು ದಿ‌ನಗಳ ಹಿಂದೆ ನಮ್ಮ ಅತ್ತೆಯವರು ನಿಧನರಾದ ಸುದ್ದಿಯನ್ನು ಅರಗಿಸಿಕೊಳ್ಳಲು ಸಾದ್ಯವೇ ಆಗಲಿಲ್ಲ,ಗಾಯದ ಮೇಲೆ ಬರೆ ಎಳೆದಂತೆ ನಮ್ಮ ಕುಟುಂಬಕ್ಕೆ ಬಂದ ಮತ್ತೊಂದು ಸಿಡಿಲಾಘಾತ,ಈ ಜೂನ್ ಮೂರು 2021 ರಂದು ನಮ್ಮ ಮಾವನವರು ನಮ್ಮನ್ನು ತೊರೆದು ನಡೆದು ಬಿಟ್ಟರು, ಈ ಆಘಾತದಿಂದ ನಾವೀಗ ಚೇತರಿಕೊಳ್ಳಬೇಕಿದೆ, 

ಸಾವು ಎಲ್ಲರಿಗೂ ನಿಶ್ಚಿತ ಎಂದು ತಿಳಿದಿದ್ದರೂ ಅಕಾಲಿಕ ಸಾವುಗಳು ಕುಟುಂಬಕ್ಕೆ ಬಹಳ ನೋವು ನೀಡುತ್ತವೆ , ಒಟ್ಟಿನಲ್ಲಿ ಈಗ ನಮ್ಮ ಕುಟುಂಬಕ್ಕೆ ಆಶಾಡದ ಕಾಲ ,ವಸಂತನಾಗಮನ ಬರುವುದು ಎಂಬ ನಿರೀಕ್ಷೆಯಲ್ಲಿ ಇರುವ ನಿನ್ನ ಕುಟುಂಬದ ಸದಸ್ಯ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು 

No comments: