26 October 2018

ಕಾಯಕವೇ ಕೈಲಾಸ (ಕವನ)ಕವಿ ಸಾಹಿತಿಗಳ ಜೀವಾಳ ಗುಂಪಿನ ರಾಜ್ಯ ಮಟ್ಟದ ಚಿತ್ರ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕವನ


                         *ಕಾಯಕವೇ ಕೈಲಾಸ*

ಇಳಿ ವಯಸ್ಸಿನಲ್ಲೂ
ಇಳೆಗೆ ನಾ ಭಾರವಲ್ಲ
ಭಾರ ಹೊರುವ ಶಕ್ತಿ
ದೇವರು ನೀಡಿರುವನಲ್ಲ

ಜೀವನವೆಂಬ ಸೈಕಲ್
ಬಹಳ ತುಳಿದಿರುವೆ
ಕಾಯಕವೆ ಕೈಲಾಸ
ತತ್ಬ ಪಾಲಿಸುತಿರುವೆ

ಬಸ್ಸಿಗಿಂತ ಹಿರಿದು ಸೈಕಲ್
ಯಂತ್ರದ ಹಂಗು ಬೇಕಿಲ್ಲ
ಸ್ವಾಭಿಮಾನವ ಮರೆಯಲ್ಲ
ಮೈಯಲ್ಲಿ ಶಕ್ತಿ ಇದೆಯಲ್ಲ

ಚಳಿ ಮಳೆಯ ಹಂಗಿಲ್ಲ
ಕೆಲಸ ಮಾಡಿ ಮುಗಿಸುವೆ
ನನ್ನ ಮತ್ತು ಅವಲಂಬಿತರ
ತುತ್ತಿನ ಚೀಲ ತುಂಬಿಸುವೆ

*ಸಿ .ಜಿ ವೆಂಕಟೇಶ್ವರ*
*ಗೌರಿಬಿದನೂರು*

No comments: