02 October 2022

ಸತ್ಯವಂತ ...

 


ಸತ್ಯವಂತ? 

ನ್ಯಾನೋ ಕಥೆ 


"ಸದಾ ನಾವು ಸತ್ಯವಂತರಾಗಿರಬೇಕು. ಸುಳ್ಳು ಹೇಳಲೇಬಾರದು.ಸತ್ಯವೇ ನಮ್ಮ ತಂದೆ ತಾಯಿ ಸತ್ಯವಾಕ್ಯಕ್ಕೆ ಮೆಚ್ಚಿ ನಡೆದರೆ ಆ ಪರಮಾತ್ಮ ಮೆಚ್ಚುವುದಿಲ್ಲ. ಗಾಂಧೀಜಿಯವರಂತೆ ಸತ್ಯಾಗ್ರಹ ನಮ್ಮ ಅಸ್ತ್ರವಾಗಬೇಕು" ಹೀಗೆ ಸಮಾರಂಭದಲ್ಲಿ ಮಕ್ಕಳಿಗೆ ಭಾಷಣ ಮಾಡುತ್ತಿದ್ದ ತನ್ನ ತಂದೆಯ ಮಾತು ಕೇಳಿದ ಮಗಳಿಗೆ ಸಾಲಗಾರರು ಮನೆಯ ಮುಂದೆ ಬಂದು ಕೇಳಿದಾಗ "ಅಪ್ಪ ಮನೇಲಿ ಇಲ್ಲ ಅಂತ ಹೇಳು" ಎಂದು  ಹೇಳಿದ್ದು  ನೆನಪಾಯಿತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


No comments: