12 March 2024

ನೊಂದವರ ಪಾಲಿನ ದೇವರು ನೂರುನ್ನೀಸಾ*

 


*ನೊಂದವರ ಪಾಲಿನ ದೇವರು

ನೂರುನ್ನೀಸಾ*


ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು| 

ನ್ಯಾಯಯುತ ತೀರ್ಪು ನೀಡುವ

ಮೂಲಕ ನೊಂದವರ ಪಾಲಿಗೆ ಆಗಿದ್ದಾರೆ ದೇವರು||


ಇವರು ಹಸನ್ಮುಖಿ ಸರಳ ಸಜ್ಜನ ನ್ಯಾಯಾಧೀಶರು|

ಇವರ ಕಣ್ಣಲಿ ಎಲ್ಲರ ಸಮಾನರೆ

ಬೇಧ ಮಾಡುವುದಿಲ್ಲ ಅವರು||


ಕಾನೂನುಗಳು ನಲಿದಾಡುತ್ತವೆ ಇವರ ನಾಲಿಗೆಯ ಮೇಲೆ|

 ಇವರಿಗೆ   ಕೃತಜ್ಞತೆ ಸಲ್ಲಿಸುತ್ತಿಹರು ನೂರಾರು ಜನ ಬರೆದು ಓಲೆ||


ಇವರು ನಮ್ಮಯ ಹೆಮ್ಮೆಯ ನ್ಯಾಯಾಧೀಶರು ನೂರುನ್ನಿಸಾ|

ಇವರಿಗೆ ಚಪ್ಪಾಳೆ ತಟ್ಟಿ ಬಿಡಿ

ಸುಮ್ಮನೆ ಯಾಕೆ ಎಣಿಸುವೆ ಮೀನಾ ಮೇಷ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು




No comments: