11 July 2018

ಕೃಷಿ ಮಾಡಿ ಗೆದ್ದ ಮಹಿಳೆ(ಸಂಗ್ರಹ ಲೇಖನ)

          ಈ ಶಿಕ್ಷಿತ ರೈತ ಮಹಿಳೆಯ ಮಾತುಗಳನ್ನು ರೈತರಾದವರು, ರೈತರ ಮಕ್ಕಳು, ಹಳ್ಳಿಗಳಲ್ಲಿ ಭೂಮಿ ಇದ್ದರೂ ಪಟ್ಟಣಗಳಿಗೆ ವಲಸೆ ಬಂದವರು, ಕೃಷಿಯ ಬಗ್ಗೆ  ಆಸಕ್ತಿ ಇರುವವರು, ಸಾಲ ಮನ್ನಾ ಮಾಡಿ ಎಂದು ದೈನೇಸಿಯಾಗಿ ಬೇಡುವವರು, ಅನ್ನವನ್ನು ಉಣ್ಣುವ ಮತ್ತೆಲ್ಲರೂ ಆಲಿಸಬೇಕು. ಭೂಮಿ ಬಂಜೆಯಲ್ಲ, ಗೇಮಿ ಕೆಲಸ ನಷ್ಟದ್ದಲ್ಲ, ಸಮಸ್ಯೆ ಇರುವುದು ನಮ್ಮಲ್ಲಿಯ ಇಚ್ಛಾಶಕ್ತಿಯ ಕೊರತೆ. ಯುಕ್ತಿಯಿಂದ ಆಸಕ್ತಿಯಿಂದ ಉಳುಮೆ ಮಾಡಿದರೆ ಕೋಟ್ಯಾದಿಪತಿಗಳಾಗುವ ಸುವರ್ಣಾವಕಾಶ ಎಲ್ಲ ಭೂಮಿಪುತ್ರರಿಗಿದೆ ಎಂದು ಮನನ ಮಾಡುತ್ತಿದ್ದಾರೆ ಈ ಅಮ್ಮ. ಇದು ಅತಿಶಯದ ಮಾತಲ್ಲ. ಈ ವನಿತೆಯ ಹೆಸರು, ವಿವರಗಳು ಈಗ ಸಿಕ್ಕಿವೆ. ಅವುಗಳನ್ನು ಈ ಕೆಳಗೆ ಹಾಕುತ್ತಿರುವೆನು. ಇವರ ಮಾತುಗಳು ಸಾಧಕಿಯೆಂಬುದನ್ನು ಸಾಬೀತು ಮಾಡುತ್ತವೆ. ಒಂದು ಹೆಣ್ಣು ಇಂಥಹುದನ್ನು ಸಾಧಿಸಬಹುದಾದರೆ, ದೈಹಿಕವಾಗಿ ಹೆಚ್ಚು ಸಭಲರಾದ ಪುರುಷರಿಗೆ ಏಕೆ ಅಸಾಧ್ಯ ಹೇಳಿ.? 

*ಶ್ರೀಕಾಂತ ಪತ್ರೆಮರ*

°°°°°°°°°°°°°°°°°°°°°°°°°

🤔 ಈ ಮಹಿಳೆ - ಕೇಳರಿಯದ ಸಾಧನೆ!!!!!!🤔
======================

ಈಗ ನಾನು ಹೇಳ ಹೊರಟಿರುವುದು ವಿಷಯ ಒಬ್ಬ ಮಹಿಳೆ ಬಗ್ಗೆ!!

✍ ಅವರು ಸಾಧಾರಣ/ಸಾಮಾನ್ಯ ಮಹಿಳೆಯಾಗಿದ್ದರೆ ನ ನಗೂ ಅವರ ಬಗ್ಗೆ ಬರೆವ ಮನಸ್ಸಾಗುತ್ತಿರಲಿಲ್ಲ; & ಅದನ್ನ ನಿಮ್ಮ ಬಳಿ ಹೇಳುವ ಗೋಜಿಗೂ ಹೂಗುತ್ತಿರಲಿಲ್ಲವೇನೋ......

👉 ಈ ಮಹಿಳೆ ಓದಿದ್ದು :- ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ!!!!

ಆದರೆ ಸಾರ್ಥಕತೆ ಕಂಡು ಕೊಂಡದ್ದು... ಕೃಷಿಯಲ್ಲಿ... !!!!

👉 20 ವರ್ಷಗಳ ಹಿಂದೆಯೇ.... ಪ್ರತಿಷ್ಟಿತ  Infosys  Rs. 40000 ಪಗಾರ ಕೊಡಲು ಮುಂದೆ ಬಂದಾಗ, ಅದನ್ನ  ಸಾರಾಸಗಟವಾಗಿ ದಿಕ್ಕರಿಸಿ ಕೃಷಿಯೇ ನನ್ನ ಜೀವಾಳ & ಬದುಕು ಎಂದು 'ಎದೆಯುಬ್ಬಿಸಿ,!!!!...... ಮುಂದೆ ನಡೆದ ಧೀರೆಯೇ..... ಈ ಮಹಿಳೆ!!!!!!

✍ಸ್ಥಳ :- ರಾಯಚೂರು,  50 ಡಿಗ್ರೀ ಸೆಲ್ಸಿಯಸ್ ತಾಪಮಾನ. ಈ ಊರು ಕೇಳಿದರೇ ಸಾಕು ಯಾರಾದರೂ ತಲೆ ಹಾಕಿಯೂ ಮಲಗರು.

👉 ಈ ಮಹಿಳೆ ಮದವೆಯಾಗಿ ಹೊಸತಾಗಿ ಗಂಡನ ಮನೆಗೆ ಬಂದಾಗ ಅರ್ಧ ಚೀಲ ಸಜ್ಜೆಯೂ ಬೆಳಯದಂತಹ
 ಬರಡು ಭೂಮಿ. ಅದರಲ್ಲಿ ಇಂದು   ಬಂಗಾರದ ಬೆಳೆ ಬೆಳೆಯುತಿದ್ದಾರೆ. !!!

👉 ಸರಕಾರಿ ಸವಲತ್ತುಗಳಿಗೆ ಜೋತು ಬಿದ್ದು;
 ಸೊಂಬೇರಿಗಳಾಗಿ; ವರುಷದಲ್ಲಿ ಒಂದುಷ್ಟು ಭೂಮಿ ಗೈದು ಉಳಿದೆಲ್ಲಾ.....  ದಿನ /  ವೇಳೆಯಲ್ಲಿ ...... ....ವ್ಯರ್ಥ ಕಳೆದು; ಚುನಾವಣೆ ವೇಳೆಯಲ್ಲಿ ರಾಜಕಾರಣಿಗಳ ಕೈಗೊಂಬೆಗಳಾಗಿ ಜೊಲ್ಲು ಸುರಿಸಿಕೊಂಡು ಬಾಳುವ ರೈತರಿಗೆ ನಮ್ಮಲ್ಲೇನು ಕಡಿಮೆಯಿಲ್ಲ.  ಇಂತಹ ದಿನಮಾನ ಗಳಲ್ಲಿ ಈ ಮಹಿಳೆಯ ಸಾಧನೆ & ಅವರು ರೈತರ ಕಿವಿಯಿಂಡಿ ಹೇಳುವ ಮಾತುಗಳು ಮನ ನಾಟುತ್ತವೆ!

👉 ಹೌದು, ಇವರೊಂದು ಚಿಲುಮೆಯ ಬುಗ್ಗೆಯೇ ಸರಿ. ವ್ಯವಸಾಯ ಯಾರೀಗೂ ಒಗ್ಗದ ಬದುಕು. ಆದರೆ ಇವರು ಕೃಷಿ ಪಯಣದಲ್ಲಿ & ಲಾಭದ ವಿಷಯವಾಗಿ  ಮಾತಾನಾಡುವುದು ನೂರರಲ್ಲಿ ಅಲ್ಲ; ಸಾವಿರದಲ್ಲೂ ಅಲ್ಲ; ಲಕ್ಷದಲ್ಲೂ......ಅಲ್ಲ; ಅವರು ಕೃಷಿ ಲಾಭದ ಲೆಕ್ಕ ಹೇಳುವುದು ಕೋಟಿಗಳಲ್ಲಿ!!!???🤔 ಆಗಲೇ.... ಅವರು ಎಲ್ಲರಿಗೂ...'ಭೇಷ್' ಎನಿಸುತ್ತಾರೆ.

✍ ಯಾರೀ.... ಮಹಿಳೇ???🤔🤔🤔

✍ 👰ಅವರೇ.....

 👏👏 ಶ್ರೀಮತಿ ಕವಿತಾ ಮಿಶ್ರ  👏👏

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ನಿವಾಸಿ ಕವಿತಾ ಮಿಶ್ರಾ, ಕೃಷಿ ಕ್ಷೇತ್ರದಲ್ಲಿ ಸಾಧನೆಗೆ ಹಠ ಹಿಡಿದು ತಮ್ಮ 10 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ, ಆ ಬರಡು ಭೂಮಿಯನ್ನ ಸ್ವರ್ಗಮಾಡಿದ್ದಾರೆ!

✍ ಪ್ರಿಯ ರೈತ ಮಿತ್ರ ರೇ,
ಬದುವಿನಲ್ಲಿ ಒಂದು ಮರವಿದ್ದರೆ ನೆರಳಾಗಿ ಬೆಳೆಬಾರದು ಎಂಬ ತಪ್ಪು ನಂಬುಗೆಯಲ್ಲಿರುವ ರೈತರೇ ತುಂಬಿರುವ ಈ ಕಾಲದಲ್ಲಿ; ಕವಿತಾರವರು ಬೆಳೆಸಿರುವ ಗಿಡ-ಮರಗಳು, ಅವುಗಳ ವೇವಿಧ್ಯತೆ & ಲಾಭ ಕೇಳಿದರೆ...... ನೀವು ವಿಸ್ಮಯರಾದೀರಿ.

🌿2100 ಶ್ರೀಗಂಧ
🌿1500 ದಾಳಿಂಬೆ
🌿90 ಮಾವು
🌿300 ನಿಂಬೆ
🌿800 ಸೀಬೆ
🌿150 ನೇರಳೆ
🌿150 ಬೆಟ್ಟದ ನಲ್ಲಿಕಾಯಿ
🌿150 ನುಗ್ಗೆ
🌿100 ಕರಿಬೇವು
🌿100 ಮಲ್ಲಿಗೆ
🌿100 ತೆಂಗು
🌿450 ಸೀತಾಫಲ

ಅಷ್ಟೇ... ಅಲ್ಲ  ಮೂಸಂಬಿ, ಸಪೋಟ, ಬಾರೇಹಣ್ಣು, ಮತ್ತಿ,  ರಕ್ತಚಂದನ, ಕಾಫಿ, ಮೆಣಸು, ಅರಿಷಿಣ.....  ಸೇರಿದಂತೆ ನಾನಾ ಬಗೆಯ ಗಿಡಗಳನ್ನ ಬೆಳೆದಿದ್ದಾರೆ !!!

✍ಇಷ್ಟೇ ಅಲ್ಲದೇ ಕವಿತಾ ಅವರು ತೋಟದಲ್ಲೇ ಮನೆ ಮಾಡಿಕೊಂಡು ಹಸು, ಕುರಿ, ಕೋಳಿ ಸಾಕಾಣಿಕೆ ಮಾಡಿದ್ದಾರೆ. ವರ್ಷಕ್ಕೆ ಲಕ್ಷ-ಲಕ್ಷ  ಆದಾಯ ಗಳಿಸುತಿದ್ದಾರೆ.

✍ ಅಬ್ಬಾ..... ಅನಿಸೀತು ಅಲ್ಲವೇ?

✍ ಇತ್ತೀಚೆಗೆ ನಾನು ಕಂಡ ವಿಸ್ಮಯವೆಂದರೆ- ಕೆಲವು ಹಳ್ಳಿಗಳಲ್ಲಿ / ರೈತರು ಯುಗಾದಿ ಬಂದರೆ ಮಾವಿನ ಎಲೆ ಮಾರುಕಟ್ಟೆಯಲ್ಲಿ ಕೊಂಡುತರುವ ಹೀನಾಯ ಸ್ಥಿತಿಗೆ ಇಳಿದಿದ್ದಾರೆ; ಅಷ್ಟೇ.... ಏಕೆ ಒಗ್ಗರಣೆಯ ಕರಿಬೇವಿಗೂ....  ಅಂಗಡಿಗೆ ಓಡುತ್ತಾರೆಂದರೆ: ಕೃಷಿ ಯಾವ ದುಸ್ಥಿತಿ ತಲುಪಿದೆ ಊಹೆ ಮಾಡಿ.  ಹಾಗಾದರೆ ದೂಷಿಸುವುದಾದರೂ ಯಾರನ್ನ ??!!!

ನಮ್ಮನ್ನೇ ....
 ನಾವೇ... ಶಪಿಸಿ ಕೊಳ್ಳಬೇಕಿದೆ.  ಮೂಲತಃ ನಾವೆಲ್ಲಾ.... ಹಳ್ಳಿಗರೇ...

⚡ನಾವು ಕಲಿತ ವಿದ್ಯೆಗಳು ನಮ್ಮನ್ನು ದಾರಿ ತಪ್ಪಿಸಿದವು

⚡ಸುತ್ತಲಿನ ವ್ಯವಸ್ಥೆಗಳು ನಮ್ಮನ್ನ ತಪ್ಪು ದಾರಿಗೆಳದವು

⚡ Needy agriculture  ಹೋಗಿ Greedy agriculture ಪ್ರಾರಂಭವಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು!!😌

⚡ ಚಾಲೇಂಜಿಂಗ್    ಜೀವನಕ್ಕೆ ಬೆನ್ನು ಮಾಡಿ  ಸೆಕ್ಯುಲರ್ ಜೀವನಕ್ಕೆ ಅಂಟಿಕೊಂಡದ್ದಂತೂ... ಭರಿಸಲಾಗದ ನಷ್ಥಕ್ಕೆ ನಾಂದಿಯಾಯಿತು 🙁

⚡ ಹೀಗೆ.... ಹತ್ತು ಹಲವು ತಪ್ಪು ತಿಳುವಳಿಕೆಗಳು & ನಡೆಗಳು ರಿಪೇರಿಯಾಗದಷ್ಟು ನಷ್ಟಮಾಡಿವೆ

🚶Come back to Smt. Kavitha Mishra

 ✍ ಶ್ರೀಗಂಧ ಹಾಗೂ ರಕ್ತಚಂದನದ ಮರಗಳ ಮಾರಾಟಕ್ಕೆ ಕೆಎಸ್‍ಡಿಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಕವಿತಾರವರ ಲೆಕ್ಕಾಚಾರವಂತೂ... ನಿಬ್ಬೆರಗಾಗಿಸುತ್ತದೆ!!

✍ 🌴🌴ಕೇವಲ  ಅವರ   ಶ್ರೀಗಂಧ ಬೆಳೆಯ ಲೆಕ್ಕಚಾರ ಇಂತಿದೆ:-

👉ಒಂದೆ ಒಂದು ಎಕರೆಯಲ್ಲಿ 5 ರಿಂದ  6 ಕೋಟಿ ಲಾಭ!!?☹

👉 ಪರಾವಲಂಭಿ ಬೆಳೆಯಾದ ಶ್ರೀಗಂಧವನ್ನ ಇತರೆ ಮರಗಳ ಜೊತೆಗೆ ಬೆಳೆದರೆ 12 ರಿಂದ ರಿಂದ 15 ವರ್ಷಗಳ
ನಂತರ ಕಟಾವಿಗೆ ಬಂದೀತು.

 👉 1 kg  ಶ್ರೀಗಂಧ ದ ಬೆಲೆ  10 ರಿಂದ 15 ಸಾವಿರ!! ಇದು ಸರ್ಕಾರಿ ಬೆಲೆ.  ಹೊರಗಡೆ ಅದು ಇಪ್ಪತ್ತೂ.... ದಾಟೀತು... !!!

👉ಈ  ಗಣಿತದಲ್ಲೇ ನೋಡಿದರೆ ಒಂದು ಟನ್ ಗೆ ಬೆಲೆ 1 ಕೋಟಿ 60 ಲಕ್ಷ !!!!

⚡ಎಕರೆಗೆ ಕಡಿಮಯೆಂದರೂ 3 ರಿಂದ  4 ಟನ್ ಇಳುವರಿ ಗ್ಯಾರಂಟಿ!!

✍ 🕵‍♂ಗೆಳೆಯರೇ,

  ಶ್ರೀಗಂಧಕ್ಕೆ ಕಳ್ಳರ ಕಾಟ ಎಂಬ ಮಾತಿದೆ. ಅದಕ್ಕೆ ಕವಿತಾ ಅವರು ಕೊಡುಕೊಂಡ ಮಾರ್ಗ: E- protection.

✍  ಏನಿದು  E- protection?

- ಶ್ರೀಗಂಧ ಮರಗಳಿಗೆ ಒಂದು ಮೈಕ್ರೋಚಿಪ್ ಅಳವಡಿಸಲಾಗುವುದು. ಕಳ್ಳ ಕೇವಲ  2 ಅಡಿ  ಮರದ ಹತ್ತಿರ  ಸುಳಿದಾಡಿದರೂ ಸೈರನ್ ಕೂಗುತ್ತದೆ😁🤔

ಅಷ್ಟೇ ಅಲ್ಲ..... ಸಮೀಪದ ಪೊಲೀಸ್ ಠಾಣೆಗೂ ಲಿಂಕ್ ಹೊಂದಿ ಅಲ್ಲೂ ಸೈರನ್ನು ಹೊಡೆದು ಕೊಳ್ಳುತ್ತದೆ. ಮತ್ತೊಂದು ಪ್ರಯೋಜನವೆಂದರೆ- ಅಕಾಸ್ಮತ್ ಕಳ್ಳ ಕದ್ದೋಯ್ದರೂ..........ಕದ್ದ ಮಾಲು ಎಲ್ಲಿದೆ  ಎಂಬದನ್ನ ಕಾರಾರುವಕ್ಕಾಗಿ ಪತ್ತೆ ಹಚ್ಚಲೂಬಹುದು..

✍ ಮಿತ್ರರೇ,

 -⚡ಜಮೀನಿದೆ;  ಮಾಡುವವರಿಲ್ಲಾ;

 -⚡ಸಾಕಷ್ಟು... ಜಮೀನಿದೆ ಅಲ್ಪ ಮಟ್ಟಿಗೆ ಸಾಗುವಳಿ ನಡೆಯುತ್ತಿದೆ, ಆಳುಗಳ ಸಮಸ್ಯೆಯಿಂದ ಉಳಿದದ್ದು ಹಾಗೇ ಬಿದ್ದಿದೆ ಎನ್ನುವವರನ್ನು ಸಾಕಷ್ಟು ನೋಡಿದ್ದೇವೆ

ಅಲ್ಲದೆ

- ⚡ನನ್ನದಿನ್ನು ಹತ್ತಾರು ವರ್ಷ ಸರ್ವೀಸ್ ಇದೆ;  ಮುಂದೆ ಹಳ್ಳಿಗ್ಹೋಗಿ  ಜಮೀನು ನೋಡಿಕೊಂಡು ನಮ್ಮದಿಯ ಜೀವನ
ಕಂಡುಕೊಳ್ಳುವ ಹಂಬಲವನ್ನ ಬಲು ಮಂದಿ  ವ್ಯಕ್ತ ಪಡಿಸುವುದನ್ನ ನಾವು ಕಂಡಿದ್ದೇವೆ. ಇಂತವರಿಗೆ ಈ ತರಹದ  Tree based = ಮರ ಆಧಾರಿತ ಬೆಳೆ ಅನುಕೂಲ. ಒಬ್ಬ ಆಳು ಹತ್ತಾರು ಎಕರೆ ನಿಭಾಯಿಸಿಯಾನು.

✍ ಗೆಳೆಯರೇ,

ಗಮನಿಸಿ

"ಸಾಧನೆ ಸರಳವಲ್ಲ"

ಕವಿತಾರ ಈ ಚಮತ್ಕಾರ ಒಂದೇ ದಿನ ಆದದ್ದೂ ಅಲ್ಲ. ಹತ್ತಾರು ಬೋರ್ ತೆಗೆಸಿದರೂ ಒಂದು ಹನಿ ನೀರು ಬೀಳದಿದ್ದರೂ... ಹೆದರದೆ ಮನ್ನುಗ್ಗಿ ಮತ್ತೊಂದು ಕೊರೆಸಿ ಯಶಸ್ಸನ್ನ ಪಡೆದವರು !!🤔

✍ಮೊದ-ಮೊದಲಿಗೆ  ದಾಳಿಂಬೆ ಹಾಕಿ ಲಾಭ ಮಾಡಿದರು;  ಮೂರು ವರ್ಷಗಳ ನಂತರ 'ಅಂಗಮಾರಿ' ರೋಗ ಬಂದು ಹತ್ತಾರು  ಎಕರೆಯಲ್ಲಿ ಹೆತ್ತಮ್ಮನಂತೆ ಸಾಕಿ ಸಲುಹಿದ ಆ ಗಿಡಗಳನ್ನ ಕೈಯಾರೆ ಕೀಳಬೇಕಾದ ದುಸ್ಥಿತಿ ಬಂದು;  ಅವನ್ನ  ಕಿತ್ತು ಸುಡಬೇಕಾದ ಪ್ರಸಂಗ ಬಂದಾಗ  ಅವರು ಅನುಭವಿಸಿದ ನೋವು ಊಹೆಗೂ ಮೀರಿದ್ದು. ಅದು ತಾನೇ ಹೆತ್ತು- ಹೊತ್ತು, ಸಾಕಿ ಸಲುಹಿದ  ಕರುಳ ಕುಡಿ ಕಣ್ಮುಂದೆಯೇ ತೀರಿ ಮಣ್ಣಲ್ಲಿಡುವಾಗಿನ   ಸಂಕಟಕ್ಕಿಂತಲೂ ಸಂಕಟ.  ಹೀಗೆ ನೋವುಗಳ ಮಧ್ಯೆ ಜಯ ಪಡೆದವರು:- ಧೀರೆ ಮಹಿಳೆ ಶ್ರೀ ಕವಿತಾರವರು👌👌

✍ ಈ ನೋವಿನಿಂದ ಅವರು ಕಂಡುಕೊಂಡ ಪಾಠವೇ  'ಬಹು ಬೆಳೆ ಪದ್ದತಿ ' (Multi cropping). ಅತೀ ಸಾಂದ್ರಿಕೃತ ಬೇಸಾಯ ಪದ್ಧತಿ ಅಳವಡಿಸಿಕೊಂಡರು.
ಇದುವೇ ನಿಜವಾದ 'ಸುಸ್ಥಿರ ಕೃಷಿ' ಎಂದು ನಿರೂಪಿಸಿಯೂ ತೋರಿಸಿದರು.

✍ 'ಬಹುಬೆಳೆ ಪದ್ದತಿ' ಯಲ್ಲಿ  ವರ್ಷವಿಡೀ  ಆದಾಯ. ಪಸಲುಗಳು ತಿಂಗಳ ಅದಾಯ ನೀಡಿದರೆ;  ಮರಗಳು ಇನ್ಸ್ ರೆನ್ಸ್ ತರಹ.  ಬೆಳೆಗಳು ಕೈಕೊಟ್ಟಲ್ಲಿ ಆಸರೆಯಾಗುವವು. ಆಗ ನಷ್ಟವೂ ಇಲ್ಲ ಆತ್ಮಹತ್ಯೆಯೂ ಇಲ್ಲ, ಅಲ್ಲವೇ...?

✍ ಶ್ರೀಮತಿ ಕವಿತಾ ಅವರು ಕಳೆದ ಹಲವಾರು ವರ್ಷಗಳಲ್ಲಿಂದಲೂ ಪ್ರಗತಿಪರ ರೈತ ಮಹಿಳೆಯಾಗಿ ಗುರುತಿಸಿ ಕೊಂಡವರು; ಹಲವಾರು ಪ್ರಶಸ್ತಿಗಳನ್ನ & ಜನ ಮನ್ನಣೆ ಪಡೆದ ಹೆಮ್ಮೆಯ ಕನ್ನಡತಿ.

✍ ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲ ಕವಿತಾರವರು ಇಂದಿನ    ರೈತರಿಗೆ &  ನಾಜೂಕಿನ ನಾರೀಮಣಿಗಳಿಗೆ  ಹೇಳುವ ಕಿವಿಮಾತುಗಳಂತೂ.... ವಿಸ್ಮಯ ಗೋಳಿಸುತ್ತವೆ.

"ನಮ್ಮ ಇಂದಿನ ಯುವತಿಯರು ಹೆತ್ತ ಮನೆಗೂ ಕೊಟ್ಟ ಮನೆಗೂ...ಕೀರ್ತಿ ತರಬೇಕು. ವಿದ್ಯೆ ವಿನಯ ತರಿಸಬೇಕು; ಕಾಣದ ಜಾಗದಲ್ಲಿ ಹೋಗಿ ನೌಕರಿಯ ಕೂಲಿಯ ಬದಲು ಸ್ವಾವಲಂಭಿ ಮತ್ತು  ನಮ್ಮದಿ ಜೀವನವನ್ನ ಹಳ್ಳಿಯಲ್ಲೆ..... ಕಂಡುಕೊಳ್ಳಬಹುದು.  ರೇತಾಪಿಯನ್ನ ರೈತರನ್ನ ಕೀಳಾಗಿ ಕಾಣುವುದನ್ನ ಹೆಣ್ಣು ಹೆತ್ತವರು & ಹುಡುಗಿಯರು ಬಿಡಬೇಕು.  ರೈತರ ಮಕ್ಕಳನ್ನ ಮದುವೆಯಾಗಿ ನಮ್ಮದಿಯ ಜೀವನ ಕಂಡುಕೊಳ್ಳಿ; ನಾನೂ... ಓದಿದವಳೇ..
.... ಬೇಕಿದ್ದರೆ ಸಿಟಿ ಸೇರಿ ಲಕ್ಷಗಳಿಸಬಹುದಿತ್ತು.... ಆದರೂ ನಾನು ರೈತನನ್ನೇ... ಮದುವೆಯಾದೆ..... ಈಗ ನಾನು ...... ..ಕೋಟಿಗಳಲ್ಲಿ ಮಾತನಾಡುತ್ತೇನೆ.... !!!!! ನಮ್ಮ ರೈತರಾದರೂ..... ಈ ಹಾಳು ಓಟಿನ ರಾಜಕಾರಣದಿಂದ ದೂರ ಉಳಿದು ತಮ್ಮ ಜಾಣ್ಮೆಯಲ್ಲಿ ರೈತಾಪಿ ಮಾಡಿದರೆ: ಈ ಸಾಲಮನ್ನವೇನು ಬಂತು, ಸರ್ಕಾರಕ್ಕೇ.... ಸಾಲ ನೀಡಬಲ್ಲ ತಾಕತ್ತು ರೈತನಿಗಿದೆ..!!"

ಕವಿತಾರವರ ಈ ಮಾತುಗಳನ್ನು ಕೇಳಿದಾಗ ಅವರ ಬಗ್ಗೆ  ಗೌರವ ತರಿಸುತ್ತದೆ &  "ವ್ಹಾ.....ಎಂತಹ ಮಾತು 🤔🤔🤔🤔 !!!!!!" ಎನಿಸುತ್ತದೆ.

✍ ಏನಾದರೂ ಸಾಧಿಸಲೇಬೇಕು ಅನ್ನೋ 'ಛಲ' ಇರುವವರು ಒಂದಲ್ಲ ಒಂದು ದಿನ ಎಂತಹ ಕಷ್ಟ ಇದ್ದರೂ..
ಸಾಧಿಸಿ ತೋರಿಸಬಹುದು ಎಂಬುದಕ್ಕೆ ಶ್ರೀಮತಿ ಕವಿತಾ ಮಿಶ್ರ ಅವರೇ ಸಾಕ್ಷಿ ಅಲ್ಲವೇ???

🙏🙏ಅವರಿಗೆ ನನ್ನ ಕಡೆಯಿಂದ ಶರಣು ಶರಣಾರ್ಥಿಗಳು🙏🙏🙏

ಓದಿ ನಿಮಗೆ ತಿಳಿದ ರೈತರಿಗೆ & ಕೃಷಿ ಆಸಕ್ತರಿಗೂ ತಲುಪಿಸಿ

ಸಂಗ್ರಹ: ಸಿ. ಜಿ.ವೆಂಕಟೇಶ್ವರ
ಗೌರಿಬಿದನೂರು
- Dr. B.M. Nagabhushana,
Professor & HOD Department of Chemistry
& Vice president of LSIKC

M.S. Ramaiah Institute of Technology (MSRIT)
Bangalore
M-09916030272

No comments: