17 June 2021

ಮರಳು ಉಳಿಸು ಓ ಮರುಳೆ


 ಮರಳು ಮರಳೆಂದೇಕೆ ಮರುಗುವೆ ಓ ಮರುಳೆ ಲೇಖನ



ಅಕ್ರಮ ಮರಳು ಗಣಿಗಾರಿಕೆ ಇಂದು ಒಂದು ಮಾಫಿಯಾ ಅಗಿ ಪರಿವರ್ತನೆಯಾಗಿದೆ ,ಇಲ್ಲಿ ಎಲ್ಲಾ ಸುವ್ಯವಸ್ಥಿತ ಯಾರಿಗೆ ಎಷ್ಟು ಬೇಕೋ ಅಷ್ಟು ತಲುಪಿ ಸಾವಿರಾರು ಕೋಟಿ ರೂಪಾಯಿಗಳು ಕೈ ಬದಲಾಗುತ್ತವೆ.


ಇದಕ್ಕೆ ಹಲವಾರು ಕಾನೂನಿನ ಬಲವಿದ್ದರೂ  ಬೇಲಿಯೇ ಎದ್ದು ಹೊಲ ಮೇದರೆ ಕಾವಲುಗಾರನೇನು ಮಾಡಿಯಾನು,


ನಮ್ಮ ಅಂತರ್ಜಲ ಈ ಮಟ್ಟಿಗೆ ಕುಸಿಯಲು ಮರಳು ಗಣಿಗಾರಿಕೆಯ ಕೊಡುಗೆಯೂ ಬಹಳ ಇದೆ.


ಹಾಗಾದರೆ ಇದಕ್ಕೆ ಕೊನೆಯೆಂದು


೧ ನಾವೂ ನೀವು ಮನಸ್ಸು ಮಾಡಬೇಕು

೨ ಎಂ ಸ್ಯಾಂಡ್ ವ್ಯಾಪಕವಾಗಿ ಬಳಕೆಯಾಬೇಕು

೩ ಒಳ್ಳೆಯ ಗುಣಮಟ್ಟದ ಎಂ ಸ್ಯಾಂಡ್ ಲಬ್ಯವಾಗುವಂತೆ ನೋಡಿಕೊಳ್ಳಬೇಕು.

೪ ತಜ್ಞರು ಎಂ ಸ್ಯಾಂಡ್ ಬಳಕೆ ಬಗ್ಗೆ ಜನರ‌ ಮನ ಒಲಿಸಬೇಕು.

೫ ನದೀ ಪಾತ್ರದಲ್ಲಿ ಮರಳು ಗಣಿಗಾರಿಕೆ ಮಾಡಿದವರಿಗೆ ಶೀಘ್ರವಾಗಿ ಕಠಿಣವಾದ ಶಿಕ್ಷೆ ವಿಧಿಸಬೇಕು.

೬ ಪರಿಸರದ ಅಮೂಲ್ಯವಾದ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವೆ ಎಂದು ನಾವೆಲ್ಲರೂ ಪಣತೊಡಬೇಕಿದೆ.


ಮುಗಿಸುವ ಮುನ್ನ ಒಂದು ಹನಿ


ನಿರ್ಮಾಣ ಕಾಮಗಾರಿಗೆ

ನದಿಯ ಬಯಲಿನದೇ

ಆಗಬೇಕೆಂದು ಬಯಸುವೆಯೇಕೆ?

ಓ ಮರುಳೆ|

ಯಂತ್ರಗಳಿಂದ ತಯಾರಿಸದ

ಎಂ ಸ್ಯಾಂಡ್ ಕೂಡ

ಮರಳೆ|



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: