*ರೂಪ ಮತ್ತು ಗುಣ*
ಮನುಷ್ಯನಲ್ಲಿರುವ ರೂಪ ಮತ್ತು ರೂಪಾಯಿ ಶಾಶ್ವತವಲ್ಲ |
ಅವನ ಸಹಕಾರ, ಉಪಕಾರ
ಮುಂತಾದ ಗುಣಗಳನ್ನು
ಮರೆಯಲಾಗುವುದಿಲ್ಲ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಮನುಷ್ಯನಲ್ಲಿರುವ ರೂಪ ಮತ್ತು ರೂಪಾಯಿ ಶಾಶ್ವತವಲ್ಲ |
ಅವನ ಸಹಕಾರ, ಉಪಕಾರ
ಮುಂತಾದ ಗುಣಗಳನ್ನು
ಮರೆಯಲಾಗುವುದಿಲ್ಲ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಒಣಸಂತೆ*
ಸ್ಪಂದನೆಗಳೇ ಇಲ್ಲದ
ಜಾಗದಲ್ಲಿ
ಭಾವನೆಗಳ ವ್ಯಕ್ತಪಡಿಸಿದರೆ
ಅದು ಒಣ ಸಂತೆ |
ಬಂಡೆಗಳ ಮೇಲೆ ನೀರು
ಸುರಿದಂತೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ದಿಡೀರ್ ಬೆಳೆದು ನಿಲ್ಲಲಾಗುವುದಿಲ್ಲ
ಬೆಳೆಸುವವರು ಬಹಳಿಲ್ಲ
ಬೆಳೆವ ಚಿಗುರನ್ನೇ ಚಿವುಟುವರಲ್ಲ
ಬೆಳೆದು ನಿಂತಾಗ ನಿನ್ನ ಸಹಾಯ
ಬೇಡುತ ಬರುವರು ಎಲ್ಲಾ.
ನಾವೆಂದೂ ಆಗಲಾರದು
ಬೇರೆಯವರು ನಿಯಂತ್ರಿಸುವ
ಗಾಳಿಪಟ|
ಆಟ ಸಾಕೆನಿಸಿದಾಗ
ಬರ್ರೆಂದು ಕೆಳಕ್ಕೆಳೆದು
ತೋರಿಸಿಬಿಡುವರು
ಪ್ರಪಾತ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಜೀವನ*
ಯಾರಿಗೂ ಸಾದ್ಯವಿಲ್ಲ
ಜೀವನ ನಡೆಸಲು
ಬರೆದಿಟ್ಟಂತೆ|
ಸನ್ಮಾರ್ಗದಿ ನಡೆದು
ಸಾಧಿಸಿದರೆ ಜೀವಿಸಬಹುದು
ಬರೆದಿಡುವಂತೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ