04 June 2021

ಪ್ರೀತಿಯ ಆಶ್ರಮ .ಲೇಖನ


 



ಪ್ರೀತಿಯ ಆಶ್ರಮ..ಲೇಖನ, ಪತ್ರ


ನಿನಗೆ ಹೃತ್ಪೂರ್ವಕ ವಂದನೆಗಳು


ದೇಶ ವಿದೇಶಗಳಲ್ಲಿ ನೂರಾರು ಶಾಖೆಗಳ ಹೊಂದಿರುವ ಓ ನನ್ನ ಹೆಮ್ಮೆಯ ರಾಮಕೃಷ್ಣ ಆಶ್ರಮವೇ ನಿನಗೆ ನನ್ನ ಸಾಸಿರ ನಮನಗಳು.


೧೯೯೦ ದಶಕದಲ್ಲಿ ಹಿರಿಯರಿನಲ್ಲಿ  ನಾನು ಪದವಿ ಮತ್ತು ಟಿ ಸಿ ಎಚ್ ವ್ಯಾಸಾಂಗ ಮಾಡುವಾಗ ಗಾಯತ್ರಿ ದೇವಿ ಭಟ್ ಎಂಬ ಮಾತೆಯವರ ಸಂಪರ್ಕ ಲಬಿಸಿತು, ಪತಿಯು ಕೆನರಾ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದರು ಅವರ ಮನೆಯು ರಾಮಕೃಷ್ಣ ಶಾರದಾಶ್ರಮವಾಗಿತ್ತು, ಅಲ್ಲಿ ನಡೆವ ಸತ್ಸಂಗಗಳು ನನ್ನ ಜೀವನದ ದಿಕ್ಕನ್ನೇ ಬದಲಿಸಿದವು, ಅಲ್ಲಿ ನನಗೆ, ವೀರೇಶಾನಂದರು, ನಿರ್ಭಯಾನಂದರ ಪರಿಚಯವಾಯಿತು, ತನ್ಮೂಲಕ ತುಮಕೂರು, ಮತ್ತು ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮ ನೋಡುವ ಸೌಭಾಗ್ಯ ಲಬಿಸಿತು.


ಅದರಲ್ಲೂ ಪೊನ್ನಂಪೇಟೆ ಆಶ್ರಮದಲ್ಲಿ ಸ್ವಾಮಿ ಜಗದಾತ್ಮಾನಂದ ರ ದರ್ಶನ ಮಾಡಿ ಪುನೀತನಾದೆ .ಒಂದೆರಡು ದಿನ ಆಶ್ರಮದಲ್ಲಿ ವಾಸ ಮಾಡಲು ಅದೃಷ್ಟ ಲಭಿಸಿದ್ದು ನನ್ನ ಪೂರ್ವ ಜನ್ಮದ ಪುಣ್ಯವೇ ಸರಿ. ಆಶ್ರಮ ವಾಸಿಗಳ ದಿನಚರಿ ಬೆರಗು ಮೂಡಿಸುವಂತದು.ಬೆಳಿಗ್ಗೆ ನಾಲ್ಕು ವರೆಗೆ ಎದ್ದರೆ ನಿತ್ಯಕರ್ಮ ಮುಗಿಸಿ ಬೆಳಗಿನ ಭಜನೆ ಸತ್ಸಂಗ ದಲ್ಲಿ ಸಮಯ ಸೇರಿದ್ದದ್ದೇ ತಿಳಿಯುವುದಿಲ್ಲ, ಅಂದು ಸುಮಾರು ತೊಂಬತ್ತು ವರ್ಷ ವಯಸ್ಸಿನ ಸ್ವಾಮಿ ಗಳು ಭಜನೆ ಹೇಳಿಕೊಡುತ್ತಿದ್ಧರೆ ನಾವು ಮಂತ್ರ ಮುಗ್ದರಾಗಿ ಹಾಡುತ್ತಿದ್ದೆವು.


ಬೆಳಗಿನ ಉಪಾಹಾರವಾದ ಬಳಿಕ ಆಶ್ರಮದ ಸುತ್ತ ಇರುವ ತೋಟದಲ್ಲಿ ಆಸಕ್ತರು ಕೆಲಸ ಮಾಡಬಹುದಾಗಿತ್ತು, ಕೆಲವರು ಗ್ರಂಥಾಲಯಕ್ಕೆ ಭೇಟಿ ಕೊಟ್ಟು ಅಧ್ಯಯನ ಮಾಡುತ್ತಿದ್ದೆವು.


ಮಧ್ಯಾಹ್ನ ದ ಊಟದ ಬಳಿಕ ವಿಶ್ರಾಂತಿ ಸಂಜೆಯ ಸತ್ಸಂಗ ದೇವರ ನಾಮ ಹಾಡುವುದು ,ಸ್ವಾಮೀಜಿಯವರ ಪ್ರವಚನ ಊಟದ ನಂತರ ಅಂದಿನ ದಿನಚರಿ ಮೆಲುಕು ಹಾಕಿ ಮಲಗುವುದು.


ನಿಜಕ್ಕೂ ಆಶ್ರಮದಲ್ಲಿ ನಾನು ಕಳೆದ ಆ ದಿನಗಳು ನನ್ನ ಜೀವನದ ಸುವರ್ಣ ದಿನಗಳು 


ಮತ್ತೊಮ್ಮೆ  ಆಶ್ರಮಕ್ಕೆ ಬರಲು ನಾನು ಕಾತುರನಾಗಿರುವೆನು ನಿರೀಕ್ಷಿಸುತ್ತಿರು  


ಇಂತಿ‌ ನಿನ್ನ ವಿಶ್ವಾಸಿ


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: