01 ಸೆಪ್ಟೆಂಬರ್ 2017

ನೀತಿ ಆಯೋಗದ ಎಡವಟ್ಟು ಸಲಹೆಗಳು


ಎಪ್ಪತ್ತು ವರ್ಷಗಳ ಹಳೆಯದಾದ ಯೋಜನಾ ಆಯೋಗದ ಬದಲಿಗೆ "ನೀತಿ ಅಯೋಗ " ಜಾರಿಗೆ ಬಂದಾಗ ದೇಶದ ಪ್ರಜೆಗಳಿಗೆ ಹೊಸ ಬದಲಾವಣೆ ಬರುವುದೆಂಬ ಆಶಾ ಭಾವನೆಯಿತ್ತು  ನಾನೂ ಸಹ ಅದೇ ಅಭಿಪ್ರಾಯವನ್ನು ಹೊಂದಿದ್ದೆ .ಆದರೆ ನೀತಿ ಆಯೋಗದ ಕೆಲವು ಸಲಹೆ ಮತ್ತು ನಿರ್ಧಾರಗಳು ಅದರ ಸದಸ್ಯರ ವಾಸ್ತವ ಜ್ಞಾನವನ್ನು ಅನುಮಾನಿಸುವಂತಾಗಿದೆ , ಇತ್ತೀಚಿಗೆ ರೈತರಿಗೆ ಆದಾಯ ತೆರಿಗೆಯನ್ನು ಹೇರಬೇಕೆಂಬ ನೀತಿಆಯೋಗದ  ಅವಾಸ್ತವಿಕ ಮತ್ತು ಅನ್ಯಾಯದ ಸಲಹೆಗೆ ಇಡೀ ದೇಶಾದ್ಯಂತ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಯಿತು ಮೊದಲು ದೇಶದ ರೈತರ ಆದಾಯ ವೃದ್ದಿಯಾಗುವ ಕ್ರಮ ಕೈಗೊಂಡು ನಂತರ ತೆರಿಗೆ ಹೇರುವ ಮಾತನಾಡಲಿ ಎಂಬ ಆಗ್ರಹ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಕೈಬಿಡಲಾಯಿತು.
ಈಗ ದೇಶದ ಎಲ್ಲಾ ಶಾಲೆಗಳನ್ನು ಖಾಸಗೀಕರಣ ಮಾಡಲಿ ಎಂಬ ಅಸಂಬದ್ಧ ಸಲಹೆ ನೀಡುವ ಮೂಲಕ ಮತ್ತೊಂದು ಸುತ್ತಿನ ಚರ್ಚೆಗೆ ನೀತಿಆಯೋಗ ಎಡೆ ಮಾಡಿಕೊಟ್ಟಿದೆ ಅದರ ಪ್ರಕಾರ ದೇಶದ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕೇವಲ ಖಾಸಗಿ ಶಾಲೆಗಳು ಮಾತ್ರ ಅರ್ಹ ಎಂಬ ಏಕಮುಖ ವಾದವನ್ನು ಒಪ್ಪಲಾಗುವುದಿಲ್ಲ .ಅವರು ಮಾಡಿರುವ ಕೆಲ ಸಮೀಕ್ಷೆಯಲ್ಲಿ ಕೆಲ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳಿದ್ದರೆ ಅದನ್ನು ಸಾರ್ವತ್ರಿಕವಾಗಿ ಬಿಂಬಿಸುವುದು ಎಷ್ಟು ಸರಿ? ಬಹುತೇಕ ಸರ್ಕಾರಿ ಶಾಲೆಯಲ್ಲಿ ಖಾಸಗಿಯವರಿಗಿಂತ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದನ್ನು ನಾವು ಮರೆಯಬಾರದು.  ಈಗಾಗಲೆ ಆರ್ .ಟಿ.ಇ.ಯಿಂದ ಅನಧಿಕೃತವಾಗಿ ಖಾಸಗೀಕರಣ ಆರಂಭವಾಗಿದೆ ಇದು ಪರೋಕ್ಷವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಗೆ ಕಾರಣವಾಗಬಹುದು ಪ್ರಾಥಮಿಕ ಹಂತಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣ ಮಾಡುವ ನಿಯಮವು ಸಹ ಗುಣಮಟ್ಟ ಕಡಿಮೆಯಾಗಲು ಕಾರಣವಾಗಬಹುದು  ಈ ನಿಟ್ಟಿನಲ್ಲಿ ನೀತಿ ಆಯೋಗವು ಕಾರ್ಯಸಾಧುವಾದ ಸಲಹೆಗಳನ್ನು ನೀಡಿ ಶಿಕ್ಷಣದ ಅಭಿವೃದ್ಧಿಗೆ ಸಲಹೆ ನೀಡಬೇಕೇ ವಿನಹ  ಶಾಲೆಗಳ ಖಾಸಗೀಕರಣ ಮಾಡಿ ಕಾರ್ಪೊರೇಟ್ ವಲಯದ ತೃಪ್ತಿ ಪಡಿಸಿ ಶಿಕ್ಷಣ ಕೇವಲ ಉಳ್ಳವರ ಆಸ್ತಿಯಾಗಲು ಬಿಡಬಾರದು

about physically challenged persons


about physically challenged persons


Recently railway department ordered to reserve lower berth’s to physically challenged persons. Really we welcome this decision its commendable job by central government it shows the government is running according to directive principles of state policy
I’m recent days all public buildings and places are accessible to these kind of people  and also measures are take to make all railway stations as physically challenged persons friendly but some state governments are not responding problems of these people  like reservation ,and promotion in jobs according to disabilities persons act each and every governments should work for these kind of persons then only we may talk about real inclusive growth.
C.g.venkateshwara
Gowribidanur
Bangalore
Karnataka
561208
Phone 9900925529

ವಿಶ್ವ ಜನಸಂಖ್ಯಾದಿನ



world population day


ಇಂದು ವಿಶ್ವ ಜನಸಂಖ್ಯಾ ದಿನ ತನ್ನಿಮಿತ್ತ ನಾನು ಬರೆದ ಲೇಖನ
ವಿಶ್ವ ಭೂಪಟದಲ್ಲಿ ಭಾರತದ ಜನಸಂಖ್ಯೆ
ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಟಿ ಆರ್ ಮಾಲ್ಥಾಸ್ ರವರ ಹೇಳಿಕೆಯಂತೆ ಪ್ರಪಂಚದ ಜನಸಂಖ್ಯೆಯು ಗುಣಾಕಾರದಲ್ಲಿ ಬೆಳೆಯುತ್ತಿದ್ದರೆ ಸಂಪನ್ಮೂಲಗಳು ಸಂಕಲನ ರೂಪದಲ್ಲಿ ಬೆಳೆಯುತ್ತಿವೆ ಅದಕ್ಕೆ ಪ್ರಸ್ತುತ ನಮ್ಮ ಪ್ರಪಂಚದ ಜನಸಂಖ್ಯೆಯು ೭೫೦ ಕೋಟಿ ತಲುಪಿದ್ದು ೨೦೩೦ಕ್ಕೆ ೮೫೦ ಕೋಟಿ ತಲುಪುತ್ತಿರುವುದೇ ಸಾಕ್ಷಿ .
ಕಳೆದ ೧೭ವರ್ಷಗಳಿಂದ ಪ್ರತಿ ವರ್ಷವೂ ಜೂನ್ ೧೧ ರಂದು ವಿಶ್ವಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಆದರೂ ಬಹುತೇಕ ಜನರಿಗೆ ಈ ಜನಸಂಖ್ಯಾ ದಿನದ ಮಹತ್ವ ಮತ್ತು ಅದರ ಆಶೊತ್ತರಗಳನ್ನು ಅರಿಯದೇ ಹೋಗಿರುವುದು ದುರದೃಷ್ಟಕರ.
ಜಗತ್ತಿನ ಜನಸಂಖ್ಯೆ ಕ್ಷಣ ಕ್ಷಣವೂ ಹೆಚ್ಚುತ್ತಲೇಇದೆ ಇದು ಹಲವಾರು ಸಮಸ್ಯೆಗಳ ಮೂಲವಾಗಿದೆ . “ಸುರಕ್ಷಿತ ಮತ್ತು ಸ್ವಯಂಪ್ರೇರಿತವಾಗಿ ಕುಟುಂಬ ಯೋಜನೆ ಒಂದು ಮಾನವ ಹಕ್ಕು, ಇದು ಲಿಂಗಸಮಾನತೆ ಮತ್ತು ಮಹಿಳಾ ಸಬಲೀಕರಣದಲ್ಲಿಪ್ರಮುಖ ಅಂಶ ಹಾಗೂ ಬಡತನವನ್ನು ನಿರ್ಮೂಲನೆ ಮಾಡಲು ನಮಗಿರುವ ಅಸ್ತ್ರ” ಎಂದು ವೀಶ್ವ ಸಂಸ್ಥೆ ಘೋಷಣೆ ಮಾಡಿ ವರ್ಷಗಳೇ ಕಳೆದರೂ ನಿರೀಕ್ಷಿತ ಬದಲಾವಣೆ ಆಗಿಲ್ಲ ಇದನ್ನು ಮನಗಂಡು ಈ ವರ್ಷವೂ ವಿಶ್ವಸಂಸ್ಥೆಯ ಜನಸಂಖ್ಯೆ ದಿನದ ದ್ಯೇಯವಾಕ್ಯವಾಗಿ “ಕುಟುಂಬ ಯೋಜನೆ, ಜನರ ಸಬಲೀಕರಣ,ರಾಷ್ಟ್ರಗಳ ಅಭಿವೃದ್ಧಿ”(family planning empowering people, developing nations) ಎಂದು ಆಯ್ಕೆ ಮಾಡಿಕೊಂಡಿದೆ .
ಈಗಿನ ಆಧುನಿಕತೆಯ ಕಾಲದಲ್ಲಿ ನಾವೆಷ್ಟೆ ತಿಳುವಳಿಕೆ  ಹೊಂದಿದ್ದರೂ ಕುಟುಂಬ ಕಲ್ಯಾಣ ,ನಿರೋಧ್ ,ವಂಕಿ ಮುಂತಾದವುಗಳ ಬಗ್ಗೆ ಮಾತನಾಡುವಾಗ ಮುಜುಗರ ಅನುಭವಿಸುತ್ತಿರುವ ಉದಾಹರಣೆಗಳು ನಮ್ಮ ಮುಂದಿರುವಾಗ ಇನ್ನೂ ಅನಕ್ಷರಸ್ಥ ಜನರ ಪಾಡು ನೀವೆ ಊಹಿಸಿ.
ಕುಟುಂಬ ಯೋಜನೆಯು‌ ಜನರ ಸಬಲೀಕರಣ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿರುವುದು ಕೆಲ ಮುಂದುವರಿದ ದೇಶಗಳ ನೋಡಿದರೆ ನಮಗೆ ಅರಿವಾಗುತ್ತದೆ.
ಒಂದು ಕಾಲದಲ್ಲಿ ಜನಸಂಖ್ಯೆಯು ಆ ದೇಶದ ಎಲ್ಲಾ ಸಮಸಗಳಿಗೆ ಕಾರಣವೆಂದು ತಿಳಿಯಲಾಗಿತ್ತು  ಅದರಲ್ಲಿ ನಿರುದ್ಯೋಗವು ಒಂದು ಆದರೆ ಇಂದಿನ ಆಟೋಮೇಷನ್ ಯುಗದಲ್ಲಿ ಮತ್ತು ಕೃತಕ ಬುದ್ಧಿಮತ್ತೆ (artificial intelligence) ಪರಿಣಾಮವಾಗಿ  ನಿರುದ್ಯೋಗವು ಸೃಷ್ಟಿ ಆಗಿರುವುದು ಕಂಡುಬರುತ್ತದೆ
ಆದ್ದರಿಂದ ಜನಸಂಖ್ಯೆಯನ್ನು ಮಾನವ ಸಂಪನ್ಮೂಲ ಆಗಿ ಪರಿವರ್ತನೆ ಮಾಡಿದರೆ ಬಹುತೇಕ ಸಮಸ್ಯೆಗಳನ್ನು ಪರಿಹರಿಸಬಹುದು .ನಮ್ಮ ಪ್ರಸ್ತುತ ಪ್ರದಾನ ಮಂತ್ರಿಗಳಾದ ಮೋದೀಜಿಯವರು ಹೇಳುವಂತೆ ನಮ್ಮ ದೇಶದ ೧೨೭ ಕೋಟಿ ಜನಸಂಖ್ಯೆಯು ನಮ್ಮ ಶಕ್ತಿ  ಈ ಶಕ್ತಿಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಇಂದಿನ ಸಮಾಜದಲ್ಲಿ ಇರುವ ಕೆಲ ಸಮಸ್ಯೆಗಳನ್ನು ಬಗೆಹರಿಸಲ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದರೆ ನಮ್ಮ ದೇಶದ ಜನಸಂಖ್ಯೆಯು ಶಾಪವಾಗುವ ಬದಲಿಗೆ ವರವಾಗುವುದರಲ್ಲಿ ಸಂದೆಹವಿಲ್ಲ .
ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು
೯೯೦೦೯೨೫೫೨೯

ಹೋರಾಟದ ಬದುಕು(ಕವನ


ಹೋರಾಟದ ಬದುಕು(ಕವನ)


ಹೋರಾಟದ ಬದುಕು
ಕಷ್ಟಗಳೆಂದು ದಿಕ್ಕೆಟ್ಟು ಓಡದಿರುನಮನ
ದಿಟ್ಟತನದಲಿ ನಡೆ ಮುಂದೆ ನೀನು.
ನಿನ್ನ ಬಲ ನೀ ತಿಳಿ ದು
ಮುನ್ನ ನಡೆ ಎಡೆಬಿಡದೆ
ಹುಡುಕುವುದು ಕಷ್ಟ ನೀ ಎಲ್ಲೆಂದು
ಇಟ್ಟಮುಂದಡಿ ಇಡದಿರು ಹಿಂದಕ್ಕೆ
ಅಡಿಗಡಿಗೆ ಒಳ್ಲೆಯದಾಗುವುದು
ಅವಕಾಶ ಓದಗಿ ಬಂದಾಗ ಸಾವಕಾಶಿಸದಿರು
ಸಾಗು ಗುರಿಯೆಡೆಗೆ
ಅಂಜದಿರು ಅಳುಕದಿರು
ಸಿಗಲಿಲ್ಲ ಜಯ ಎಲ್ಲರಿಗೂ ಸುಲಭದಿ
ಎದುರಿಸು ಕಷ್ಟವ ಬಲು ಮುದದಿ
ಆಗ ಮುಂದೆ ಬರುವೆ ನೀ ಜೀವನದಿ
ಆನೆಗೂ ಅಂತ್ಯ ತಪ್ಪಿಲ್ಲ
ಇನ್ನು ನಿನ್ನ ಇರವಿಕೆಗೆ ಖಾತ್ರಿಯಿಲ್ಲ
ಪರೋಪಕಾರಿಯಾಗು ಸಾವು ಬರುವುದರೊಳಗೆ
ಸಂಘರ್ಷ ನಿಂತಿಲ್ಲ ಜೀವನದಿ
ಬದುಕು ಒಳಿತು ಕೆಡುಕುಗಳ ಮಹಾನದಿ
ಸಾಗಬೇಕು ನೀನು ನಗುನಗುತಾ
ಹೋರಾಟ ಸಾಗಲಿ ಅನವರತ
,ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಅಹಮದಾಬಾದ್ ವಿಶ್ವ ಪರಂಪರೆ ನಗರ





world heritage city ahamadabad


ಅಹಮದಾಬಾದ್ ನಗರವನ್ನು ವಿಶ್ವ ಪರಂಪರೆಯ ನಗರಗಳ ಪಟ್ಟಿಯಲ್ಲಿ ಸೇರಿಸಿ ಅಧಿಸೂಚನೆಯನ್ನು  ಹೊರಡಿಸಿರುವದು ಭಾರತೀಯರಾದ ನಮಗೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ .ಈ ರೀತಿಯ ಗೌರವ ಪಡೆದ ಭಾರತದ ಪ್ರಥಮ ನಗರ ಅಹಮದಾಬಾದ್ ಆಗಲಿದೆ ಇದು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಮತ್ತೊಂದು ಮಜಲಾಗಲಿದೆ. ಇಂತಹ ಇನ್ನೂ ಅನೇಕ ನಗರಗಳು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು ನಮ್ಮ ಪರಂಪರೆಯನ್ನು ವಿಶ್ವ ಕ್ಕ ತಿಳಿಸಲು ಸಹಾಕವಾಗಲೆಂದು ಭಾರತೀಯರಾದ ನಾವೆಲ್ಲರೂ ಆಶಿಸೋಣ
ಸಿ.ಜಿ. ವೆಂಕಟೇಶ್ವರ
ಗೌರಿಬಿದನೂರು