26 January 2022

ನಮ್ಮ ಗಣ ತಂತ್ರ ವ್ಯವಸ್ಥೆಯನ್ನು ಬಲಪಡಿಸೋಣ. ಲೇಖನ


 *ಭಾರತದ ೭೪ ನೇ ಗಣರಾಜ್ಯೋತ್ಸವದ ಶುಭಾಶಯಗಳು*💐🌹🌷.


ಆತ್ಮೀಯರೇ...


ನಮ್ಮದು ಪ್ರಪಂಚದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ಗಣತಂತ್ರ ಎಂಬುದಕ್ಕೆ ಭಾರತೀಯರಾದ ನಾವು ಹೆಮ್ಮೆ ಪಡೋಣ. 

ವಿವಿಧ ಭಾಷೆ , ಧರ್ಮ ,ಸಂಸ್ಕೃತಿ ಪರಂಪರೆಗಳನ್ನು ಪ್ರೊತ್ಸಾಹಿಸುತ್ತಾ ಬೆಳೆಸುತ್ತಾ ,ಬೆಳೆಯುತ್ತಾ ಬಂದಿರುವ ನಮ್ಮ ಗಣತಂತ್ರವನ್ನು  ನೋಡಿ ಜಗತ್ತು ಬೆರಗಾಗಿದೆ. 


ಫೆಡರಲ್ ಮತ್ತು ಯುನಿಟರಿ ಎರಡೂ ಸರ್ಕಾರಗಳ ಒಳ್ಳೆಯ ಅಂಶಗಳನ್ನು ಹದವಾಗಿ ಬೆರೆಸಿ ಆಡಳಿತಕ್ಕೆ ಸಜ್ಜುಗೊಳಿಸಿದ ಸಂವಿಧಾನಕಾರರ ಚಾಕಚಕ್ಯತೆ ಮೆಚ್ಚಲೇಬೇಕು. 

ಕೇಂದ್ರ ಮತ್ತು ರಾಜ್ಯಸರ್ಕಾರಗಳ ಅಧಿಕಾರಗಳನ್ನು ಒಕ್ಕೂಟ ವ್ಯವಸ್ಥೆಯ ಮಾರ್ಗಸೂಚಿಯಾಗಿ ಹಂಚಲಾಗಿದೆ .ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ,ಸಮವರ್ತಿ ಪಟ್ಟಿ ಹೀಗೆ ಪಟ್ಟಿ ಮಾಡಿ ನಮ್ಮ ಆಡಳಿತಕ್ಕೆ ದಿಕ್ಸೂಚಿ ನೀಡಲಾಗಿದೆ. ಅದರೂ ಕೆಲವೊಮ್ಮೆ ವಿತಂಡವಾದ , ರಾಜಕೀಯ ಮೇಲಾಟ ಮುಂತಾದ ಕಾರಣದಿಂದಾಗಿ ಕೇಂದ್ರ ಮತ್ತು ಸ್ಥಳೀಯ ಸರ್ಕಾರಗಳ ನಡುವೆ ತಿಕ್ಕಾಟ ಉಂಟಾಗಿ ನ್ಯಾಯಾಲಯವು ಮಧ್ಯ ಪ್ರವೇಶಿಸಿ ಸರಿಪಡಿಸಿರುವುದನ್ನು ಕಾಣುತ್ತೇವೆ.


ಇತ್ತೀಚಿನ ದಿನಗಳಲ್ಲಿ ಅನವಶ್ಯಕವಾಗಿ ಪ್ರತ್ಯೇಕವಾದ, ಸಂಕುಚಿತ ಮನೋಭಾವ ಬೆಳೆಸುವುದು, ಜನರಲ್ಲಿ ಪರಸ್ಪರ ದ್ವೇಷದ ಬಾವನೆಗಳ ಕೆರಳಿಸುವುದನ್ನು  ಅಲ್ಲಲ್ಲಿ ಕಾಣುತ್ತಿರುವುದು ದುರದೃಷ್ಟಕರ .ನಮ್ಮೆಲ್ಲ ವೈಯಕ್ತಿಕ ಹಿತಾಸಕ್ತಿಗಿಂತ" ಮಾತೆಯೇ ಮೇಲು" ಎಂಬ ಭಾವನಾತ್ಮಕ ಅಂಶ ನಮ್ಮನ್ನು ಬೆಸೆಯಬೇಕಿದೆ .ಇಲ್ಲದಿದ್ದರೆ ನಮ್ಮ ದೇಶ ಈಗ ಗಳಿಸಿರುವ ಹೆಸರಿಗೆ ಮಸಿ ಬಳಿಯಲು ವಿದೇಶಗಳಲ್ಲಿ ಕೆಲವು ಕಾದು ಕುಳಿತಿವೆ.  ಭಾರತೀಯರಾದ ನಾವು ಇದಕ್ಕೆ ಆಸ್ಪದ ನೀಡಬಾರದು  ೭೩ ನೇ ಗಣರಾಜ್ಯೋತ್ಸವ ಅಚರಿಸುವ ಈ ಶುಭಸಂದರ್ಭದಲ್ಲಿ ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ ನಮ್ಮ ಭರತಖಂಡ ನಮಗೆ ಸ್ವರ್ಗಕ್ಕಿಂತಲೂ ಮಿಗಿಲು ಭಾರತಮಾತೆಗೆ ಸದಾ ನಮಿಸುತ್ತಾ ಒಗ್ಗಟ್ಟಾಗಿ ಬಾಳೋಣ. ನಮ್ಮ ಗಣತಂತ್ರವನ್ನು ಬಲಪಡಿಸೋಣ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

No comments: