03 September 2017

ನಾನಲ್ಲ ಸಾಹಿತಿ

           ನಾನಲ್ಲ ಸಾಹಿತಿ 

ನಾನಲ್ಲ ಸಾಹಿತಿ  
ನನಗೆ ಇದೆ ಇತಿಮಿತಿ

ಗೊತ್ತಿಲ್ಲ  ಪ್ರಸ್ತಾರ ಗುರುಲಘು   ಹೇಳುವೆ ಮೊದಲು ಮಾನವನಾಗು. 

ಓದಿಲ್ಲ ಉದ್ಗ್ರಂಥ ತಿಳಿದಿಲ್ಲ ಸಾಹಿತ್ಯ
ಪದಗಳಲೇ ಹಾಡವೆ ನಿಮಗೆ ಲಾಲಿತ್ಯ 

ತಿಳಿದಿಲ್ಲ ನಾನು ಅಷ್ಟಾದಶ ವರ್ಣನೆ
ಮರೆತಿಲ್ಲ ಪ್ರಕೃತಿ ತಾಯಿಯ ಬಣ್ಣನೆ 

ಕಲಿತಿಲ್ಲ ಷಟ್ಪದಿ ತ್ರಿಪದಿ ಅಲಂಕಾರ
ಕಟ್ಟಿಕೊಡುವೆ ನಿಮಗೆ ಜಗದ ವಿವರ 

ಇರಲಿ ನನಗೆ ನಮ್ಮೆಲ್ಲರ ಆಶೀರ್ವಾದ
ಎನಗಿಂತ ಕಿರಿಯನಿಲ್ಲ ಇದುವೇ ವಾದ 

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

No comments: