22 September 2017

ಜನನಾಯಕರು (ಕವನ)


                    *ಜನನಾಯಕರು*

ಏರಿದರೆ ಅಧಿಕಾರದ ಅಮಲು
ಕಾಣುವುದಿಲ್ಲ ನಿಮಗೆ ಕಂಗಳು

ಒಡೆದು ಆಳದಿರಿ‌ ನಮ್ಮನ್ನು
ಮರೆಯದಿರಿ ನಮ್ಮ ಗೋಳನ್ನು
ಓಡದಿರಿ ನಮ್ಮಿಂದ ದೂರ
ನೀಡಿ ನಮ್ಮ ಸಮಸ್ಯೆಗಳಿಗೆ ಪರಿಹಾರ.

ದಲಿತರ ಏಳಿಗೆಗಾಗಿ ಪಣತೊಡಿ
ನೀವಾಗಿ ನಮ್ಮ ಒಡನಾಡಿ
ಗಮನವಿರಲಿ ನಿಮ್ಮ ಕಾರ್ಯ ಕ್ಷೇತ್ರ
ಮಾಡದಿರಿ ನಮ್ಮ ನಾಡ ಕುರುಕ್ಷೇತ್ರ

ನೀವಾಗಿ ನಮ್ಮ ಜನನಾಯಕರು
ನಮ್ಮ ಏಳ್ಗೆಯ ಸಹಾಯಕರು
ಇನ್ನಾದರೂ ಮಾಡಿ ನಮ್ಮ ಸೇವೆ
ಇಲ್ಲವಾದರೆ ನಮ್ಮ ಬಾಳೆಲ್ಲ ನೋವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: