09 July 2018

ವಿವೇಚನೆಯಿಂದ ಬಾಳು (ಕವನ)

            *ವಿವೇಚನೆಯಿಂದ ಬಾಳು*

ಬೆಟ್ಟ ನೀರು ಗಾಳಿ ಕಾಡನು ಕೊಟ್ಟೆ ನಿನಗೆ
ಬಾಳಿ ಬದುಕದೇ ನನ್ನ ಮೇಲೆ ದಬ್ಬಾಳಿಕೆಮಾಡಿದೆ
ತಾಳಲಾರೆ ನಿಮ್ಮುಪದ್ರವಗಳ ನಿಲ್ಲಿಸು ಇಂದೆ
ಇಲ್ಲವಾದರೆ ನಿನ್ನ ಅಂತ್ಯವಾಗಲಿದೆ ಮುಂದೆ

ಕ್ಷಮಯಾ ಧರಿತ್ರಿ ನಾನು ಆಸೆಬುರುಕ ನೀನು
ಆಸೆಗಳಿಗೆ ಬಲಿಯಾಗಿ  ಕಾಡು ನಾಶಗೈಯುತಿರುವೆ
ಕಾಂಕ್ರೀಟ್ ಕಾಡನು ಬೆಳಸಿ ಮೆರೆಯುತಿರುವೆ
ನನ್ನ ನೋವನು  ನೀನು ಮರೆಯುತಿರುವೆ

ಬಗೆದೆನ್ನಯ ಒಡಲನು ದೋಚಿದೆ  ಸಾಕು
ಇನ್ನಾದರೂ ಮರ ಗಿಡ ಬೆಳಸಿ ಬಾಳು
ಬದುಕು ಬದುಕಲು ಬಿಡು ಸಕಲ ಜೀವಿಗಳ
ಇಲ್ಲವಾದರೆ ನಿನ್ನ ಬಾಳಾಗುವುದು ಗೋಳು

ಮೌನವಾಗಿರುವೆನೆಂದು ಮೆರೆಯಬೇಡ
ನನ್ನ ತಾಳ್ಮೆಗೆ ಮಿತಿಯಿದೆಯೆಂದು ಮರೆಯಬೇಡ
ನಾ ಮೈಕೊಡವಿದರೆ ನಿನ್ನಳಿವು ನೋಡ
ಇದ ತಿಳಿದ ವಿವೇಚನೆಯಿಂದ ಬಾಳು ಮೂಢ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: