This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
28 ಸೆಪ್ಟೆಂಬರ್ 2020
27 ಸೆಪ್ಟೆಂಬರ್ 2020
ತಂಪು ನೀಡು ಬಾ
*ತಂಪು ನೀಡು ಬಾ*
ಅಳಿದ ದಿನಗಳ ನೆನೆದು
ಉಳಿದ ನೆನಪುಗಳ ಸವಿದು
ಕಲೆತು ಕಲಿತು ಜೊತೆಯಲಿ
ನಡೆದ ಸವಿಘಳಿಗೆಗಳ ನೆನೆದಾಗ
ಅಂತರಂಗವೇಕೋ ಮೌನವಾಗುತಿದೆ.
ನೀನೆಚ್ಚು ನಾನೆಚ್ಚು ಎಂಬ
ಹಮ್ಮಿನಲಿ ನೆಚ್ಚಿನ ಪ್ರ್ರೀತಿಯ
ತೊರೆದು ಹುಚ್ಚು ನಿರ್ದಾರವ ಮಾಡಿ
ದೂರಾದರೂ ಬೆಚ್ಚನೆಯ ಕ್ಷಣಗಳ
ನೆನಪಲಿ ಅಂತರಂಗವೇಕೋ ಮೌನವಾಗುತಿದೆ.
ಮಾತಿಗೆ ಮಾತು ಬೆಳೆಸಿ
ಕುಳಿತು ಮಾತನಾಡಿ ಜೊತೆಯಾಗದೆ
ಮಾತನಾಡದೆ ಎದ್ದು ಹೋದ
ನಿನ್ನನು ಮಾತನಾಡಿಸಿ ಕರೆಯದ
ನನ್ನ ಅಂತರಂಗವೇಕೋ ಮೌನವಾಗುತಿದೆ .
ನನ್ನಂತರಂಗ ನಾ ಮಾಡಿದ
ತಪ್ಪನ್ನು ತಿಳಿಸಿದೆ ,ನಿನ್ನದು ಅದೇ ಎಂದು ಭಾವಿಸಿರುವೆ ,ಮೌನ ಮುರಿದು
ಮಾತನಾಡಲು ಎಂದು ನೀ ಬರುವೆ?
ಕಾಯುತಿರುವೆ ,ತಂಪು ನೀಡು ಬಾ!
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)