27 June 2021

ನಂಬಿಕಾರ್ಹ ಗೋಡೆ.ಲೇಖನ


 


ನಂಬಿಕಾರ್ಹ ಗೋಡೆ! ಲೇಖನ


ನನ್ನಿಷ್ಟದ ಕ್ರೀಡಾಪಟು ಭಾರತದ ಗೋಡೆ ,ಆನ್ ಫೀಲ್ಡ್ ಮತ್ತು ಆಫ್ ಪೀಲ್ಡ್ ನಲ್ಲೂ ಸಂಭಾವಿತ ಸಿಂಪಲ್ , ವಿವಾದಗಳಿಂದ ಮುಕ್ತ ರಾಹುಲ್ ದ್ರಾವಿಡ್.


ಕರ್ನಾಟಕದ ರಾಹುಲ್ ದ್ರಾವಿಡ್ ಅವರ ಸ್ಥಿರ ಬ್ಯಾಟಿಂಗ್ ಪ್ರದರ್ಶನದಿಂದ ಪ್ರಪಂಚಾದ್ಯಂತ ಮನೆ ಮಾತಾಗಿದ್ದಾರೆ, ಎಲ್ಲಾ ರೀತಿಯ ಫಾರ್ಮ್ಯಾಟ್ ನಲ್ಲಿ ಆಡಿರುವ ದ್ರಾವಿಡ್ ರವರು ಟೆಸ್ಟ್ ಕ್ರಿಕೆಟ್ ನಲ್ಲಿ ಅವರು ಬ್ಯಾಟ್ ಹಿಡಿದು ವಿಕೆಟ್ ಮುಂದೆ ನಿಂತರೆ ವಿಕೆಟ್ ಗಳು ಅಲುಗಾಡುವುದೇ ಇಲ್ಲ ಚೆಂಡು ಎಸೆಯುವವರು ಬಸವಳಿದು ಬಿಡುವರು .ಎಲ್ಲಾ ಬೌಲರ್‌ಗಳಿಗೆ ಚೆನ್ನಾಗಿಯೇ ನೀರು ಕುಡಿಸಿದ ಕೆಲವೇ ದಾಂಡಿಗರಲ್ಲಿ ನಮ್ಮ ದ್ರಾವಿಡ್ ಕೂಡ ಒಬ್ಬರು ಎಂದರೆ ತಪ್ಪಲ್ಲ, ಕೆಲವೊಮ್ಮೆ ವಿರೋಧಿ ಡ್ರೆಸಿಂಗ್ ರೂಮ್ ಗಳಲ್ಲಿ ರಾಹುಲ್ ರವರನ್ನು ಔಟ್ ಮಾಡುವುದು ಹೇಗೆಂದು ರಾತ್ರಿಯೆಲ್ಲಾ ಪ್ಲಾನ್ ಮಾಡಿದ ತಂಡಗಳೂ ಉಂಟು ಆದರೆ ಹಗಲಿನಲ್ಲಿ ಮೈದಾನದಲ್ಲಿ ಯಥಾಪ್ರಕಾರ ಬಂಡೆ ವಿಕೆಟ್ ಮುಂದೆ ಲೀಲಾಜಾಲವಾಗಿ ಬ್ಯಾಟ್ ಹಿಡಿದು ನಿಲ್ಲುತ್ತಿತ್ತು. ವಿರೋಧಿ ಪಡೆ ರಾತ್ರಿಯೆಲ್ಲಾ ಮಾಡಿದ ತಂತ್ರಗಳು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಇರುತ್ತಿತ್ತು.


ಟೆಸ್ಟ್ ಕ್ರಿಕೆಟ್ ನಲ್ಲಿ ಹತ್ತು ಸಾವಿರ ರನ್ ಗಳಿಸಿದ ಕೆಲವೇ ಆಟಗಾರರಲ್ಲಿ ನಮ್ಮ ರಾಹುಲ್ ಕೂಡಾ ಇದ್ದಾರೆ , ದ್ರಾವಿಡ್ ರವರು ಕ್ರೀಸ್ ನಲ್ಲಿ ಇದ್ದರೆ ಫಲಿತಾಂಶ ಖಂಡಿತವಾಗಿಯೂ ನಮ್ಮ ಪರ ಎಂದು ನಾವು ನಂಬುತ್ತಿದ್ದೆವು , ಅವರ ಆಟ ನಮಗೆ ಭರವಸೆ ಮೂಡಿಸಿತ್ತು, ಅದಕ್ಕೆ ಅವರನ್ನು "ಮಿಸ್ಟರ್ ಡಿಪೆಂಡಬಲ್" ಎಂದು ಖ್ಯಾತಿಯನ್ನು ಪಡೆದಿದ್ದರು. ಕೆಲವೊಮ್ಮೆ ವಿಕೆಟ್ ಹಿಂದೆ ಕೀಪರ್ ಆಗಿಯೂ ತಮ್ಮ ಕೈಚಳಕ ತೋರಿರುವ ,ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ನಾಯಕನಾಗಿಯೂ ಅಡಿದ ಆಲ್ರೌಂಡರ್ ನಮ್ಮ ದ್ರಾವಿಡ್.



ಅವರ ಸಾಧನೆ ಕಂಡು ಹಲವಾರು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದಿವೆ ಅವುಗಳೆಂದರೆ


೧೯೯೯: ಸಿಯೆಟ್ ಕ್ರಿಕೆಟರ್ ಆಫ್ ೧೯೯೯ ವರ್ಲ್ಡ್ ಕ

೨೦೦೦: 'ವಿಸ್ಡನ್ ವರ್ಷದ ಕ್ರಿಕೆಟಿಗ' ಪ್ರಶಸ್ತಿ.

೨೦೦೪: 'ಸರ್ ಗಾರ್ಫೀಲ್ಡ್ ಸೋಬರ್ಸ್' ಪ್ರಶಸ್ತಿ.( ವರ್ಷದ ಐಸಿಸಿ ಕ್ರಿಕೆಟಿಗನಿಗೆ ಕೊಡಲಾಗುತ್ತದೆ)

೨೦೦೪: ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ.

೨೦೦೪; ವರ್ಷದ ಐಸಿಸಿ ಟೆಸ್ಟ್ ಆಟಗಾರ.

೨೦೦೬: ಐಸಿಸಿ ಟೆಸ್ಟ್ ತಂಡದ ನಾಯಕ.

೨೦೧೩: ಪದ್ಮಭೂಷಣ ಪ್ರಶಸ್ತಿ


ಪ್ರಸ್ತುತ ಕೋಚ್ ಆಗಿ, ಐ ಪಿ ಎಲ್ ನಲ್ಲಿ ಐಕಾನ್ ಆಟಗಾರ ನಾಗಿ ,ವೀಕ್ಷಕ ವಿವರಣೆ ಕಾರರಾಗಿ, ಸಲಹೆಗಾರರಾಗಿ, ಈಗೆ ವಿವಿಧ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.


ಬೆಂಗಳೂರಿನಲ್ಲಿ ಪತ್ನಿ ಮತ್ತು ಇಬ್ಬರು. ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿರುವ ರಾಹುಲ್ ದ್ರಾವಿಡ್ ರವರೆಗೆ ಭಗವಂತ ಆಯುರಾರೋಗ್ಯ ಐಶ್ವರ್ಯ ಕರುಣಿಸಲೆಂದು ಬೇಡೋಣ.


ಇತ್ತೀಚಿನ ಯುವ ಆಟಗಾರರು ಮ್ಯಾಚ್ ಪಿಕ್ಸಿಂಗ್ , ಡ್ರಗ್ಸ್ ದಂದೆ, ಯಂತಹ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕ್ರಿಕೆಟ್ ನ ಪಾವಿತ್ರತೆಯನ್ನು ಹಾಳುಮಾಡಿರುವುದನ್ನು ನೋಡಿದಾಗ ಯಾಕೋ ರಾಹುಲ್ ದ್ರಾವಿಡ್ ನೆನಪಾಗುತ್ತಾರೆ, ಇವರಂತಹ ಮಾದರಿ ಆಟಗಾರರು ಹೆಚ್ಚು ಉದಯವಾಗಲಿ ಎಂಬುದೇ ಕೋಟ್ಯಂತರ ಭಾರತೀಯರ ನಿರೀಕ್ಷೆ.


"ಸಿಹಿಜೀವಿ"

ಸಿ ಜಿ ವೆಂಕಟೇಶ್ವರ

ತುಮಕೂರು











https://kannada.pratilipi.com/story/%E0%B2%A8%E0%B2%82%E0%B2%AC%E0%B2%BF%E0%B2%95%E0%B2%BE%E0%B2%B0%E0%B3%8D%E0%B2%B9-%E0%B2%97%E0%B3%8B%E0%B2%A1%E0%B3%86-2i677dznmv9n?utm_source=android&utm_campaign=content_share
*ನಂಬಿಕಾರ್ಹ ಗೋಡೆ*
ಲೇಖನ
ಸಿಹಿಜೀವಿ ಸಿ ಜಿ ವೆಂಕಟೇಶ್ವರ

No comments: